ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರ ಮಂಜಯ್ಯ ಚಾವಡಿ ಎಂಬುವವನೇ ಫೋಟೊ ತೆಗೆದುಕೊಂಡಿರುವ ವ್ಯಕ್ತಿ. ಮತಗಟ್ಟೆ ಕೇಂದ್ರಕ್ಕೆ ಮೊಬೈಲ್, ಕ್ಯಾಮೆರಾ ತೆಗೆದುಕೊಂಡು ಹೋಗಲು ನಿರ್ಬಂಧವಿದೆ. ಆದರೂ ಚುನಾವಣಾ ಸಿಬ್ಬಂದಿ ಕಣ್ತಪ್ಪಿಸಿ, ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ಕ್ರಮ ಸಂಖ್ಯೆ 1ರಲ್ಲಿರುವ ಅರುಣಕುಮಾರ ಗುತ್ತೂರ (ಪೂಜಾರ) ಎಂಬ ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತಿರುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.