ಪುಲ್ವಾಮ ದಾಳಿಗೆ ಇಂದು ಒಂದು ವರ್ಷ. ದಾಳಿಯಲ್ಲಿ ಮಂಡ್ಯದ ಯೋಧ ಎಚ್. ಗುರು ಅವರೂ ಪ್ರಾಣತ್ಯಾಗ ಮಾಡಿದ್ದರು. ಶುಕ್ರವಾರ ಕುಟುಂಬಸ್ಥರು ಪುಣ್ಯತಿಥಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗುರು ಅವರ ಪತ್ನಿ ಹೊರತುಪಡಿಸಿ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತಾಯಿ ಚಿಕ್ಕಹೊಳ್ಳಮ್ಮ, ‘ನಮ್ಮ ಜೊತೆಗೆ ಫೋನ್ ಸಂಪರ್ಕದಲ್ಲಿಯೂ ಸೊಸೆ ಇಲ್ಲ. ಅವರು ಫೋನ್ ಮಾಡಿದ್ದರೆ ನಾನು ಮಾತನಾಡುತ್ತಿದ್ದೆ. ನನಗೆ ಫೋನ್ ಮಾಡಲು ಬರುವುದಿಲ್ಲ. ಅವರು ಯಾಕೆ ದೂರವಾಗಿದ್ದಾರೋ ನನಗೆ ಗೊತ್ತಿಲ್ಲ’ ಎಂದು ಹೇಳಿದರು.