<p><strong>ಕೂಡ್ಲಿಗಿ (ಬಳ್ಳಾರಿ):</strong> ತಾಲ್ಲೂಕಿನ ನಿಂಬಳಗೆರೆಯ ರೈತ ಬಿ.ಎಂ.ವಾಗೀಶ್ ಒಂದೂವರೆ ಎಕರೆ ಹೊಲದಲ್ಲಿ ಟೊಮೆಟೊ ಬೆಳೆ ಕೊಳೆಯುತ್ತಿದ್ದರೆ, ಎರಡು ಎಕರೆಯ ದಾಳಿಂಬೆ ತೋಟ ನೀರಿಲ್ಲದೆ ಸಂಪೂರ್ಣ ಒಣಗುವ ಹಂತವನ್ನು ತಲುಪಿದೆ.</p>.<p>ನೀರಿನ ಕೊರತೆ ಕಾರಣ ಐದು ಎಕರೆ ದಾಳಿಂಬೆ ತೋಟದ ಪೈಕಿ ಮೂರು ಎಕರೆಯಲ್ಲಿ ಗಿಡಗಳನ್ನು ತೆಗೆದು, ಅದರಲ್ಲಿ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಬೆಳೆ ಬರುವ ಹೊತ್ತಿಗೆ ಬಂದ ಲಾಕ್ಡೌನ್ನಿಂದ ಬೆಲೆ ಕುಸಿದಿತ್ತು.</p>.<p>‘18 ಕೆ.ಜಿಯ ಬಾಕ್ಸ್ಗೆ ₹60ರಿಂದ 70 ಇದ್ದ ದರ ₹30ಕ್ಕೆ ಕುಸಿದಿದೆ. ಕಟಾವು ಕೂಲಿಯೂ ಸಿಗುತ್ತಿಲ್ಲ. ಹೊಲದಲ್ಲಿಯೇ ಉಳಿದ ಟೊಮೆಟೊ ಕೊಳೆಯುತ್ತಿದೆ. ಜಮೀನನ್ನು ಕಳೆ ಆವರಿಸುತ್ತಿದೆ’ ಎಂದು ವಾಗೀಶ್ ವಿಷಾದಿಸಿದರು.</p>.<p>‘ಎಂಟು ವರ್ಷಗಳ ಹಿಂದೆ ದಾಳಿಂಬೆ ಗಿಡಗಳನ್ನು ನಾಟಿ ಮಾಡಿದ್ದೆ. ಮಳೆ ಕೊರತೆ ಎರಡು ಕೊಳವೆ ಬಾವಿಯಲ್ಲೂ ನೀರು ಕಡಿ<br />ಮೆಯಾದವು. ಗಿಡಗಳು ಫಸಲುಬಿಡುವ ಶಕ್ತಿಯನ್ನು ಕಳೆದುಕೊಂಡವು’ ಎಂದು ಹೇಳುತ್ತಾರೆ.</p>.<p>‘ಈಗ ಕೊಳವೆ ಬಾವಿಯಲ್ಲಿ ಸ್ವಲ್ಪ ನೀರಿದೆ. ಆದರೆ ಚೇತರಿಸಿಕೊಳ್ಳುವ ಸಾಮರ್ಥ್ಯ ದಾಳಿಂಬೆ ಗಿಡಗಳಿಗಿಲ್ಲ. ಅವುಗಳನ್ನೂ ತೆಗೆದು ಅಲ್ಪಾವಧಿ ಬೆಳೆ ಬೆಳೆಯುವ ಚಿಂತನೆ ಇದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ (ಬಳ್ಳಾರಿ):</strong> ತಾಲ್ಲೂಕಿನ ನಿಂಬಳಗೆರೆಯ ರೈತ ಬಿ.ಎಂ.ವಾಗೀಶ್ ಒಂದೂವರೆ ಎಕರೆ ಹೊಲದಲ್ಲಿ ಟೊಮೆಟೊ ಬೆಳೆ ಕೊಳೆಯುತ್ತಿದ್ದರೆ, ಎರಡು ಎಕರೆಯ ದಾಳಿಂಬೆ ತೋಟ ನೀರಿಲ್ಲದೆ ಸಂಪೂರ್ಣ ಒಣಗುವ ಹಂತವನ್ನು ತಲುಪಿದೆ.</p>.<p>ನೀರಿನ ಕೊರತೆ ಕಾರಣ ಐದು ಎಕರೆ ದಾಳಿಂಬೆ ತೋಟದ ಪೈಕಿ ಮೂರು ಎಕರೆಯಲ್ಲಿ ಗಿಡಗಳನ್ನು ತೆಗೆದು, ಅದರಲ್ಲಿ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಬೆಳೆ ಬರುವ ಹೊತ್ತಿಗೆ ಬಂದ ಲಾಕ್ಡೌನ್ನಿಂದ ಬೆಲೆ ಕುಸಿದಿತ್ತು.</p>.<p>‘18 ಕೆ.ಜಿಯ ಬಾಕ್ಸ್ಗೆ ₹60ರಿಂದ 70 ಇದ್ದ ದರ ₹30ಕ್ಕೆ ಕುಸಿದಿದೆ. ಕಟಾವು ಕೂಲಿಯೂ ಸಿಗುತ್ತಿಲ್ಲ. ಹೊಲದಲ್ಲಿಯೇ ಉಳಿದ ಟೊಮೆಟೊ ಕೊಳೆಯುತ್ತಿದೆ. ಜಮೀನನ್ನು ಕಳೆ ಆವರಿಸುತ್ತಿದೆ’ ಎಂದು ವಾಗೀಶ್ ವಿಷಾದಿಸಿದರು.</p>.<p>‘ಎಂಟು ವರ್ಷಗಳ ಹಿಂದೆ ದಾಳಿಂಬೆ ಗಿಡಗಳನ್ನು ನಾಟಿ ಮಾಡಿದ್ದೆ. ಮಳೆ ಕೊರತೆ ಎರಡು ಕೊಳವೆ ಬಾವಿಯಲ್ಲೂ ನೀರು ಕಡಿ<br />ಮೆಯಾದವು. ಗಿಡಗಳು ಫಸಲುಬಿಡುವ ಶಕ್ತಿಯನ್ನು ಕಳೆದುಕೊಂಡವು’ ಎಂದು ಹೇಳುತ್ತಾರೆ.</p>.<p>‘ಈಗ ಕೊಳವೆ ಬಾವಿಯಲ್ಲಿ ಸ್ವಲ್ಪ ನೀರಿದೆ. ಆದರೆ ಚೇತರಿಸಿಕೊಳ್ಳುವ ಸಾಮರ್ಥ್ಯ ದಾಳಿಂಬೆ ಗಿಡಗಳಿಗಿಲ್ಲ. ಅವುಗಳನ್ನೂ ತೆಗೆದು ಅಲ್ಪಾವಧಿ ಬೆಳೆ ಬೆಳೆಯುವ ಚಿಂತನೆ ಇದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>