<p><strong>ಗೋಣಿಕೊಪ್ಪಲು (ಕೊಡಗು ಜಿಲ್ಲೆ):</strong> ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದರೂ ಮೌಲ್ಯಮಾಪಕರ ಯಡವಟ್ಟಿನಿಂದ ಅನುತ್ತೀರ್ಣಗೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮರು ಮೌಲ್ಯಮಾಪನದ ಬಳಿಕ ಆ ವಿದ್ಯಾರ್ಥಿನಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.</p>.<p>ಗೋಣಿಕೊಪ್ಪಲಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ.ಎ. ಶೀತಲ್ಗೆ ಫಲಿತಾಂಶ ಪ್ರಕಟಗೊಂಡಾಗ ಜೀವಶಾಸ್ತ್ರ ವಿಷಯದಲ್ಲಿ ಕೇವಲ 16 ಅಂಕಗಳು ಬಂದಿದ್ದವು. ಉನ್ನತ ಶ್ರೇಣಿ ನಿರೀಕ್ಷೆ ಮಾಡಿದ್ದ ವಿದ್ಯಾರ್ಥಿನಿಗೆ ಫಲಿತಾಂಶ ಆಘಾತ ತಂದಿತ್ತು.</p>.<p>ಉಳಿದಂತೆ ಇಂಗ್ಲಿಷ್ 87, ಹಿಂದಿಯಲ್ಲಿ 93, ಭೌತಶಾಸ್ತ್ರ 86, ರಸಾಯನಶಾಸ್ತ್ರ 88, ಗಣಿತದಲ್ಲಿ 98 ಅಂಕಗಳು ಲಭಿಸಿದ್ದವು.</p>.<p>ಶೀತಲ್, ಜೀವಶಾಸ್ತ್ರ ವಿಷಯದ ಉತ್ತರ ಪತ್ರಿಕೆಗೆ ಶುಲ್ಕ ಕಟ್ಟಿ ತರಿಸಿಕೊಂಡಿದ್ದರು. ಬಳಿಕ ಉಪನ್ಯಾಸಕ ಮಾರ್ಗದರ್ಶನದಂತೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>ಇದೀಗ ಜೀವಶಾಸ್ತ್ರದಲ್ಲಿ 16 ಅಂಕಕ್ಕೆ ಬದಲು 46 ಅಂಕಗಳು ಲಭಿಸಿವೆ. ಮೌಲ್ಯಮಾಪಕರು ಅಂಕಗಳನ್ನು ನಮೂದಿಸುವಾಗ 46ಕ್ಕೆ ಬದಲು 16 ಎಂದು ಉತ್ತರ ಪತ್ರಿಕೆ ಮುಖಪುಟದಲ್ಲಿ ಹಾಕಿದ್ದೇ ಈ ಪ್ರಮಾದಕ್ಕೆ ಕಾರಣವಾಗಿದೆ (ಆಂತರಿಕ ಅಂಕ ಸೇರಿ ಜೀವಶಾಸ್ತ್ರದಲ್ಲಿ 66 ಅಂಕ ಲಭಿಸಿದೆ). ಅಂಕಗಳು ಹೆಚ್ಚಾದ್ದರಿಂದ ಇದೀಗ ಒಟ್ಟು ಅಂಕ 528 ಆಗಿದ್ದು ವಿದ್ಯಾರ್ಥಿನಿಗೆ ಉನ್ನತ ಶ್ರೇಣಿ ಲಭಿಸಿದೆ.</p>.<p>‘ಫಲಿತಾಂಶ ಬಂದ ದಿನದಿಂದಲೂ ಮಗಳು ಊಟ ಮಾಡಿರಲಿಲ್ಲ. ಇದೀಗ ಸಂತೋಷವಾಗಿದೆ. ಆದರೆ, ಇಂತಹ ನಿರ್ಲಕ್ಷ್ಯದಿಂದ ಮೌಲ್ಯಮಾಪನ ಮಾಡುವ ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದುವಿದ್ಯಾರ್ಥಿನಿ ತಂದೆ ತಡಿಯಪ್ಪನ ಅರುಣ್ ಉತ್ತಯ್ಯ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು (ಕೊಡಗು ಜಿಲ್ಲೆ):</strong> ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದರೂ ಮೌಲ್ಯಮಾಪಕರ ಯಡವಟ್ಟಿನಿಂದ ಅನುತ್ತೀರ್ಣಗೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮರು ಮೌಲ್ಯಮಾಪನದ ಬಳಿಕ ಆ ವಿದ್ಯಾರ್ಥಿನಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.</p>.<p>ಗೋಣಿಕೊಪ್ಪಲಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ.ಎ. ಶೀತಲ್ಗೆ ಫಲಿತಾಂಶ ಪ್ರಕಟಗೊಂಡಾಗ ಜೀವಶಾಸ್ತ್ರ ವಿಷಯದಲ್ಲಿ ಕೇವಲ 16 ಅಂಕಗಳು ಬಂದಿದ್ದವು. ಉನ್ನತ ಶ್ರೇಣಿ ನಿರೀಕ್ಷೆ ಮಾಡಿದ್ದ ವಿದ್ಯಾರ್ಥಿನಿಗೆ ಫಲಿತಾಂಶ ಆಘಾತ ತಂದಿತ್ತು.</p>.<p>ಉಳಿದಂತೆ ಇಂಗ್ಲಿಷ್ 87, ಹಿಂದಿಯಲ್ಲಿ 93, ಭೌತಶಾಸ್ತ್ರ 86, ರಸಾಯನಶಾಸ್ತ್ರ 88, ಗಣಿತದಲ್ಲಿ 98 ಅಂಕಗಳು ಲಭಿಸಿದ್ದವು.</p>.<p>ಶೀತಲ್, ಜೀವಶಾಸ್ತ್ರ ವಿಷಯದ ಉತ್ತರ ಪತ್ರಿಕೆಗೆ ಶುಲ್ಕ ಕಟ್ಟಿ ತರಿಸಿಕೊಂಡಿದ್ದರು. ಬಳಿಕ ಉಪನ್ಯಾಸಕ ಮಾರ್ಗದರ್ಶನದಂತೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>ಇದೀಗ ಜೀವಶಾಸ್ತ್ರದಲ್ಲಿ 16 ಅಂಕಕ್ಕೆ ಬದಲು 46 ಅಂಕಗಳು ಲಭಿಸಿವೆ. ಮೌಲ್ಯಮಾಪಕರು ಅಂಕಗಳನ್ನು ನಮೂದಿಸುವಾಗ 46ಕ್ಕೆ ಬದಲು 16 ಎಂದು ಉತ್ತರ ಪತ್ರಿಕೆ ಮುಖಪುಟದಲ್ಲಿ ಹಾಕಿದ್ದೇ ಈ ಪ್ರಮಾದಕ್ಕೆ ಕಾರಣವಾಗಿದೆ (ಆಂತರಿಕ ಅಂಕ ಸೇರಿ ಜೀವಶಾಸ್ತ್ರದಲ್ಲಿ 66 ಅಂಕ ಲಭಿಸಿದೆ). ಅಂಕಗಳು ಹೆಚ್ಚಾದ್ದರಿಂದ ಇದೀಗ ಒಟ್ಟು ಅಂಕ 528 ಆಗಿದ್ದು ವಿದ್ಯಾರ್ಥಿನಿಗೆ ಉನ್ನತ ಶ್ರೇಣಿ ಲಭಿಸಿದೆ.</p>.<p>‘ಫಲಿತಾಂಶ ಬಂದ ದಿನದಿಂದಲೂ ಮಗಳು ಊಟ ಮಾಡಿರಲಿಲ್ಲ. ಇದೀಗ ಸಂತೋಷವಾಗಿದೆ. ಆದರೆ, ಇಂತಹ ನಿರ್ಲಕ್ಷ್ಯದಿಂದ ಮೌಲ್ಯಮಾಪನ ಮಾಡುವ ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದುವಿದ್ಯಾರ್ಥಿನಿ ತಂದೆ ತಡಿಯಪ್ಪನ ಅರುಣ್ ಉತ್ತಯ್ಯ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>