‘ಕೆಲವು ಶಾಸಕರು ಜಗದೀಶ ಶೆಟ್ಟರ್ ಜತೆ ನಡೆಸಿರುವುದು ರಹಸ್ಯ ಸಭೆಯಲ್ಲ. ಶೆಟ್ಟರ್ ಮುಖ್ಯಮಂತ್ರಿ ಆಗಿದ್ದವರು. ಅವರೊಂದಿಗೆ ಮಾತುಕತೆ ನಡೆಸಿದರೆ ತಪ್ಪೇನು? ಸಿಎಂ ಯಡಿಯೂರಪ್ಪ ವಿರುದ್ದ ಯಾರೂ ಸಭೆ ನಡೆಸಿಲ್ಲ. ನಾಯಕತ್ವದ ಬಗ್ಗೆ ಯಾರಿಗೂ ಅಪಸ್ವರವಿಲ್ಲ. ಹಾಗೆಯೇ ನಮ್ಮ ನಾಯಕರ ಮನೆಗೆ ಭೇಟಿ ನೀಡಿರುವುದರಲ್ಲಿ ಯಾವ ತಪ್ಪಿಲ್ಲ’ ಎಂದು ಅವರು ಹೇಳಿದ್ದಾರೆ.