<p><strong>ಚಿಕ್ಕೋಡಿ</strong>: ತಾಲ್ಲೂಕಿನ ನನದಿ ಗ್ರಾಮದ ರವಳುಕೇದಾರಿ-ನಿಪ್ಪಾಣಿತೋಟಪಟ್ಟಿಯ ಜನರು ರಸ್ತೆಗಾಗಿಮೂರು ದಶಕಗಳಲ್ಲಿ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಆದರೂ ಅವರು ಸ್ಪಂದಿಸಿರಲಿಲ್ಲ. ಆದರೆ, ಲಾಕ್ಡೌನ್ ಅವಧಿಯಲ್ಲಿ ಕೃಷಿಕರೇ ಶ್ರಮದಾನದ ಮೂಲಕ ಸುಮಾರು ಒಂದು ಕಿ.ಮೀ ಉದ್ದದ ರಸ್ತೆ ನಿರ್ಮಿಸಿಕೊಂಡಿದ್ದಾರೆ.</p>.<p>ನನದಿ ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿರುವ ರವಳುಕೇದಾರಿ-ನಿಪ್ಪಾಣಿ ತೋಟಪಟ್ಟಿಯಲ್ಲಿ ಸುಮಾರು 10 ಕುಟುಂಬಗಳಿವೆ. ಆದರೆ, ಇದುವರೆಗೂ ಸಂಪರ್ಕ ರಸ್ತೆಯೇ ಇರಲಿಲ್ಲ. ಈ ತೋಟಪಟ್ಟಿಯ ಬಳಿಹಾಯ್ದು ಹೋಗಿರುವ ಹಳ್ಳದ ಬದಿಯಿಂದಲೇ ಜನರು ಸಂಚರಿಸುತ್ತಿದ್ದರು. ಮಳೆಗಾಲದಲ್ಲಿ ಮಕ್ಕಳು ಹಳ್ಳದ ನೀರಿನಲ್ಲಿಯೇ ನಡೆದು ಶಾಲೆಗೆ ಹೋಗಬೇಕಾಗಿತ್ತು.</p>.<p>ರಸ್ತೆ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯ್ತಿ ಸದಸ್ಯರು, ಶಾಸಕ, ಸಂಸದರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಕೃಷಿಕರು, ತಮ್ಮಲ್ಲಿಯೇ ವಂತಿಗೆ ಸಂಗ್ರಹಿಸಿ, ಎರಡು ಜೆಸಿಬಿ ಯಂತ್ರ, ಐದು ಟ್ರಾಕ್ಟರ್ಗಳ ನೆರವಿನಲ್ಲಿ ಹಳ್ಳದ ಬದಿಯಲ್ಲಿ ಕಚ್ಚಾರಸ್ತೆ ನಿರ್ಮಿಸಿಕೊಂಡಿದ್ದಾರೆ.</p>.<p>ಪ್ರತಿ ಕುಟುಂಬದಿಂದ ಒಬ್ಬರು, ಕೆಲವು ಕುಟುಂಬದಿಂದ ಇಬ್ಬರು ಶ್ರಮದಾನ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಕಲ್ಲು ಚಪ್ಪಡಿ ಮತ್ತು ಸಿಮೆಂಟ್ ಪೈಪ್ಗಳನ್ನು ಬಳಸಿ ಚಿಕ್ಕ ಸೇತುವೆಯನ್ನೂ ನಿರ್ಮಿಸಿದ್ದಾರೆ.</p>.<p>‘ಅನಾರೋಗ್ಯಪೀಡಿತರನ್ನು, ವೃದ್ಧರನ್ನು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಬೇಕಾಗಿತ್ತು. ಈ ಪ್ರದೇಶದಲ್ಲಿ 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಕಬ್ಬು, ತಂಬಾಕು, ತರಕಾರಿ, ಆಹಾರಧಾನ್ಯ ಮೊದಲಾದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮರ್ಪಕವಾದ ರಸ್ತೆ ಸಂಪರ್ಕವಿರಲಿಲ್ಲ’ ಎಂದು ರೈತ ದಿಲೀಪರವಳು ಕೇದಾರಿ ಅಳಲು ತೋಡಿಕೊಂಡರು.</p>.<p>‘ಒಂದು ಬಾರಿ ರಸ್ತೆ ನಿರ್ಮಾಣಕ್ಕೆ ₹8 ಲಕ್ಷ ಅನುದಾನ ಮಂಜೂರಾದರೂ ಕಾಮಗಾರಿ ಆರಂಭಗೊಳ್ಳಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.</p>.<p><strong>‘ಜಮೀನು ನೀಡಲು ಒಪ್ಪಿದರೆ ರಸ್ತೆ’</strong><br />‘ಸರ್ಕಾರಿ ದಾಖಲೆಗಳ ಪ್ರಕಾರ ಇಲ್ಲಿ ರಸ್ತೆ ಇರಲಿಲ್ಲ. ಕಾಲುದಾರಿ ಮಾತ್ರ ಇತ್ತು. ಹೀಗಾಗಿ ರಸ್ತೆ ನಿರ್ಮಿಸಲು ಆಗಿರಲಿಲ್ಲ. ಕಾಲು<br />ದಾರಿ ಅಕ್ಕಪಕ್ಕದ ಹೊಲಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ಸಿದ್ಧರಿದ್ದರೆ ರಸ್ತೆ ನಿರ್ಮಿಸಬಹುದು. ಈ ವಿಷಯವನ್ನು ಗ್ರಾಮಸ್ಥರ ಗಮನಕ್ಕೂ ತಂದಿದ್ದೇವೆ. ಅವರು ಒಪ್ಪಿಗೆ ಪತ್ರ ನೀಡಿದರೆ, ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಆರಂಭಿಸಲಾಗುವುದು‘ ಎಂದು ಪಿಡಿಒ ರವಿ ಸನದಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>*<br />ರಸ್ತೆ ಡಾಂಬರೀಕರಣ ಮಾಡಲು ಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ನೆರವು ನೀಡಬೇಕು<br /><em><strong>–ಉಮೇಶ ಭೋಸಲೆ, ಗ್ರಾಮಸ್ಥ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ</strong>: ತಾಲ್ಲೂಕಿನ ನನದಿ ಗ್ರಾಮದ ರವಳುಕೇದಾರಿ-ನಿಪ್ಪಾಣಿತೋಟಪಟ್ಟಿಯ ಜನರು ರಸ್ತೆಗಾಗಿಮೂರು ದಶಕಗಳಲ್ಲಿ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಆದರೂ ಅವರು ಸ್ಪಂದಿಸಿರಲಿಲ್ಲ. ಆದರೆ, ಲಾಕ್ಡೌನ್ ಅವಧಿಯಲ್ಲಿ ಕೃಷಿಕರೇ ಶ್ರಮದಾನದ ಮೂಲಕ ಸುಮಾರು ಒಂದು ಕಿ.ಮೀ ಉದ್ದದ ರಸ್ತೆ ನಿರ್ಮಿಸಿಕೊಂಡಿದ್ದಾರೆ.</p>.<p>ನನದಿ ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿರುವ ರವಳುಕೇದಾರಿ-ನಿಪ್ಪಾಣಿ ತೋಟಪಟ್ಟಿಯಲ್ಲಿ ಸುಮಾರು 10 ಕುಟುಂಬಗಳಿವೆ. ಆದರೆ, ಇದುವರೆಗೂ ಸಂಪರ್ಕ ರಸ್ತೆಯೇ ಇರಲಿಲ್ಲ. ಈ ತೋಟಪಟ್ಟಿಯ ಬಳಿಹಾಯ್ದು ಹೋಗಿರುವ ಹಳ್ಳದ ಬದಿಯಿಂದಲೇ ಜನರು ಸಂಚರಿಸುತ್ತಿದ್ದರು. ಮಳೆಗಾಲದಲ್ಲಿ ಮಕ್ಕಳು ಹಳ್ಳದ ನೀರಿನಲ್ಲಿಯೇ ನಡೆದು ಶಾಲೆಗೆ ಹೋಗಬೇಕಾಗಿತ್ತು.</p>.<p>ರಸ್ತೆ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯ್ತಿ ಸದಸ್ಯರು, ಶಾಸಕ, ಸಂಸದರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಕೃಷಿಕರು, ತಮ್ಮಲ್ಲಿಯೇ ವಂತಿಗೆ ಸಂಗ್ರಹಿಸಿ, ಎರಡು ಜೆಸಿಬಿ ಯಂತ್ರ, ಐದು ಟ್ರಾಕ್ಟರ್ಗಳ ನೆರವಿನಲ್ಲಿ ಹಳ್ಳದ ಬದಿಯಲ್ಲಿ ಕಚ್ಚಾರಸ್ತೆ ನಿರ್ಮಿಸಿಕೊಂಡಿದ್ದಾರೆ.</p>.<p>ಪ್ರತಿ ಕುಟುಂಬದಿಂದ ಒಬ್ಬರು, ಕೆಲವು ಕುಟುಂಬದಿಂದ ಇಬ್ಬರು ಶ್ರಮದಾನ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಕಲ್ಲು ಚಪ್ಪಡಿ ಮತ್ತು ಸಿಮೆಂಟ್ ಪೈಪ್ಗಳನ್ನು ಬಳಸಿ ಚಿಕ್ಕ ಸೇತುವೆಯನ್ನೂ ನಿರ್ಮಿಸಿದ್ದಾರೆ.</p>.<p>‘ಅನಾರೋಗ್ಯಪೀಡಿತರನ್ನು, ವೃದ್ಧರನ್ನು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಬೇಕಾಗಿತ್ತು. ಈ ಪ್ರದೇಶದಲ್ಲಿ 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಕಬ್ಬು, ತಂಬಾಕು, ತರಕಾರಿ, ಆಹಾರಧಾನ್ಯ ಮೊದಲಾದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮರ್ಪಕವಾದ ರಸ್ತೆ ಸಂಪರ್ಕವಿರಲಿಲ್ಲ’ ಎಂದು ರೈತ ದಿಲೀಪರವಳು ಕೇದಾರಿ ಅಳಲು ತೋಡಿಕೊಂಡರು.</p>.<p>‘ಒಂದು ಬಾರಿ ರಸ್ತೆ ನಿರ್ಮಾಣಕ್ಕೆ ₹8 ಲಕ್ಷ ಅನುದಾನ ಮಂಜೂರಾದರೂ ಕಾಮಗಾರಿ ಆರಂಭಗೊಳ್ಳಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.</p>.<p><strong>‘ಜಮೀನು ನೀಡಲು ಒಪ್ಪಿದರೆ ರಸ್ತೆ’</strong><br />‘ಸರ್ಕಾರಿ ದಾಖಲೆಗಳ ಪ್ರಕಾರ ಇಲ್ಲಿ ರಸ್ತೆ ಇರಲಿಲ್ಲ. ಕಾಲುದಾರಿ ಮಾತ್ರ ಇತ್ತು. ಹೀಗಾಗಿ ರಸ್ತೆ ನಿರ್ಮಿಸಲು ಆಗಿರಲಿಲ್ಲ. ಕಾಲು<br />ದಾರಿ ಅಕ್ಕಪಕ್ಕದ ಹೊಲಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ಸಿದ್ಧರಿದ್ದರೆ ರಸ್ತೆ ನಿರ್ಮಿಸಬಹುದು. ಈ ವಿಷಯವನ್ನು ಗ್ರಾಮಸ್ಥರ ಗಮನಕ್ಕೂ ತಂದಿದ್ದೇವೆ. ಅವರು ಒಪ್ಪಿಗೆ ಪತ್ರ ನೀಡಿದರೆ, ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಆರಂಭಿಸಲಾಗುವುದು‘ ಎಂದು ಪಿಡಿಒ ರವಿ ಸನದಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>*<br />ರಸ್ತೆ ಡಾಂಬರೀಕರಣ ಮಾಡಲು ಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ನೆರವು ನೀಡಬೇಕು<br /><em><strong>–ಉಮೇಶ ಭೋಸಲೆ, ಗ್ರಾಮಸ್ಥ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>