<p><strong>ಬೆಂಗಳೂರು:</strong> ‘ಜನರ ಆಶೋತ್ತರಗಳಿಗೆ ಸ್ಪಂದಿಸಲು ದೃಢ ಸಂಕಲ್ಪದೊಂದಿಗೆ ಸಂವಿಧಾನ ರಚನೆಕಾರರ ಆಶಯ ಈಡೇರಿಸುವುದು ನಮ್ಮ ಕರ್ತವ್ಯ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ಕಾಂಗ್ರಸ್ ಸದಸ್ಯರ ಧರಣಿ ಮತ್ತು ಪ್ರತಿಭಟನೆಯ ಮಧ್ಯೆ ಸಂವಿಧಾನ ಕುರಿತ ವಿಶೇಷ ಚರ್ಚೆಯ ಪ್ರಾಸ್ತಾವಿಕ ಭಾಷಣದ ಪ್ರತಿ ಓದಿದ ಅವರು, ‘ಭ್ರಷ್ಟಾಚಾರ, ಅಸಮಾನತೆಯ ವಾತಾವರಣ ನಿಮೂರ್ಲನೆ ಮಾಡುವ ಜವಾಬ್ದಾರಿ ಮತ್ತು ರಾಜಕೀಯ ಇಚ್ಛಾಶಕ್ತಿ ಕುಸಿತಗೊಂಡಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಬೇರೂರಿದೆ’ ಎಂದರು.</p>.<p>‘ಸಂವಿಧಾನದಲ್ಲಿರುವ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವೆಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲ’ ಎಂದರು.</p>.<p>‘ಜನಪ್ರತಿನಿಧಿಗಳಾದ ನಾವು ಬದ್ಧತೆ, ಶಿಸ್ತು, ಪ್ರಾಮಾಣಿಕತೆ, ಪಾರದರ್ಶಕ ಗುಣಗಳಿಂದ ಕಾರ್ಯ ನಿರ್ವಹಿಸಿ ಭಾರತ ಒಂದು ಅಭಿವೃದ್ಧಿ ಹೊಂದಿದ ದೇಶವೆಂದು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸೋಣ’ ಎಂದು ಕಾಗೇರಿ ಸಲಹೆ ನೀಡಿದರು.</p>.<p>‘ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳುವುದೇ ಸಾಂವಿಧಾನಿಕ ನೈತಿಕತೆ. ಈ ನೈತಿಕತೆಯನ್ನು ಮತದಾರರಿಂದ ಹಿಡಿದು ರಾಷ್ಟ್ರಪತಿಯವರೆಗೂ ಪಾಲಿಸಬೇಕಾಗಿದೆ. ವೃತ್ತಿ ಬದುಕು, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ನೆಲೆಯಲ್ಲೂ ನೈತಿಕತೆ ಮೆರೆದರೆ ಸಂವಿಧಾನದ ಆಶಯ ಪೂರ್ಣಗೊಳ್ಳುತ್ತದೆ. ಶಾಸನ ಸಭೆಯಲ್ಲಿ ನಾವು ವ್ಯಕ್ತಪಡಿಸುವ ನೈತಿಕತೆ ಎಂತಹದು ಎಂಬುದನ್ನು ಜನರು ಗಮನಿಸುತ್ತಿದ್ದಾರೆ’ ಎಂದು ಹೇಳಿದರು.</p>.<p>‘ನಮ್ಮ ನೈತಿಕತೆ ಸಾಂವಿಧಾನಿಕ ಹಾಗೂ ಮಾನಸಿಕ ನಡವಳಿಕೆಗೆ ಪೂರಕವಾಗಿರಬೇಕು. ಇದು ನಮ್ಮೆಲ್ಲರ ಹೊಣೆ’ ಎಂದು ಕಾಗೇರಿ ತಿಳಿಸಿದರು.</p>.<p>‘ಸಂವಿಧಾನವು ಮಹಿಳೆಯರಿಗೆ ಮೂಲಭೂತ ಹಕ್ಕುಗಳ ಜತೆಗೆ ರಾಜಕೀಯ ಭಾಗವಹಿಸುವಿಕೆಯ ಮೀಸಲಾತಿಯನ್ನು ನೀಡಿದೆ. ಇದು ಹೆಮ್ಮೆಯ ಬೆಳವಣಿಗೆಯಾಗಿದೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳನ್ನು ಅವರ ಮೂಲಭೂತ ಸಂಕಷ್ಟಗಳಿಂದ ಹೊರತರಲು ಸಂವಿಧಾನ ಮೀಸಲಾತಿ ವ್ಯವಸ್ಥೆ ಜಾರಿಗೆ ಜಾರಿ ಮಾಡಲಾಗಿದೆ’ ಎಂದರು.</p>.<p><strong>ಕಾಂಗ್ರೆಸ್ ವಿರುದ್ಧ ಕಾಗೇರಿ ಗರಂ</strong><br />‘ನಿಮ್ಮ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹರಿಹಾಯ್ದರು.</p>.<p>ತಮ್ಮ ಭಾಷಣದ ಉದ್ದಕ್ಕೂ ಧರಣಿ ನಿರತ ಕಾಂಗ್ರೆಸ್ ಶಾಸಕರು ಅಡಚಣೆ ಮಾಡಿದ ಕಾರಣಕ್ಕೆ ಅವರು ಸಿಟ್ಟಿಗೆದ್ದಿದ್ದರು. ಏರಿದ ಧ್ವನಿಯಲ್ಲಿ ಮಾತನಾಡಿ, ‘ಸದನದಲ್ಲಿ ಒಂದು ರೀತಿ ನೀತಿ ಇರುತ್ತದೆ, ಸಭಾಧ್ಯಕ್ಷರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ’ ಎಂದರು.</p>.<p>‘ಸಂವಿಧಾನದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದೆ. ಅದಕ್ಕೆ ನೀವು ಗೌರವ ತೋರಲಿಲ್ಲ, ಸಂವಿಧಾನಕ್ಕೆ ನೀವು ಗೌರವ ಕೊಡದಿದ್ದರೆ ಇನ್ನು ಯಾವುದಕ್ಕೆ ಗೌರವ ಕೊಡುತ್ತೀರಿ’ ಎಂದು ಅವರು ಪ್ರಶ್ನಿಸಿದರು.</p>.<p>‘ರಾಜ್ಯದಲ್ಲಿ 60 ಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದ ಪಕ್ಷದ ಹಿರಿಯರು ನಡೆದು ಕೊಳ್ಳುವ ರೀತಿ ಇದಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜನರ ಆಶೋತ್ತರಗಳಿಗೆ ಸ್ಪಂದಿಸಲು ದೃಢ ಸಂಕಲ್ಪದೊಂದಿಗೆ ಸಂವಿಧಾನ ರಚನೆಕಾರರ ಆಶಯ ಈಡೇರಿಸುವುದು ನಮ್ಮ ಕರ್ತವ್ಯ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ಕಾಂಗ್ರಸ್ ಸದಸ್ಯರ ಧರಣಿ ಮತ್ತು ಪ್ರತಿಭಟನೆಯ ಮಧ್ಯೆ ಸಂವಿಧಾನ ಕುರಿತ ವಿಶೇಷ ಚರ್ಚೆಯ ಪ್ರಾಸ್ತಾವಿಕ ಭಾಷಣದ ಪ್ರತಿ ಓದಿದ ಅವರು, ‘ಭ್ರಷ್ಟಾಚಾರ, ಅಸಮಾನತೆಯ ವಾತಾವರಣ ನಿಮೂರ್ಲನೆ ಮಾಡುವ ಜವಾಬ್ದಾರಿ ಮತ್ತು ರಾಜಕೀಯ ಇಚ್ಛಾಶಕ್ತಿ ಕುಸಿತಗೊಂಡಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಬೇರೂರಿದೆ’ ಎಂದರು.</p>.<p>‘ಸಂವಿಧಾನದಲ್ಲಿರುವ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವೆಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲ’ ಎಂದರು.</p>.<p>‘ಜನಪ್ರತಿನಿಧಿಗಳಾದ ನಾವು ಬದ್ಧತೆ, ಶಿಸ್ತು, ಪ್ರಾಮಾಣಿಕತೆ, ಪಾರದರ್ಶಕ ಗುಣಗಳಿಂದ ಕಾರ್ಯ ನಿರ್ವಹಿಸಿ ಭಾರತ ಒಂದು ಅಭಿವೃದ್ಧಿ ಹೊಂದಿದ ದೇಶವೆಂದು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸೋಣ’ ಎಂದು ಕಾಗೇರಿ ಸಲಹೆ ನೀಡಿದರು.</p>.<p>‘ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳುವುದೇ ಸಾಂವಿಧಾನಿಕ ನೈತಿಕತೆ. ಈ ನೈತಿಕತೆಯನ್ನು ಮತದಾರರಿಂದ ಹಿಡಿದು ರಾಷ್ಟ್ರಪತಿಯವರೆಗೂ ಪಾಲಿಸಬೇಕಾಗಿದೆ. ವೃತ್ತಿ ಬದುಕು, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ನೆಲೆಯಲ್ಲೂ ನೈತಿಕತೆ ಮೆರೆದರೆ ಸಂವಿಧಾನದ ಆಶಯ ಪೂರ್ಣಗೊಳ್ಳುತ್ತದೆ. ಶಾಸನ ಸಭೆಯಲ್ಲಿ ನಾವು ವ್ಯಕ್ತಪಡಿಸುವ ನೈತಿಕತೆ ಎಂತಹದು ಎಂಬುದನ್ನು ಜನರು ಗಮನಿಸುತ್ತಿದ್ದಾರೆ’ ಎಂದು ಹೇಳಿದರು.</p>.<p>‘ನಮ್ಮ ನೈತಿಕತೆ ಸಾಂವಿಧಾನಿಕ ಹಾಗೂ ಮಾನಸಿಕ ನಡವಳಿಕೆಗೆ ಪೂರಕವಾಗಿರಬೇಕು. ಇದು ನಮ್ಮೆಲ್ಲರ ಹೊಣೆ’ ಎಂದು ಕಾಗೇರಿ ತಿಳಿಸಿದರು.</p>.<p>‘ಸಂವಿಧಾನವು ಮಹಿಳೆಯರಿಗೆ ಮೂಲಭೂತ ಹಕ್ಕುಗಳ ಜತೆಗೆ ರಾಜಕೀಯ ಭಾಗವಹಿಸುವಿಕೆಯ ಮೀಸಲಾತಿಯನ್ನು ನೀಡಿದೆ. ಇದು ಹೆಮ್ಮೆಯ ಬೆಳವಣಿಗೆಯಾಗಿದೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳನ್ನು ಅವರ ಮೂಲಭೂತ ಸಂಕಷ್ಟಗಳಿಂದ ಹೊರತರಲು ಸಂವಿಧಾನ ಮೀಸಲಾತಿ ವ್ಯವಸ್ಥೆ ಜಾರಿಗೆ ಜಾರಿ ಮಾಡಲಾಗಿದೆ’ ಎಂದರು.</p>.<p><strong>ಕಾಂಗ್ರೆಸ್ ವಿರುದ್ಧ ಕಾಗೇರಿ ಗರಂ</strong><br />‘ನಿಮ್ಮ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹರಿಹಾಯ್ದರು.</p>.<p>ತಮ್ಮ ಭಾಷಣದ ಉದ್ದಕ್ಕೂ ಧರಣಿ ನಿರತ ಕಾಂಗ್ರೆಸ್ ಶಾಸಕರು ಅಡಚಣೆ ಮಾಡಿದ ಕಾರಣಕ್ಕೆ ಅವರು ಸಿಟ್ಟಿಗೆದ್ದಿದ್ದರು. ಏರಿದ ಧ್ವನಿಯಲ್ಲಿ ಮಾತನಾಡಿ, ‘ಸದನದಲ್ಲಿ ಒಂದು ರೀತಿ ನೀತಿ ಇರುತ್ತದೆ, ಸಭಾಧ್ಯಕ್ಷರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ’ ಎಂದರು.</p>.<p>‘ಸಂವಿಧಾನದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದೆ. ಅದಕ್ಕೆ ನೀವು ಗೌರವ ತೋರಲಿಲ್ಲ, ಸಂವಿಧಾನಕ್ಕೆ ನೀವು ಗೌರವ ಕೊಡದಿದ್ದರೆ ಇನ್ನು ಯಾವುದಕ್ಕೆ ಗೌರವ ಕೊಡುತ್ತೀರಿ’ ಎಂದು ಅವರು ಪ್ರಶ್ನಿಸಿದರು.</p>.<p>‘ರಾಜ್ಯದಲ್ಲಿ 60 ಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದ ಪಕ್ಷದ ಹಿರಿಯರು ನಡೆದು ಕೊಳ್ಳುವ ರೀತಿ ಇದಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>