ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ರೇಣುಕಾಚಾರ್ಯ

ಶೆಟ್ಟರ್ ಮನೆಯಲ್ಲಿ ನಡೆದಿದ್ದು ರಹಸ್ಯ ಸಭೆಯಲ್ಲ ಎಂದ ಶಾಸಕ
Last Updated 18 ಫೆಬ್ರುವರಿ 2020, 7:17 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಸಿಗಬೇಕು. ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

‘ಕೆಲವು ಶಾಸಕರು ಜಗದೀಶ ಶೆಟ್ಟರ್ ಜತೆ ನಡೆಸಿರುವುದು ರಹಸ್ಯ ಸಭೆಯಲ್ಲ. ಶೆಟ್ಟರ್ ಮುಖ್ಯಮಂತ್ರಿ ಆಗಿದ್ದವರು. ಅವರೊಂದಿಗೆ ಮಾತುಕತೆ ನಡೆಸಿದರೆ ತಪ್ಪೇನು? ಸಿಎಂ ಯಡಿಯೂರಪ್ಪ ವಿರುದ್ದ ಯಾರೂ ಸಭೆ ನಡೆಸಿಲ್ಲ. ನಾಯಕತ್ವದ ಬಗ್ಗೆ ಯಾರಿಗೂ ಅಪಸ್ವರವಿಲ್ಲ. ಹಾಗೆಯೇ ನಮ್ಮ ನಾಯಕರ ಮನೆಗೆ ಭೇಟಿ ನೀಡಿರುವುದರಲ್ಲಿ ಯಾವ ತಪ್ಪಿಲ್ಲ’ ಎಂದು ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಶಾಸಕರ ಮತ ಅಸಿಂಧುವಾಗಿರುವುದು ಆಕಸ್ಮಿಕವಾಗಿರಬಹುದು. ಪಕ್ಷಕ್ಕೆ ದ್ರೋಹ ಮಾಡುವ ಕೆಲಸವನ್ನು ನಾವು ಯಾರೂ ಮಾಡುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT