‘ಬೆಂಗಳೂರಿನಲ್ಲಿ 25 ದಿನಗಳ ಹಿಂದಿನ ಘಟನೆಯನ್ನು ನೆಪವಾಗಿ ಇಟ್ಟುಕೊಂಡು ಹಿಂದೂ ಮುಖಂಡರ ಹತ್ಯೆ ಸಂಚು ಬಯಲು ಎಂಬ ಹೊಸ ನಾಟಕ ಆರಂಭಿಸಿದ್ದಾರೆ. 800 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ, ಕಲ್ಲು ತೂರಾಟ ಮಾಡಲು ಯತ್ನಿಸಿದ್ದಾರೆ ಎಂಬ ಸಬೂಬು ಹೇಳುವ ಸರ್ಕಾರ ಅಂದಿನ ದಿನವೇ ಯಾಕೆ ದುಷ್ಟಶಕ್ತಿಗಳನ್ನು ಬಂಧಿಸಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಬಂಧಿತರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.