ಮಂಗಳೂರು ವಿಮಾನ ನಿಲ್ದಾಣದಲ್ಲಿ ಇದೇ 20ರಂದು ಬಾಂಬ್ ಪತ್ತೆಯಾಗಿತ್ತು. ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಶಂಕಿತನ ಚಹರೆಯ ಜಾಡು ಹಿಡಿದು ತನಿಖೆ ತೀವ್ರಗೊಳಿಸಿದ್ದ ಪೊಲೀಸರು, ಆದಿತ್ಯನ ನೆಲೆಸಿದ್ದ ಉಡುಪಿಯ ಮನೆಯನ್ನು ಶೋಧಿಸಿದ್ದರು. ಮನೆಯಲ್ಲಿದ್ದವರನ್ನು ವಿಚಾರಣೆ ಕೂಡಾ ಮಾಡಿದ್ದರು. ಈ ಮಧ್ಯೆ, ಆತ ಶರಣಾಗಿದ್ದಾನೆ.