ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕಳವು, ಮೈಸೂರಿನಲ್ಲಿ ಪಾರ್ಟಿ !

ರೈಲಿನಲ್ಲಿ ಬಂದು ಬಾಡಿಗೆ ಬೈಕ್‌ನಲ್ಲಿ ಸುತ್ತಾಡಿ ಕೃತ್ಯ: ಬಂಧನ
Last Updated 9 ಮಾರ್ಚ್ 2020, 22:40 IST
ಅಕ್ಷರ ಗಾತ್ರ

ಬೆಂಗಳೂರು:ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಸ್ಟೇಷನರಿ ಅಂಗಡಿಯೊಂದರ ಮಾಲೀಕರ ಗಮನ ಬೇರೆಡೆ ಸೆಳೆದು ₹ 50 ಸಾವಿರ ಕಳವು ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಮೈಸೂರಿನ ದಿಲೀಪ್ (34) ಹಾಗೂ ಮಸ್ತಾನ್ (38) ಬಂಧಿತರು. ಆಟೊ ಚಾಲಕರಾಗಿರುವ ಇವರು ಆಗಾಗ ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ಮೈಸೂರಿಗೆ ವಾಪಸು ಹೋಗುತ್ತಿದ್ದರು. ಕಳ್ಳತನದ ಹಣದಲ್ಲೇ ಪಾರ್ಟಿ ಮಾಡುತ್ತಿದ್ದರು. ಐಷಾರಾಮಿ ಜೀವನಕ್ಕೂ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಬನಶಂಕರಿ ಮೂರನೇ ಹಂತದ ಇಟ್ಟಮಡು ಮುಖ್ಯರಸ್ತೆಯಲ್ಲಿ ಲೋಕೇಶ್ ಎಂಬುವರು ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದೇ 2ರಂದು ಅಂಗಡಿಗೆ ಹೋಗಿದ್ದ ಆರೋಪಿಯೊಬ್ಬ 6 ಪುಸ್ತಕ ಖರೀದಿಸಿಕೊಂಡು ಹೋಗಿದ್ದ. ಕೆಲ ನಿಮಿಷಗಳ ನಂತರ ವಾಪಸು ಬಂದು ಬೇರೆ ಕಂಪನಿ ಪುಸ್ತಕ ನೀಡುವಂತೆ ತಿಳಿಸಿದ್ದ. ಲೋಕೇಶ್ ಅವರು ಗೋದಾಮಿಗೆ ಹೋಗಿ ಪುಸ್ತಕ ತಂದುಕೊಟ್ಟಿದ್ದರು.’

‘ಅದೇ ಸಮಯಕ್ಕೆ ಮತ್ತಿಬ್ಬರು ಆರೋಪಿಗಳು ಅಂಗಡಿಗೆ ಬಂದಿದ್ದರು. ಒಬ್ಬಾತ ಥರ್ಮಕೋಲ್ ಕೇಳಿದ್ದ. ಇನ್ನೊಬ್ಬ ಕಾರ್ಡ್‌ಬೋರ್ಡ್‌ ಶೀಟ್‌ ಕೊಡುವಂತೆ ಹೇಳಿದ್ದ. ಅವುಗಳನ್ನು ತರಲೆಂದು ಲೋಕೇಶ್ ಪುನಃ ಗೋದಾಮಿಗೆ ಹೋಗಿದ್ದರು. ಅವರು ವಾಪಸು ಬರುವಷ್ಟರಲ್ಲೇ ಆರೋಪಿಗಳು ಅಂಗಡಿಯ ನಗದು ಪೆಟ್ಟಿಗೆಯಲ್ಲಿದ್ದ ₹50 ಸಾವಿರವನ್ನು ಕದ್ದುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ಬಾಡಿಗೆ ಬೈಕ್‌ನಲ್ಲಿ ಸುತ್ತಾಟ: ‘ಹಣದ ಅವಶ್ಯಕತೆ ಇದ್ದಾಗಲೆಲ್ಲ ಆರೋಪಿಗಳು, ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ರೈಲಿನಲ್ಲಿ ಬೆಂಗಳೂರಿಗೆ ಬಂದು, ಇಲ್ಲಿ ಬಾಡಿಗೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದರು. ಕಡಿಮೆ ಗ್ರಾಹಕರು ಇರುವ ಅಂಗಡಿ
ಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ವಿಜಯನಗರ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT