<p><strong>ತುಮಕೂರು: </strong>ಸಿದ್ದಗಂಗಾಮಠದ ವಸತಿ ಶಾಲೆಯ ವಿವಿಧ ತರಗತಿ ಪ್ರವೇಶಕ್ಕೆ ಅರ್ಜಿ ಪಡೆದ ಸಾವಿರಾರು ಪೋಷಕರು ಮಕ್ಕಳೊಂದಿಗೆ ಭಾನುವಾರ ಮಠದಲ್ಲಿ ನಡೆದ ಪ್ರವೇಶ ಪೂರ್ವ ಸಂದರ್ಶನಕ್ಕೆ ಹಾಜರಾಗಿದ್ದರು.</p>.<p>ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಅವರೇ ಮಕ್ಕಳು ಮತ್ತು ಪೋಷಕರ ಸಂದರ್ಶನ ನಡೆಸುತ್ತಾರೆ. ಭಾನುವಾರ ರಾಜ್ಯದ ವಿವಿಧ ಕಡೆಯ ಪೋಷಕರು ಪ್ರವೇಶಕ್ಕೆ ಮಕ್ಕಳನ್ನು ಕರೆ ತಂದಿದ್ದರು.</p>.<p>ಸ್ವಾಮೀಜಿ ಅವರ ಆಡಳಿತ ಕೊಠಡಿ ಮುಂಭಾಗದ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದರು.ಸುಡುಬಿಸಿಲಲ್ಲೇ ಗಂಟೆಗಟ್ಟಲೆ ಕಾದು ನಿಂತಿದ್ದರು. ಭಾನುವಾರ ಮಠದ ಆವರಣ ಪೋಷಕರು, ಮಕ್ಕಳಿಂದ ತುಂಬಿತ್ತು.</p>.<p>ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿ ಪ್ರವೇಶ ಕಡಿಮೆ ಮಾಡಿದ್ದು, ಎಂಟುವರೆ ಸಾವಿರ ಅರ್ಜಿ ವಿತರಿಸಿ ಸ್ಥಗಿತ ಮಾಡಲಾಗಿದೆ ಎಂದು ಹದಿನೈದು ದಿನಗಳ ಹಿಂದೆಯೇ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹೇಳಿದ್ದರು.</p>.<p>ಆದಾಗ್ಯೂ ಮಠದ ವಸತಿ ಶಾಲೆಗೆ ಪ್ರವೇಶ ಕೋರಿ ಪೋಷಕರು, ಮಕ್ಕಳು ಬರುತ್ತಲೇ ಇದ್ದಾರೆ. ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಸಿದ್ದಗಂಗಾಮಠದ ವಸತಿ ಶಾಲೆಯ ವಿವಿಧ ತರಗತಿ ಪ್ರವೇಶಕ್ಕೆ ಅರ್ಜಿ ಪಡೆದ ಸಾವಿರಾರು ಪೋಷಕರು ಮಕ್ಕಳೊಂದಿಗೆ ಭಾನುವಾರ ಮಠದಲ್ಲಿ ನಡೆದ ಪ್ರವೇಶ ಪೂರ್ವ ಸಂದರ್ಶನಕ್ಕೆ ಹಾಜರಾಗಿದ್ದರು.</p>.<p>ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಅವರೇ ಮಕ್ಕಳು ಮತ್ತು ಪೋಷಕರ ಸಂದರ್ಶನ ನಡೆಸುತ್ತಾರೆ. ಭಾನುವಾರ ರಾಜ್ಯದ ವಿವಿಧ ಕಡೆಯ ಪೋಷಕರು ಪ್ರವೇಶಕ್ಕೆ ಮಕ್ಕಳನ್ನು ಕರೆ ತಂದಿದ್ದರು.</p>.<p>ಸ್ವಾಮೀಜಿ ಅವರ ಆಡಳಿತ ಕೊಠಡಿ ಮುಂಭಾಗದ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದರು.ಸುಡುಬಿಸಿಲಲ್ಲೇ ಗಂಟೆಗಟ್ಟಲೆ ಕಾದು ನಿಂತಿದ್ದರು. ಭಾನುವಾರ ಮಠದ ಆವರಣ ಪೋಷಕರು, ಮಕ್ಕಳಿಂದ ತುಂಬಿತ್ತು.</p>.<p>ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿ ಪ್ರವೇಶ ಕಡಿಮೆ ಮಾಡಿದ್ದು, ಎಂಟುವರೆ ಸಾವಿರ ಅರ್ಜಿ ವಿತರಿಸಿ ಸ್ಥಗಿತ ಮಾಡಲಾಗಿದೆ ಎಂದು ಹದಿನೈದು ದಿನಗಳ ಹಿಂದೆಯೇ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹೇಳಿದ್ದರು.</p>.<p>ಆದಾಗ್ಯೂ ಮಠದ ವಸತಿ ಶಾಲೆಗೆ ಪ್ರವೇಶ ಕೋರಿ ಪೋಷಕರು, ಮಕ್ಕಳು ಬರುತ್ತಲೇ ಇದ್ದಾರೆ. ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>