ಜತೆಗೆ, ಕೆ.ನಿಡುಗಣಿ ಭೂಮಿಯ ಅಭಿವೃದ್ಧಿಗೆ ಮುಂದಾಗಿದ್ದ ಉದ್ಯಮಿ ಹಾಗೂ ಮರಗಳ ಹನನ ಮಾಡಿದ್ದ ವ್ಯಕ್ತಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 808 ಮರ ಕಡಿಯಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್ ಅನುಮತಿ ನೀಡಿದ್ದರು. ಈ ಪ್ರಕರಣದಲ್ಲಿ ಅವರನ್ನುಜೂನ್ 14ರಂದು ಅಮಾನತು ಮಾಡಲಾಗಿದೆ.