‘ಮೈ ಶುಗರ್ ಕಾರ್ಖಾನೆಯಲ್ಲಿ ಸುಮಾರು 14,046 ರೈತರು ಷೇರುದಾರರಿದ್ದಾರೆ. ನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಈ ಕಾರ್ಖಾನೆಗಿದೆ. ವಾರ್ಷಿಕ 9,000 ಲಕ್ಷ ಟನ್ ಕಬ್ಬ ಅನ್ನು ಈ ಹಿಂದೆ ಕಾರ್ಖಾನೆ ಅರೆಯುತ್ತಿತ್ತು. ಅಲ್ಲದೆ, ಶೇ 20ರಿಂದ 30 ಷೇರು ಡಿವಿಟೆಂಡ್ ಅನ್ನು 18 ವರ್ಷಕ್ಕೂ ಹೆಚ್ಚು ಕಾಲ ನೀಡಿದೆ. 14ಕ್ಕೂ ಹೆಚ್ಚು ಫರ್ಮ್ಗಳು, ವಿದ್ಯಾಸಂಸ್ಥೆಗಳು, ರೈತ ಸಮುದಾಯ ಭವನಗಳನ್ನು ಹೊಂದಿರುವ ಕಾರ್ಖಾನೆ, ಮಂಡ್ಯ ಜಿಲ್ಲೆಯಲ್ಲಿ 207 ಎಕರೆಗಿಂತಲೂ ಹೆಚ್ಚು ಭೂಮಿ ಹೊಂದಿದೆ’ ಎಂದೂ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.