‘ಶಾಸಕರ ಅನರ್ಹತೆಯನ್ನು ಸ್ಪೀಕರ್ ವ್ಯಾಖ್ಯಾನಿಸುವಾಗ, ಅವರು ಮರು ಚುನಾವಣೆಗೆ ನಿಂತುಕೊಳ್ಳಬಾರದು ಎಂದು ಹೇಳಿದ್ದರು. ಈ ವ್ಯಾಖ್ಯಾನಕ್ಕೂ ಕಾಂಗ್ರೆಸ್ಗೂ ಸಂಬಂಧ ಇರಲಿಲ್ಲ. ಆದರೆ, ಸ್ಪೀಕರ್ ನಿರ್ಧಾರಕ್ಕೆ ಬೆಂಬಲ ಸೂಚಿಸಲಾಗಿತ್ತು. ಮರು ಚುನಾವಣೆಗೆ ಹೋಗುವುದು, ಬಿಡುವುದು ಅನರ್ಹ ಶಾಸಕರಿಗೆ ಬಿಟ್ಟಿರುವ ವಿಚಾರ. ಕಾಂಗ್ರೆಸ್ಗೆ ಅವರು ಎದುರಾಳಿ ಆಗುತ್ತಾರೆ ಎನ್ನುವುದು ಮೊದಲಿನಿಂದಲೂ ಗೊತ್ತಿರುವ ಸಂಗತಿ’ ಎಂದು ಹೇಳಿದರು.