ಮದುವೆ ಆಹ್ವಾನಪತ್ರಿಕೆಗಳನ್ನು ವಿತರಿಸಲು ದೊಡ್ಡ ತಂಡವನ್ನು ಶ್ರೀರಾಮುಲು ರೂಪಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಗಣ್ಯರು, ಅಧಿಕಾರಿಗಳು, ಸ್ವಾಮೀಜಿಗಳು ಹಾಗೂ ಬೆಂಬಲಿಗರಿಗೆ ಆಹ್ವಾನಪತ್ರಿಕೆಗಳನ್ನು ತಲುಪಿಸಲಾಗಿದೆ. ಕೇಸರಿ, ಏಲಕ್ಕಿ, ಅರಿಶಿನ, ಕುಂಕುಮ ಮತ್ತು ಅಕ್ಷತೆಯುಳ್ಳ ಆಹ್ವಾನಪತ್ರಿಕೆಯನ್ನು ಗಣ್ಯರಿಗೆ ವಿತರಿಸಲಾಗಿದೆ.