ಈ ಮಧ್ಯೆ, ಸಂವಿಧಾನದ ಆಶಯಗಳ ಕುರಿತು ಸುದೀರ್ಘವಾಗಿ ಮಾತನಾಡಿದ ಸಚಿವರು, ಮಹಾತ್ಮ ಗಾಂಧೀಜಿ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ, ಅವರು ಮಾತನಾಡದ ವಿಷಯವೇ ಇಲ್ಲ, ಆದರೆ ಹಳ್ಳಿಯ ಜನ ಎರಡನೇ ದರ್ಜೆ ನಾಗರಿಕರಂತೆ ಜೀವನ ನಡೆಸುವ ಭಾವನೆ ಬರುತ್ತಿದ್ದು, ಇದು ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂದರು.