ಜೆಡಿಎಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿರುವ ಎಚ್.ವಿಶ್ವನಾಥ್, ‘ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಎಚ್.ಡಿ.ದೇವೇಗೌಡ ಅವರಲ್ಲ. ಹುಣಸೂರು ಕ್ಷೇತ್ರದ ಜನ. ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಎಚ್.ಡಿ.ಕುಮಾರಸ್ವಾಮಿ ನನ್ನ ಮಾತಿಗೆ ಯಾವುದೇ ಮನ್ನಣೆ ಕೊಡಲಿಲ್ಲ. ಕನಿಷ್ಠ ನನ್ನ ಅಳಿಯನ ವರ್ಗಾವಣೆ ಮಾಡಿಸಲು ಆಗಲಿಲ್ಲ' ಎಂದರು.