<p><strong>ಹುಣಸಗಿ</strong>: ವಲಸೆ ಕಾರ್ಮಿಕರಿಗೂ ಉದ್ಯೋಗ ಖಾತ್ರಿ ಕೆಲಸ ನೀಡುವಂತಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ನಿತ್ಯ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ.</p>.<p>‘ಸಂಕಷ್ಟದ ವೇಳೆ ಸರ್ಕಾರದ ಯೋಜನೆ ನಮ್ಮ ಕೈ ಹಿಡಿದಿದೆ’ ಎಂದು ಶ್ರೀನಿವಾಸಪುರ ಗ್ರಾಮದ ಕಾರ್ಮಿಕರಾದ ಶಂಕರಗೌಡ ಪಾಟೀಲ, ಬಸಮ್ಮ ಬಡಿಗೇರ ಕಾರ್ಮಿಕರು ತಿಳಿಸಿದರು.</p>.<p>ಹುಣಸಗಿ ತಾಲ್ಲೂಕಿಗೆ 19 ಗ್ರಾಮ ಪಂಚಾಯಿತಿಗಳು ಹಾಗೂ 78 ಗ್ರಾಮಗಳು ಮತ್ತು 30ಕ್ಕೂ ಹೆಚ್ಚು ತಾಂಡಾಗಳು ಒಳಪಡುತ್ತವೆ. ಶೇ 40ಕ್ಕೂ ಹೆಚ್ಚು ಗ್ರಾಮಗಳು ಮಳೆಯಾಶ್ರಿತ ಬಿತ್ತನೆಯ ಜಮೀನು ಹೊಂದಿವೆ.</p>.<p>ತಾಲ್ಲೂಕಿನಲ್ಲಿನ 6,112 ಜನ ನೋಂದಾಯಿತ ಕಾರ್ಮಿಕರಿದ್ದಾರೆ. ಅಲ್ಲದೆ ಈ ಬಾರಿ ಹೊಸದಾಗಿ 2,549 ಜನರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವರೆಲ್ಲರಿಗೂ ಕೆಲಸ ನೀಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ತಿಳಿಸಿದರು.</p>.<p>ಜೂನ್ ಮೂರನೇ ವಾರದವರೆಗೂ 1,42,986 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಬಹುತೇಕ ಬದು ನಿರ್ಮಾಣ, ಕೆರೆ ಹೂಳು ಎತ್ತುವುದು, ಬಸಿ ಕಾಲುವೆಗಳ ನಿರ್ಮಾಣ ಸೇರಿದಂತೆ ರೈತರಿಗೆ ಸಾಮೂಹಿಕವಾಗಿ ನೆರವಾಗುವ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1 ಸಾವಿರಕ್ಕೂ ಹೆಚ್ಚು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ವಿವರಿಸಿದರು.</p>.<p>ತಾಲ್ಲೂಕಿನ ವಜ್ಜಲ, ಜೋಗುಂಡಬಾವಿ, ರಾಜನಕೋಳೂರ, ಅರಕೇರಾ, ಕೋಳಿಹಾಳ ಮತ್ತಿತರ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ನಡಿದಿವೆ.</p>.<p>ತಾಲ್ಲೂಕಿನ ಜೋಗುಂಡಬಾವಿ ಗ್ರಾಮ ಪಂಚಾಯಿತಿಯಲ್ಲಿ ಜೂನ್ ಅಂತ್ಯದವರೆಗೂ 13,350 ಮಾನವ ದಿನಗಳನ್ನು ಸೃಜಿಸಲಾಗಿದ್ದು, 450 ರಿಂದ 500 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. 250ಕ್ಕೂ ಹೆಚ್ಚು ವಲಸೆ ಕುಟುಂಬಗಳಿಗೆ ಕೆಲಸ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪಗೌಡ ತಿಳಿಸಿದರು.</p>.<p>‘ಈ ಬಾರಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಎಲ್ಲ ಕಾರ್ಮಿಕರೂ ಕೆಲಸ ನಿರ್ವಹಿಸಿದ್ದು, ನನಗೆ ತೃಪ್ತಿ ತಂದಿದೆ’ ಎಂದು ಗ್ರಾಪಂ ಅಧ್ಯಕ್ಷ ಬಾಲನಗೌಡ ಪೊಲೀಸ್ ಪಾಟೀಲ ಹೇಳಿದರು.</p>.<p>‘ನಮ್ಮ ಗ್ರಾಮದಿಂದ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಆದರೆ, ಉದ್ಯೋಗ ಖಾತ್ರಿಯಡಿ ಕೆಲಸ ನೀಡುತ್ತಿದ್ದರಿಂದಾಗಿ ಇಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಕೂಲಿಯೂ ಸಕಾಲದಲ್ಲಿ ಪಾವತಿಯಾಗುತ್ತಿದೆ’ ಎಂದು ರಾಯನಗೋಳ ಗ್ರಾಮದ ಹನುಮಂತ ದೇಸಾಯಿ ಹಾಗೂ ಸಣ್ಣ ಚಾಪಿ ತಾಂಡಾದ ಬಾಲಚಂದ್ರ ತಿಳಿಸಿದರು.</p>.<p>ವಜ್ಜಲ ಗ್ರಾಮ ಪಂಚಾಯಿತಿಯ ಬಸಿಗಾಲುವೆ ಹಾಗೂ ಹೂಳು ತೆಗೆಯುವುದು, ಹಿರೇಹಳ್ಳದ ಸ್ವಚ್ಛತೆ ಮತ್ತು ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಹೇಳಿದರು.</p>.<p>ತಾಲ್ಲೂಕಿನ ಕೋಳಿಹಾಳ ಗ್ರಾಪಂ ವ್ಯಾಪ್ತಿಯ ಕೋಳಿಹಾಳ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 400 ಕಾರ್ಮಿಕರಿಗೆ ಕೆಲಸ ನೀಡಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಬಾಪುಗೌಡ ಚಟ್ಟರಕಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ವಲಸೆ ಕಾರ್ಮಿಕರಿಗೂ ಉದ್ಯೋಗ ಖಾತ್ರಿ ಕೆಲಸ ನೀಡುವಂತಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ನಿತ್ಯ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ.</p>.<p>‘ಸಂಕಷ್ಟದ ವೇಳೆ ಸರ್ಕಾರದ ಯೋಜನೆ ನಮ್ಮ ಕೈ ಹಿಡಿದಿದೆ’ ಎಂದು ಶ್ರೀನಿವಾಸಪುರ ಗ್ರಾಮದ ಕಾರ್ಮಿಕರಾದ ಶಂಕರಗೌಡ ಪಾಟೀಲ, ಬಸಮ್ಮ ಬಡಿಗೇರ ಕಾರ್ಮಿಕರು ತಿಳಿಸಿದರು.</p>.<p>ಹುಣಸಗಿ ತಾಲ್ಲೂಕಿಗೆ 19 ಗ್ರಾಮ ಪಂಚಾಯಿತಿಗಳು ಹಾಗೂ 78 ಗ್ರಾಮಗಳು ಮತ್ತು 30ಕ್ಕೂ ಹೆಚ್ಚು ತಾಂಡಾಗಳು ಒಳಪಡುತ್ತವೆ. ಶೇ 40ಕ್ಕೂ ಹೆಚ್ಚು ಗ್ರಾಮಗಳು ಮಳೆಯಾಶ್ರಿತ ಬಿತ್ತನೆಯ ಜಮೀನು ಹೊಂದಿವೆ.</p>.<p>ತಾಲ್ಲೂಕಿನಲ್ಲಿನ 6,112 ಜನ ನೋಂದಾಯಿತ ಕಾರ್ಮಿಕರಿದ್ದಾರೆ. ಅಲ್ಲದೆ ಈ ಬಾರಿ ಹೊಸದಾಗಿ 2,549 ಜನರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವರೆಲ್ಲರಿಗೂ ಕೆಲಸ ನೀಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ತಿಳಿಸಿದರು.</p>.<p>ಜೂನ್ ಮೂರನೇ ವಾರದವರೆಗೂ 1,42,986 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಬಹುತೇಕ ಬದು ನಿರ್ಮಾಣ, ಕೆರೆ ಹೂಳು ಎತ್ತುವುದು, ಬಸಿ ಕಾಲುವೆಗಳ ನಿರ್ಮಾಣ ಸೇರಿದಂತೆ ರೈತರಿಗೆ ಸಾಮೂಹಿಕವಾಗಿ ನೆರವಾಗುವ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1 ಸಾವಿರಕ್ಕೂ ಹೆಚ್ಚು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ವಿವರಿಸಿದರು.</p>.<p>ತಾಲ್ಲೂಕಿನ ವಜ್ಜಲ, ಜೋಗುಂಡಬಾವಿ, ರಾಜನಕೋಳೂರ, ಅರಕೇರಾ, ಕೋಳಿಹಾಳ ಮತ್ತಿತರ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ನಡಿದಿವೆ.</p>.<p>ತಾಲ್ಲೂಕಿನ ಜೋಗುಂಡಬಾವಿ ಗ್ರಾಮ ಪಂಚಾಯಿತಿಯಲ್ಲಿ ಜೂನ್ ಅಂತ್ಯದವರೆಗೂ 13,350 ಮಾನವ ದಿನಗಳನ್ನು ಸೃಜಿಸಲಾಗಿದ್ದು, 450 ರಿಂದ 500 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. 250ಕ್ಕೂ ಹೆಚ್ಚು ವಲಸೆ ಕುಟುಂಬಗಳಿಗೆ ಕೆಲಸ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪಗೌಡ ತಿಳಿಸಿದರು.</p>.<p>‘ಈ ಬಾರಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಎಲ್ಲ ಕಾರ್ಮಿಕರೂ ಕೆಲಸ ನಿರ್ವಹಿಸಿದ್ದು, ನನಗೆ ತೃಪ್ತಿ ತಂದಿದೆ’ ಎಂದು ಗ್ರಾಪಂ ಅಧ್ಯಕ್ಷ ಬಾಲನಗೌಡ ಪೊಲೀಸ್ ಪಾಟೀಲ ಹೇಳಿದರು.</p>.<p>‘ನಮ್ಮ ಗ್ರಾಮದಿಂದ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಆದರೆ, ಉದ್ಯೋಗ ಖಾತ್ರಿಯಡಿ ಕೆಲಸ ನೀಡುತ್ತಿದ್ದರಿಂದಾಗಿ ಇಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಕೂಲಿಯೂ ಸಕಾಲದಲ್ಲಿ ಪಾವತಿಯಾಗುತ್ತಿದೆ’ ಎಂದು ರಾಯನಗೋಳ ಗ್ರಾಮದ ಹನುಮಂತ ದೇಸಾಯಿ ಹಾಗೂ ಸಣ್ಣ ಚಾಪಿ ತಾಂಡಾದ ಬಾಲಚಂದ್ರ ತಿಳಿಸಿದರು.</p>.<p>ವಜ್ಜಲ ಗ್ರಾಮ ಪಂಚಾಯಿತಿಯ ಬಸಿಗಾಲುವೆ ಹಾಗೂ ಹೂಳು ತೆಗೆಯುವುದು, ಹಿರೇಹಳ್ಳದ ಸ್ವಚ್ಛತೆ ಮತ್ತು ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಹೇಳಿದರು.</p>.<p>ತಾಲ್ಲೂಕಿನ ಕೋಳಿಹಾಳ ಗ್ರಾಪಂ ವ್ಯಾಪ್ತಿಯ ಕೋಳಿಹಾಳ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 400 ಕಾರ್ಮಿಕರಿಗೆ ಕೆಲಸ ನೀಡಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಬಾಪುಗೌಡ ಚಟ್ಟರಕಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>