ನಗರದಲ್ಲಿ ಶುಕ್ರವಾರಸುದ್ದಿಗಾರರ ಜತೆ ಮಾತನಾಡಿದಅವರು, ‘ಮಂಗಳೂರು ಘಟನೆಯ ಎಷ್ಟು ವೀಡಿಯೊಬಿಡುಗಡೆ ಮಾಡಿದರೂ ಸತ್ಯ ಬದಲಾಗುವುದಿಲ್ಲ. ಅನವಶ್ಯಕವಾಗಿ ಬಿಜೆಪಿಸರ್ಕಾರದಮೇಲೆ ಆರೋಪ ಮಾಡುತ್ತಿದ್ದಾರೆ. ಗಲಭೆಯ ದಿನ ಗೂಂಡಾಗಳು ಮೂಟೆಗಟ್ಟಲೆ ಕಲ್ಲುಗಳನ್ನು ವ್ಯಾನ್, ಲಗೇಜ್ ಆಟೊಗಳಲ್ಲಿ ತುಂಬಿಕೊಂಡು ಬಂದು ಗಲಭೆ ನಡೆಸಿದ್ದಾರೆಎಂಬ ವಾಸ್ತವಎಲ್ಲ ವಾಹಿನಿಗಳು, ಪತ್ರಿಕೆಗಳಲ್ಲಿ ಪ್ರಸಾರವಾಗಿದೆ. ಸತ್ಯ ಕುಮಾರಸ್ವಾಮಿಗೆ ಬೇಕಿಲ್ಲ. ಈ ರಾಜ್ಯದ ಜನರಿಗೆ ನಂಬಿಕೆ ಇದ್ದರೆ ಸಾಕು’ಎಂದು ತಿರುಗೇಟು ನೀಡಿದರು.