<p><strong>ಬೆಂಗಳೂರು:</strong> ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಕಣ್ಗಾವಲಿನಲ್ಲಿ ನಡೆಯತ್ತಿರುವ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಲೋಪ ಇಲ್ಲದ ರೀತಿಯಲ್ಲಿ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.</p>.<p>ಇದೇ 25ರಿಂದ ಆರಂಭವಾಗಲಿರುವ ಪರೀಕ್ಷೆಯ ಸಿದ್ಧತೆ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಸಿಇಒಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಗುರುವಾರ ಇಲ್ಲಿ ವಿಡಿಯೊ ಸಂವಾದ ನಡೆಸಿದರು.</p>.<p>‘ಕೆಲವು ಪಟ್ಟಭದ್ರಹಿತಾಸಕ್ತಿಗಳು, ಪರೀಕ್ಷೆ ವಿರೋಧಿಗಳು ಹಬ್ಬಿಸುತ್ತಿರುವ ವದಂತಿಗಳು ಮಕ್ಕಳಲ್ಲಿ ಪರೀಕ್ಷೆ ಕುರಿತಂತೆ ಗೊಂದಲ ಮೂಡಿಸುವ ಸಾಧ್ಯತೆಗಳಿರುವುದರಿಂದ ಮೊದಲೇ ಅಂತಹ ವ್ಯಕ್ತಿಗಳನ್ನು ಗಮನಿಸಿ ಮಟ್ಟ ಹಾಕಬೇಕು’ ಎಂದು ಸೂಚಿಸಿದರು.</p>.<p>‘ಪ್ರತಿ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು. ಮಳೆ ಅನಾಹುತ ಆದರೆ, ಕೊನೆಯ ಕ್ಷಣದಲ್ಲಿ ಕಂಟೈನ್<br />ಮೆಂಟ್ ವಲಯ ಎಂದು ಘೋಷಣೆಯಾದರೆ ಬದಲಿ ಪರೀಕ್ಷಾ ಕೇಂದ್ರಗಳೊಂದಿಗೆ ಸಜ್ಜಾಗಿರಬೇಕು’ ಎಂದರು.</p>.<p>ಸಾರಿಗೆ ಸಚಿವ ಲಕ್ಷ್ಮಣ ಸವದಿ ಜತೆಗೆ ಸಭೆ ನಡೆಸಿದ ಶಿಕ್ಷಣ ಸಚಿವರು, ಪರೀಕ್ಷಾ ಸಿದ್ಧತೆ ಕುರಿತು ಚರ್ಚಿಸಿ<br />ದರು. ಪಿಯು ಇಂಗ್ಲಿಷ್ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಹಾಗೂ ಗಡಿ ಬಾಗದಲ್ಲಿ ಅಗತ್ಯದ ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಲಾಯಿತು.</p>.<p><strong>ಮೌಲ್ಯಮಾಪನ ಅತಂತ್ರ</strong><br />ದ್ವಿತೀಯ ಪಿಯು ವಿಜ್ಞಾನ ವಿಷಯ (ಪಿಸಿಎಂಬಿ) ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳಿಗೆ ಗುರುವಾರ ಉಪ ಮುಖ್ಯ ಮೌಲ್ಯಮಾಪಕರು ಹಾಜರಾಗಲಿಲ್ಲ. ಹೀಗಾಗಿ ಮೌಲ್ಯಮಾಪನ ಅತಂತ್ರಗೊಳ್ಳುವ ಆತಂಕ ಮೂಡಿದೆ.</p>.<p>ಶುಕ್ರವಾರದಿಂದ ಸಹಾಯಕ ಮೌಲ್ಯಮಾಪಕರು ನಗರದ ಎಂಟು ಮೌಲ್ಯಮಾಪನ ಕೇಂದ್ರಗಳಿಗೆ ಬರಬೇಕಿದ್ದು, ದೂರದ ಜಿಲ್ಲೆಗಳು ಮಾತ್ರವಲ್ಲ ಹತ್ತಿರದ ಜಿಲ್ಲೆಗಳಿಂದಲೂ ಮೌಲ್ಯಮಾಪಕರು ನಗರಕ್ಕೆ ಬರಲು ಹಿಂದೇಟು ಹಾಕಿದ್ದಾರೆ.</p>.<p>‘ಈ ಸ್ಥಿತಿಯಲ್ಲಿ ಮೌಲ್ಯಮಾಪನಕ್ಕೆ ಪ್ರಾಂಶುಪಾಲರು ಸಿದ್ಧರಿಲ್ಲ’ ಎಂದು ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದ್ದಾರೆ. ‘ಪಿಸಿಎಂಬಿ ಮೌಲ್ಯಮಾಪನವನ್ನು ಕನಿಷ್ಠ ವಿಭಾಗಮಟ್ಟಕ್ಕಾದರೂ ವಿಸ್ತರಿಸಲಿ, ಆಗ ಅಕ್ಕಪಕ್ಕದ ಜಿಲ್ಲೆಗಳ ಮೌಲ್ಯಮಾಪಕರು ಬರಬಹುದು’ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಹೇಳಿದ್ದಾರೆ.</p>.<p><strong>ಇಲಾಖೆ ಮೌನ:</strong> ಈ ಬಿಕ್ಕಟ್ಟಿನ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರತಿಕ್ರಿಯೆ ನೀಡಿಲ್ಲ. ‘ಸದ್ಯ ಕಾದು ನೋಡುತ್ತಿದ್ದೇವೆ. ಮೌಲ್ಯಮಾಪಕರು ಬಾರದೆ ಇದ್ದರೆ ಮುಂದಿನ ನಿರ್ಧಾರಕ್ಕೆ ಬರುತ್ತೇವೆ’ ಎಂದು ಮೂಲಗಳು ತಿಳಿಸಿವೆ.</p>.<p><strong>ಶಿಕ್ಷಕರ ಹಾಜರಾತಿ 8ಕ್ಕೆ ಮುಂದೂಡಿಕೆ</strong><br />ಶಿಕ್ಷಕರ ಶಾಲಾ ಹಾಜರಾತಿ ಆದೇಶವನ್ನು ಪರಿಷ್ಕರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಇದೇ 8ರಿಂದ ಶಿಕ್ಷಕರು ಶಾಲೆಗೆ ಹಾಜರಾಗಬೇಕು. ಕಂಟೈನ್ಮೆಂಟ್ ಪ್ರದೇಶಗಳಲ್ಲಿರುವ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ.</p>.<p>‘ಶುಕ್ರವಾರ ಮುಖ್ಯ ಗುರುಗಳು ಮಾತ್ರ ಶಾಲೆಗೆ ಹಾಜರಾಗಬೇಕು. 8ರಿಂದ ಎಲ್ಲಾ ಶಿಕ್ಷಕರು, ಸಿಬ್ಬಂದಿ ಶಾಲಾ ಕಚೇರಿಯಲ್ಲಿದ್ದು, ಇದೇ 10ರಿಂದ ನಡೆಯುವ ಪೋಷಕರ ಸಭೆಗೆ ಸಿದ್ಧತೆ ನಡೆಸಬೇಕು ಎಂದು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.</p>.<p><strong>12,674 ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ</strong><br />‘ಇದುವರೆಗೆ 12,674 ಹಾಸ್ಟೆಲ್ ವಾಸಿ, ವಲಸೆ ಕಾರ್ಮಿಕ ಮತ್ತು ಗಡಿಯಾಚೆಗಿನ ಮಕ್ಕಳು ತಮ್ಮ ಸನಿಹದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಬದಲಿ ಹಾಲ್ಟಿಕೆಟ್ ನೀಡಲಾಗುತ್ತಿದೆ’ ಎಂದು ಸುರೇಶ್ಕುಮಾರ್ ತಿಳಿಸಿದರು.</p>.<p>‘ಶಾಲೆಗಳನ್ನು ತೆರೆಯಲು ತರಾತುರಿ ಮಾಡಿಲ್ಲ, ಪೋಷಕರ ಅಭಿಪ್ರಾಯ ಪಡೆದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಗುರುವಾರ ತಮ್ಮ ಫೇಸ್ಬುಕ್ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.</p>.<p><strong>ಆರ್ಟಿಇ ವೇಳಾಪಟ್ಟಿ</strong><br />ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (ಆರ್ಟಿಇ) 2020–21ನೇ ಸಾಲಿಗೆ ಮಕ್ಕಳ ಪ್ರವೇಶಾತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ.</p>.<p>ಸೀಟು ಹಂಚಿಕೆಯ ಪ್ರಯುಕ್ತ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದ್ದು, ಕೊರೊನಾ ಲಾಕ್ಡೌನ್ ಕಾರಣ ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಪರಿಷ್ಕೃತ ಪಟ್ಟಿಯಂತೆ ದಾಖಲಾತಿ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.</p>.<p><strong>ವೆಬ್ಸೈಟ್: http;//www.schooleducation.kar.nic.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಕಣ್ಗಾವಲಿನಲ್ಲಿ ನಡೆಯತ್ತಿರುವ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಲೋಪ ಇಲ್ಲದ ರೀತಿಯಲ್ಲಿ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.</p>.<p>ಇದೇ 25ರಿಂದ ಆರಂಭವಾಗಲಿರುವ ಪರೀಕ್ಷೆಯ ಸಿದ್ಧತೆ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಸಿಇಒಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಗುರುವಾರ ಇಲ್ಲಿ ವಿಡಿಯೊ ಸಂವಾದ ನಡೆಸಿದರು.</p>.<p>‘ಕೆಲವು ಪಟ್ಟಭದ್ರಹಿತಾಸಕ್ತಿಗಳು, ಪರೀಕ್ಷೆ ವಿರೋಧಿಗಳು ಹಬ್ಬಿಸುತ್ತಿರುವ ವದಂತಿಗಳು ಮಕ್ಕಳಲ್ಲಿ ಪರೀಕ್ಷೆ ಕುರಿತಂತೆ ಗೊಂದಲ ಮೂಡಿಸುವ ಸಾಧ್ಯತೆಗಳಿರುವುದರಿಂದ ಮೊದಲೇ ಅಂತಹ ವ್ಯಕ್ತಿಗಳನ್ನು ಗಮನಿಸಿ ಮಟ್ಟ ಹಾಕಬೇಕು’ ಎಂದು ಸೂಚಿಸಿದರು.</p>.<p>‘ಪ್ರತಿ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು. ಮಳೆ ಅನಾಹುತ ಆದರೆ, ಕೊನೆಯ ಕ್ಷಣದಲ್ಲಿ ಕಂಟೈನ್<br />ಮೆಂಟ್ ವಲಯ ಎಂದು ಘೋಷಣೆಯಾದರೆ ಬದಲಿ ಪರೀಕ್ಷಾ ಕೇಂದ್ರಗಳೊಂದಿಗೆ ಸಜ್ಜಾಗಿರಬೇಕು’ ಎಂದರು.</p>.<p>ಸಾರಿಗೆ ಸಚಿವ ಲಕ್ಷ್ಮಣ ಸವದಿ ಜತೆಗೆ ಸಭೆ ನಡೆಸಿದ ಶಿಕ್ಷಣ ಸಚಿವರು, ಪರೀಕ್ಷಾ ಸಿದ್ಧತೆ ಕುರಿತು ಚರ್ಚಿಸಿ<br />ದರು. ಪಿಯು ಇಂಗ್ಲಿಷ್ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಹಾಗೂ ಗಡಿ ಬಾಗದಲ್ಲಿ ಅಗತ್ಯದ ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಲಾಯಿತು.</p>.<p><strong>ಮೌಲ್ಯಮಾಪನ ಅತಂತ್ರ</strong><br />ದ್ವಿತೀಯ ಪಿಯು ವಿಜ್ಞಾನ ವಿಷಯ (ಪಿಸಿಎಂಬಿ) ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳಿಗೆ ಗುರುವಾರ ಉಪ ಮುಖ್ಯ ಮೌಲ್ಯಮಾಪಕರು ಹಾಜರಾಗಲಿಲ್ಲ. ಹೀಗಾಗಿ ಮೌಲ್ಯಮಾಪನ ಅತಂತ್ರಗೊಳ್ಳುವ ಆತಂಕ ಮೂಡಿದೆ.</p>.<p>ಶುಕ್ರವಾರದಿಂದ ಸಹಾಯಕ ಮೌಲ್ಯಮಾಪಕರು ನಗರದ ಎಂಟು ಮೌಲ್ಯಮಾಪನ ಕೇಂದ್ರಗಳಿಗೆ ಬರಬೇಕಿದ್ದು, ದೂರದ ಜಿಲ್ಲೆಗಳು ಮಾತ್ರವಲ್ಲ ಹತ್ತಿರದ ಜಿಲ್ಲೆಗಳಿಂದಲೂ ಮೌಲ್ಯಮಾಪಕರು ನಗರಕ್ಕೆ ಬರಲು ಹಿಂದೇಟು ಹಾಕಿದ್ದಾರೆ.</p>.<p>‘ಈ ಸ್ಥಿತಿಯಲ್ಲಿ ಮೌಲ್ಯಮಾಪನಕ್ಕೆ ಪ್ರಾಂಶುಪಾಲರು ಸಿದ್ಧರಿಲ್ಲ’ ಎಂದು ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದ್ದಾರೆ. ‘ಪಿಸಿಎಂಬಿ ಮೌಲ್ಯಮಾಪನವನ್ನು ಕನಿಷ್ಠ ವಿಭಾಗಮಟ್ಟಕ್ಕಾದರೂ ವಿಸ್ತರಿಸಲಿ, ಆಗ ಅಕ್ಕಪಕ್ಕದ ಜಿಲ್ಲೆಗಳ ಮೌಲ್ಯಮಾಪಕರು ಬರಬಹುದು’ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಹೇಳಿದ್ದಾರೆ.</p>.<p><strong>ಇಲಾಖೆ ಮೌನ:</strong> ಈ ಬಿಕ್ಕಟ್ಟಿನ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರತಿಕ್ರಿಯೆ ನೀಡಿಲ್ಲ. ‘ಸದ್ಯ ಕಾದು ನೋಡುತ್ತಿದ್ದೇವೆ. ಮೌಲ್ಯಮಾಪಕರು ಬಾರದೆ ಇದ್ದರೆ ಮುಂದಿನ ನಿರ್ಧಾರಕ್ಕೆ ಬರುತ್ತೇವೆ’ ಎಂದು ಮೂಲಗಳು ತಿಳಿಸಿವೆ.</p>.<p><strong>ಶಿಕ್ಷಕರ ಹಾಜರಾತಿ 8ಕ್ಕೆ ಮುಂದೂಡಿಕೆ</strong><br />ಶಿಕ್ಷಕರ ಶಾಲಾ ಹಾಜರಾತಿ ಆದೇಶವನ್ನು ಪರಿಷ್ಕರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಇದೇ 8ರಿಂದ ಶಿಕ್ಷಕರು ಶಾಲೆಗೆ ಹಾಜರಾಗಬೇಕು. ಕಂಟೈನ್ಮೆಂಟ್ ಪ್ರದೇಶಗಳಲ್ಲಿರುವ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ.</p>.<p>‘ಶುಕ್ರವಾರ ಮುಖ್ಯ ಗುರುಗಳು ಮಾತ್ರ ಶಾಲೆಗೆ ಹಾಜರಾಗಬೇಕು. 8ರಿಂದ ಎಲ್ಲಾ ಶಿಕ್ಷಕರು, ಸಿಬ್ಬಂದಿ ಶಾಲಾ ಕಚೇರಿಯಲ್ಲಿದ್ದು, ಇದೇ 10ರಿಂದ ನಡೆಯುವ ಪೋಷಕರ ಸಭೆಗೆ ಸಿದ್ಧತೆ ನಡೆಸಬೇಕು ಎಂದು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.</p>.<p><strong>12,674 ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ</strong><br />‘ಇದುವರೆಗೆ 12,674 ಹಾಸ್ಟೆಲ್ ವಾಸಿ, ವಲಸೆ ಕಾರ್ಮಿಕ ಮತ್ತು ಗಡಿಯಾಚೆಗಿನ ಮಕ್ಕಳು ತಮ್ಮ ಸನಿಹದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಬದಲಿ ಹಾಲ್ಟಿಕೆಟ್ ನೀಡಲಾಗುತ್ತಿದೆ’ ಎಂದು ಸುರೇಶ್ಕುಮಾರ್ ತಿಳಿಸಿದರು.</p>.<p>‘ಶಾಲೆಗಳನ್ನು ತೆರೆಯಲು ತರಾತುರಿ ಮಾಡಿಲ್ಲ, ಪೋಷಕರ ಅಭಿಪ್ರಾಯ ಪಡೆದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಗುರುವಾರ ತಮ್ಮ ಫೇಸ್ಬುಕ್ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.</p>.<p><strong>ಆರ್ಟಿಇ ವೇಳಾಪಟ್ಟಿ</strong><br />ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (ಆರ್ಟಿಇ) 2020–21ನೇ ಸಾಲಿಗೆ ಮಕ್ಕಳ ಪ್ರವೇಶಾತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ.</p>.<p>ಸೀಟು ಹಂಚಿಕೆಯ ಪ್ರಯುಕ್ತ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದ್ದು, ಕೊರೊನಾ ಲಾಕ್ಡೌನ್ ಕಾರಣ ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಪರಿಷ್ಕೃತ ಪಟ್ಟಿಯಂತೆ ದಾಖಲಾತಿ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.</p>.<p><strong>ವೆಬ್ಸೈಟ್: http;//www.schooleducation.kar.nic.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>