ಬಳಿಕ ಬೆಳ್ಳಿ ರಥದಲ್ಲಿ ಶ್ರೀ ಸ್ವಾಮಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಗೌರಿಮಾರು ಕಟ್ಟೆಗೆ ಕೊಂಡುಹೋಗಿ ಅಲ್ಲಿ ಅಷ್ಟಾವಧಾನ ಪೂಜೆ ನಡೆಯಿತು. ನಂತರ ಭವ್ಯ ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಮಂದಿ ಭಕ್ತಾದಿಗಳು ದೀಪೋತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು. 648 ಕಲಾ ತಂಡಗಳ 3,200 ಮಂದಿ ಕಲಾವಿದರು ವಾಲಗ, ಶಂಖ, ತಾಳ, ಜಾಗಟೆ, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು.