<p><strong>ಬೆಂಗಳೂರು: </strong>ಕೊರೊನಾ ಸೋಂಕಿನ ಬಗ್ಗೆ ರಾಜ್ಯ ಸರ್ಕಾರವು ಅಗತ್ಯ ಮಾಹಿತಿ ಮತ್ತು ಸುತ್ತೋಲೆಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂದು ಒತ್ತಾಯಿಸಿ ಟ್ವಿಟರ್ನಲ್ಲಿ ಅಭಿಯಾನ ನಡೆಯುತ್ತಿದೆ.</p>.<p>ಕನ್ನಡ ಗ್ರಾಹಕರ ಕೂಟವು ಗುರುವಾರದಿಂದ ಈ ಅಭಿಯಾನ ಆರಂಭಿಸಿದ್ದು, #ಕನ್ನಡದಲ್ಲಿ_ಮಾಹಿತಿಕೊಡಿ ಮತ್ತು #ServeInMyLanguage ಹ್ಯಾಶ್ಟ್ಯಾಗ್ಗಳು ಶುಕ್ರವಾರ ‘ಟಾಪ್ ಟ್ರೆಂಡಿಂಗ್’ನಲ್ಲಿದ್ದವು.</p>.<p>ಶುಕ್ರವಾರ ಸಂಜೆಯ ವೇಳೆಗೆ, ಕನ್ನಡ_ಮಾಹಿತಿ ಕೊಡಿ ಹ್ಯಾಶ್ಟ್ಯಾಗ್ ಅಡಿ ಏಳೂವರೆ ಸಾವಿರ, #ServeInMyLanguage ಹ್ಯಾಶ್ಟ್ಯಾಗ್ ಅಡಿ ಏಳು ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ.</p>.<p>‘ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ರೋಗಿಯ ವಿವರಗಳನ್ನು ಬಿಟ್ಟರೆ, ಯಾವುದೇ ಮುಖ್ಯವಾದ ಮಾಹಿತಿಯನ್ನು ಸರ್ಕಾರ ನೀಡುತ್ತಿಲ್ಲ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಓಡಾಡುವ ಬಗ್ಗೆ, ಬೇರೆ ಕಡೆಯಿಂದ ಬಂದರೆ ಕ್ವಾರಂಟೈನ್ ಆಗುವ ಕುರಿತು ಕನ್ನಡದಲ್ಲಿ ಸರಿಯಾಗಿ ಮಾಹಿತಿಯೇ ನೀಡುತ್ತಿಲ್ಲ. ಅದಕ್ಕೆ ಈ ಅಭಿಯಾನ ಆರಂಭಿಸಿದ್ದೇವೆ’ ಎಂದು ಕೂಟದ ಅರುಣ್ ಜಾವಗಲ್ ‘ಪ್ರಜಾವಾಣಿ’ ತಿಳಿಸಿದರು.</p>.<p>‘ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಹಿಂದಿ ಮತ್ತು ಇಂಗ್ಲಿಷ್ ಹೊರತು ಪಡಿಸಿದರೆ ಬೇರೆ ಯಾವುದೇ ಭಾಷೆಯಲ್ಲಿ ಮಾಹಿತಿ ನೀಡುವುದಿಲ್ಲ. ಕರ್ನಾಟಕ ಸರ್ಕಾರವೂ ಕನ್ನಡದಲ್ಲಿ ಮಾಹಿತಿ ನೀಡದಿದ್ದರೆ ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ.</p>.<p>‘ಈ ಕುರಿತು ಅಭಿಯಾನ ನಡೆಸುತ್ತೇವೆ ಎಂದು ಹೇಳುತ್ತಿದ್ದಂತೆ ನೂರಾರು ಜನ ಇದಕ್ಕೆ ಸ್ಪಂದಿಸಿದ್ದಾರೆ. ಟ್ವೀಟ್ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘#ServeInMyLanguage ಹ್ಯಾಶ್ಟ್ಯಾಗ್ ಅನ್ನು ಅಖಿಲ ಭಾರತ ಮಟ್ಟದಲ್ಲಿ ಬಳಸುತ್ತಿದ್ದೇವೆ. ಜನರಿಗೆ ಅವರ ಸ್ಥಳೀಯ ಭಾಷೆ ಅಥವಾ ಮಾತೃಭಾಷೆಯಡಿಯಲ್ಲಿ ಸೇವೆ ನೀಡಬೇಕು ಎಂದು ಸರ್ಕಾರಿ ಮತ್ತು ಖಾಸಗಿ ವಲಯವನ್ನು ಒತ್ತಾಯಿಸುತ್ತಾ ಬಂದಿದ್ದೇವೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೊರೊನಾ ಸೋಂಕಿನ ಬಗ್ಗೆ ರಾಜ್ಯ ಸರ್ಕಾರವು ಅಗತ್ಯ ಮಾಹಿತಿ ಮತ್ತು ಸುತ್ತೋಲೆಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂದು ಒತ್ತಾಯಿಸಿ ಟ್ವಿಟರ್ನಲ್ಲಿ ಅಭಿಯಾನ ನಡೆಯುತ್ತಿದೆ.</p>.<p>ಕನ್ನಡ ಗ್ರಾಹಕರ ಕೂಟವು ಗುರುವಾರದಿಂದ ಈ ಅಭಿಯಾನ ಆರಂಭಿಸಿದ್ದು, #ಕನ್ನಡದಲ್ಲಿ_ಮಾಹಿತಿಕೊಡಿ ಮತ್ತು #ServeInMyLanguage ಹ್ಯಾಶ್ಟ್ಯಾಗ್ಗಳು ಶುಕ್ರವಾರ ‘ಟಾಪ್ ಟ್ರೆಂಡಿಂಗ್’ನಲ್ಲಿದ್ದವು.</p>.<p>ಶುಕ್ರವಾರ ಸಂಜೆಯ ವೇಳೆಗೆ, ಕನ್ನಡ_ಮಾಹಿತಿ ಕೊಡಿ ಹ್ಯಾಶ್ಟ್ಯಾಗ್ ಅಡಿ ಏಳೂವರೆ ಸಾವಿರ, #ServeInMyLanguage ಹ್ಯಾಶ್ಟ್ಯಾಗ್ ಅಡಿ ಏಳು ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ.</p>.<p>‘ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ರೋಗಿಯ ವಿವರಗಳನ್ನು ಬಿಟ್ಟರೆ, ಯಾವುದೇ ಮುಖ್ಯವಾದ ಮಾಹಿತಿಯನ್ನು ಸರ್ಕಾರ ನೀಡುತ್ತಿಲ್ಲ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಓಡಾಡುವ ಬಗ್ಗೆ, ಬೇರೆ ಕಡೆಯಿಂದ ಬಂದರೆ ಕ್ವಾರಂಟೈನ್ ಆಗುವ ಕುರಿತು ಕನ್ನಡದಲ್ಲಿ ಸರಿಯಾಗಿ ಮಾಹಿತಿಯೇ ನೀಡುತ್ತಿಲ್ಲ. ಅದಕ್ಕೆ ಈ ಅಭಿಯಾನ ಆರಂಭಿಸಿದ್ದೇವೆ’ ಎಂದು ಕೂಟದ ಅರುಣ್ ಜಾವಗಲ್ ‘ಪ್ರಜಾವಾಣಿ’ ತಿಳಿಸಿದರು.</p>.<p>‘ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಹಿಂದಿ ಮತ್ತು ಇಂಗ್ಲಿಷ್ ಹೊರತು ಪಡಿಸಿದರೆ ಬೇರೆ ಯಾವುದೇ ಭಾಷೆಯಲ್ಲಿ ಮಾಹಿತಿ ನೀಡುವುದಿಲ್ಲ. ಕರ್ನಾಟಕ ಸರ್ಕಾರವೂ ಕನ್ನಡದಲ್ಲಿ ಮಾಹಿತಿ ನೀಡದಿದ್ದರೆ ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ.</p>.<p>‘ಈ ಕುರಿತು ಅಭಿಯಾನ ನಡೆಸುತ್ತೇವೆ ಎಂದು ಹೇಳುತ್ತಿದ್ದಂತೆ ನೂರಾರು ಜನ ಇದಕ್ಕೆ ಸ್ಪಂದಿಸಿದ್ದಾರೆ. ಟ್ವೀಟ್ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘#ServeInMyLanguage ಹ್ಯಾಶ್ಟ್ಯಾಗ್ ಅನ್ನು ಅಖಿಲ ಭಾರತ ಮಟ್ಟದಲ್ಲಿ ಬಳಸುತ್ತಿದ್ದೇವೆ. ಜನರಿಗೆ ಅವರ ಸ್ಥಳೀಯ ಭಾಷೆ ಅಥವಾ ಮಾತೃಭಾಷೆಯಡಿಯಲ್ಲಿ ಸೇವೆ ನೀಡಬೇಕು ಎಂದು ಸರ್ಕಾರಿ ಮತ್ತು ಖಾಸಗಿ ವಲಯವನ್ನು ಒತ್ತಾಯಿಸುತ್ತಾ ಬಂದಿದ್ದೇವೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>