ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಲಕ್ಷದ್ವೀಪದಿಂದ ಬಂದ ಕಾರ್ಮಿಕರು

Last Updated 28 ಮೇ 2020, 7:10 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್ ಪರಿಣಾಮ ಲಕ್ಷದ್ವೀಪದಲ್ಲಿ ಬಾಕಿಯಾಗಿದ್ದ 19 ಕಾರ್ಮಿಕರನ್ನು ಹೊತ್ತುತಂದ ನೌಕೆ ಗುರುವಾರ ಇಲ್ಲಿನ ಬಂದರು ಜೆಟ್ಟಿಗೆ ಬಂದಿಳಿಯಿತು.

ಕಾರ್ಮಿಕರೆಲ್ಲರೂ ಮಂಗಳೂರಿನ ನಿವಾಸಿಗಳಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 19 ಮಂದಿ ವಿವಿಧ ಉದ್ಯೋಗಗಳನ್ನು ಅರಸಿ ಲಕ್ಷದೀಪಕ್ಕೆ ಈ ಹಿಂದೆ ತೆರಳಿದ್ದು, ಲಾಕ್‌ಡೌನ್ ಕಾರಣ ಬಾಕಿಯಾಗಿದ್ದರು. ಅವರನ್ನು ಕರೆತರಲು ಸರ್ಕಾರ ಈ ವಿಶೇಷ ನೌಕೆಯ ವ್ಯವಸ್ಥೆ ಮಾಡಿತ್ತು.

ಜೆಟ್ಟಿಯಿಂದ ಸುಮಾರು 4 ಕಿಮೀ ದೂರದ ಸಮುದ್ರದ ಗಡಿಯಂಚಿಗೆ ಬಂದ ನೌಕೆಯನ್ನು ಪೈಲೆಟ್ ಹುಸೈನಬ್ಬ ಬಂದರಿಗೆ ತಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ 19 ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದರು.

ಊರು ಸೇರಿದ ಕಾರ್ಮಿಕರು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT