<p><strong>ಬೆಂಗಳೂರು</strong>:ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಸ್ಟೇಷನರಿ ಅಂಗಡಿಯೊಂದರ ಮಾಲೀಕರ ಗಮನ ಬೇರೆಡೆ ಸೆಳೆದು ₹ 50 ಸಾವಿರ ಕಳವು ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಮೈಸೂರಿನ ದಿಲೀಪ್ (34) ಹಾಗೂ ಮಸ್ತಾನ್ (38) ಬಂಧಿತರು. ಆಟೊ ಚಾಲಕರಾಗಿರುವ ಇವರು ಆಗಾಗ ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ಮೈಸೂರಿಗೆ ವಾಪಸು ಹೋಗುತ್ತಿದ್ದರು. ಕಳ್ಳತನದ ಹಣದಲ್ಲೇ ಪಾರ್ಟಿ ಮಾಡುತ್ತಿದ್ದರು. ಐಷಾರಾಮಿ ಜೀವನಕ್ಕೂ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಬನಶಂಕರಿ ಮೂರನೇ ಹಂತದ ಇಟ್ಟಮಡು ಮುಖ್ಯರಸ್ತೆಯಲ್ಲಿ ಲೋಕೇಶ್ ಎಂಬುವರು ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದೇ 2ರಂದು ಅಂಗಡಿಗೆ ಹೋಗಿದ್ದ ಆರೋಪಿಯೊಬ್ಬ 6 ಪುಸ್ತಕ ಖರೀದಿಸಿಕೊಂಡು ಹೋಗಿದ್ದ. ಕೆಲ ನಿಮಿಷಗಳ ನಂತರ ವಾಪಸು ಬಂದು ಬೇರೆ ಕಂಪನಿ ಪುಸ್ತಕ ನೀಡುವಂತೆ ತಿಳಿಸಿದ್ದ. ಲೋಕೇಶ್ ಅವರು ಗೋದಾಮಿಗೆ ಹೋಗಿ ಪುಸ್ತಕ ತಂದುಕೊಟ್ಟಿದ್ದರು.’</p>.<p>‘ಅದೇ ಸಮಯಕ್ಕೆ ಮತ್ತಿಬ್ಬರು ಆರೋಪಿಗಳು ಅಂಗಡಿಗೆ ಬಂದಿದ್ದರು. ಒಬ್ಬಾತ ಥರ್ಮಕೋಲ್ ಕೇಳಿದ್ದ. ಇನ್ನೊಬ್ಬ ಕಾರ್ಡ್ಬೋರ್ಡ್ ಶೀಟ್ ಕೊಡುವಂತೆ ಹೇಳಿದ್ದ. ಅವುಗಳನ್ನು ತರಲೆಂದು ಲೋಕೇಶ್ ಪುನಃ ಗೋದಾಮಿಗೆ ಹೋಗಿದ್ದರು. ಅವರು ವಾಪಸು ಬರುವಷ್ಟರಲ್ಲೇ ಆರೋಪಿಗಳು ಅಂಗಡಿಯ ನಗದು ಪೆಟ್ಟಿಗೆಯಲ್ಲಿದ್ದ ₹50 ಸಾವಿರವನ್ನು ಕದ್ದುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.</p>.<p class="Subhead"><strong>ಬಾಡಿಗೆ ಬೈಕ್ನಲ್ಲಿ ಸುತ್ತಾಟ: </strong>‘ಹಣದ ಅವಶ್ಯಕತೆ ಇದ್ದಾಗಲೆಲ್ಲ ಆರೋಪಿಗಳು, ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ರೈಲಿನಲ್ಲಿ ಬೆಂಗಳೂರಿಗೆ ಬಂದು, ಇಲ್ಲಿ ಬಾಡಿಗೆ ಬೈಕ್ನಲ್ಲಿ ಸುತ್ತಾಡುತ್ತಿದ್ದರು. ಕಡಿಮೆ ಗ್ರಾಹಕರು ಇರುವ ಅಂಗಡಿ<br />ಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<p>‘ವಿಜಯನಗರ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>:ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಸ್ಟೇಷನರಿ ಅಂಗಡಿಯೊಂದರ ಮಾಲೀಕರ ಗಮನ ಬೇರೆಡೆ ಸೆಳೆದು ₹ 50 ಸಾವಿರ ಕಳವು ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಮೈಸೂರಿನ ದಿಲೀಪ್ (34) ಹಾಗೂ ಮಸ್ತಾನ್ (38) ಬಂಧಿತರು. ಆಟೊ ಚಾಲಕರಾಗಿರುವ ಇವರು ಆಗಾಗ ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ಮೈಸೂರಿಗೆ ವಾಪಸು ಹೋಗುತ್ತಿದ್ದರು. ಕಳ್ಳತನದ ಹಣದಲ್ಲೇ ಪಾರ್ಟಿ ಮಾಡುತ್ತಿದ್ದರು. ಐಷಾರಾಮಿ ಜೀವನಕ್ಕೂ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಬನಶಂಕರಿ ಮೂರನೇ ಹಂತದ ಇಟ್ಟಮಡು ಮುಖ್ಯರಸ್ತೆಯಲ್ಲಿ ಲೋಕೇಶ್ ಎಂಬುವರು ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದೇ 2ರಂದು ಅಂಗಡಿಗೆ ಹೋಗಿದ್ದ ಆರೋಪಿಯೊಬ್ಬ 6 ಪುಸ್ತಕ ಖರೀದಿಸಿಕೊಂಡು ಹೋಗಿದ್ದ. ಕೆಲ ನಿಮಿಷಗಳ ನಂತರ ವಾಪಸು ಬಂದು ಬೇರೆ ಕಂಪನಿ ಪುಸ್ತಕ ನೀಡುವಂತೆ ತಿಳಿಸಿದ್ದ. ಲೋಕೇಶ್ ಅವರು ಗೋದಾಮಿಗೆ ಹೋಗಿ ಪುಸ್ತಕ ತಂದುಕೊಟ್ಟಿದ್ದರು.’</p>.<p>‘ಅದೇ ಸಮಯಕ್ಕೆ ಮತ್ತಿಬ್ಬರು ಆರೋಪಿಗಳು ಅಂಗಡಿಗೆ ಬಂದಿದ್ದರು. ಒಬ್ಬಾತ ಥರ್ಮಕೋಲ್ ಕೇಳಿದ್ದ. ಇನ್ನೊಬ್ಬ ಕಾರ್ಡ್ಬೋರ್ಡ್ ಶೀಟ್ ಕೊಡುವಂತೆ ಹೇಳಿದ್ದ. ಅವುಗಳನ್ನು ತರಲೆಂದು ಲೋಕೇಶ್ ಪುನಃ ಗೋದಾಮಿಗೆ ಹೋಗಿದ್ದರು. ಅವರು ವಾಪಸು ಬರುವಷ್ಟರಲ್ಲೇ ಆರೋಪಿಗಳು ಅಂಗಡಿಯ ನಗದು ಪೆಟ್ಟಿಗೆಯಲ್ಲಿದ್ದ ₹50 ಸಾವಿರವನ್ನು ಕದ್ದುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.</p>.<p class="Subhead"><strong>ಬಾಡಿಗೆ ಬೈಕ್ನಲ್ಲಿ ಸುತ್ತಾಟ: </strong>‘ಹಣದ ಅವಶ್ಯಕತೆ ಇದ್ದಾಗಲೆಲ್ಲ ಆರೋಪಿಗಳು, ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ರೈಲಿನಲ್ಲಿ ಬೆಂಗಳೂರಿಗೆ ಬಂದು, ಇಲ್ಲಿ ಬಾಡಿಗೆ ಬೈಕ್ನಲ್ಲಿ ಸುತ್ತಾಡುತ್ತಿದ್ದರು. ಕಡಿಮೆ ಗ್ರಾಹಕರು ಇರುವ ಅಂಗಡಿ<br />ಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<p>‘ವಿಜಯನಗರ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>