<p><strong>ತುಮಕೂರು</strong>: ಟಿಕ್–ಟಾಕ್ ಮಾಡಲು ಹೋಗಿ ಬೆನ್ನುಹುರಿ (ಸ್ಪೈನಲ್ ಕಾರ್ಡ್) ಮುರಿದುಕೊಂಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ (23) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟರು.</p>.<p>ಕುಮಾರ್ ಆರ್ಕೆಸ್ಟ್ರಾದಲ್ಲಿ ಗಾಯಕ ಹಾಗೂ ನೃತ್ಯಪಟುವಾಗಿದ್ದರು. ಅಲ್ಲದೆ ಕೆಲವು ಶಾಲೆಗಳ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದರು. ಜೂನ್ 15 ರಂದು ಗ್ರಾಮದ ಶಾಲಾ ಮೈದಾನದಲ್ಲಿ ಸ್ನೇಹಿತರ ಜೊತೆ ಟಿಕ್–ಟಾಕ್ ಮಾಡುತ್ತಿದ್ದರು. ಈ ವೇಳೆ ಹಿಮ್ಮುಖವಾಗಿ ಪಲ್ಟಿ ಹೊಡೆದಾಗ ಕುತ್ತಿಗೆ ನೆಲಕ್ಕೆ ಬಡಿದಿತ್ತು. ಆ ರಭಸಕ್ಕೆ ಬೆನ್ನುಹುರಿ ಪೂರ್ಣವಾಗಿ ಮುರಿದಿತ್ತು.</p>.<p>ಬಡ ಕುಟುಂಬದ ಕುಮಾರ್, ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದರು. ತಂದೆ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆರ್ಕೆಸ್ಟ್ರಾಗಳಲ್ಲಿನ ದುಡಿಮೆಯೇ ಕುಟುಂಬ ನಿರ್ವಹಣೆಗೆ ಮೂಲವಾಗಿತ್ತು. ಇವರು ಚೇತರಿಸಿಕೊಳ್ಳುವ ಕುರಿತು ವೈದ್ಯರು ಸ್ಪಷ್ಟವಾದ ಭರವಸೆ ನೀಡಿರಲಿಲ್ಲ.</p>.<p>‘ಕುಮಾರ್ ದುಡಿಮೆಯಿಂದಲೇ ಕುಟುಂಬದ ಬದುಕು ಸಾಗುತ್ತಿತ್ತು. ಅವನಿಗೆ ನೃತ್ಯಶಾಲೆ ಆರಂಭಿಸುವ ಆಸೆಯೂ ಇತ್ತು. ಈಗ ಎಲ್ಲವೂ ಮಣ್ಣು ಪಾಲಾಗಿದೆ’ ಎಂದು ಕುಮಾರ್ ಚಿಕ್ಕಮ್ಮ ನಾಗವೇಣಿ ಕಣ್ಣೀರಿಟ್ಟರು.</p>.<p>ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆ ಹೊರಹಾಕಿದರೆ ಮತ್ತಷ್ಟು ಅವಕಾಶ ದೊರೆಯುತ್ತದೆ ಎನ್ನುವ ಆಸೆಯಿಂದ ಕುಮಾರ್ ಟಿಕ್–ಟಾಕ್ ಮಾಡಲು ಮುಂದಾಗಿದ್ದರು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಟಿಕ್–ಟಾಕ್ ಮಾಡಲು ಹೋಗಿ ಬೆನ್ನುಹುರಿ (ಸ್ಪೈನಲ್ ಕಾರ್ಡ್) ಮುರಿದುಕೊಂಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ (23) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟರು.</p>.<p>ಕುಮಾರ್ ಆರ್ಕೆಸ್ಟ್ರಾದಲ್ಲಿ ಗಾಯಕ ಹಾಗೂ ನೃತ್ಯಪಟುವಾಗಿದ್ದರು. ಅಲ್ಲದೆ ಕೆಲವು ಶಾಲೆಗಳ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದರು. ಜೂನ್ 15 ರಂದು ಗ್ರಾಮದ ಶಾಲಾ ಮೈದಾನದಲ್ಲಿ ಸ್ನೇಹಿತರ ಜೊತೆ ಟಿಕ್–ಟಾಕ್ ಮಾಡುತ್ತಿದ್ದರು. ಈ ವೇಳೆ ಹಿಮ್ಮುಖವಾಗಿ ಪಲ್ಟಿ ಹೊಡೆದಾಗ ಕುತ್ತಿಗೆ ನೆಲಕ್ಕೆ ಬಡಿದಿತ್ತು. ಆ ರಭಸಕ್ಕೆ ಬೆನ್ನುಹುರಿ ಪೂರ್ಣವಾಗಿ ಮುರಿದಿತ್ತು.</p>.<p>ಬಡ ಕುಟುಂಬದ ಕುಮಾರ್, ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದರು. ತಂದೆ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆರ್ಕೆಸ್ಟ್ರಾಗಳಲ್ಲಿನ ದುಡಿಮೆಯೇ ಕುಟುಂಬ ನಿರ್ವಹಣೆಗೆ ಮೂಲವಾಗಿತ್ತು. ಇವರು ಚೇತರಿಸಿಕೊಳ್ಳುವ ಕುರಿತು ವೈದ್ಯರು ಸ್ಪಷ್ಟವಾದ ಭರವಸೆ ನೀಡಿರಲಿಲ್ಲ.</p>.<p>‘ಕುಮಾರ್ ದುಡಿಮೆಯಿಂದಲೇ ಕುಟುಂಬದ ಬದುಕು ಸಾಗುತ್ತಿತ್ತು. ಅವನಿಗೆ ನೃತ್ಯಶಾಲೆ ಆರಂಭಿಸುವ ಆಸೆಯೂ ಇತ್ತು. ಈಗ ಎಲ್ಲವೂ ಮಣ್ಣು ಪಾಲಾಗಿದೆ’ ಎಂದು ಕುಮಾರ್ ಚಿಕ್ಕಮ್ಮ ನಾಗವೇಣಿ ಕಣ್ಣೀರಿಟ್ಟರು.</p>.<p>ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆ ಹೊರಹಾಕಿದರೆ ಮತ್ತಷ್ಟು ಅವಕಾಶ ದೊರೆಯುತ್ತದೆ ಎನ್ನುವ ಆಸೆಯಿಂದ ಕುಮಾರ್ ಟಿಕ್–ಟಾಕ್ ಮಾಡಲು ಮುಂದಾಗಿದ್ದರು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>