<p><strong>ಲಿಂಗಸುಗೂರು (ರಾಯಚೂರು ಜಿಲ್ಲೆ):</strong> ತಾಲ್ಲೂಕಿನ ಗಲಗಿನವರ ದೊಡ್ಡಿಯಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಜನರು ಪರಿತಪಿಸುವಂತಾಗಿದೆ. ನಾರಾಯ ಣಪುರ ಬಲದಂಡೆ ಮುಖ್ಯ ನಾಲೆಯ ಕೊರಕಲು ಕಲ್ಲು ಬಂಡೆಗಳ ಮಧ್ಯೆಯೇ 150 ಅಡಿ ಆಳಕ್ಕೆ ಜೀವಭಯದಲ್ಲಿ ಇಳಿದು ಜನರು ನೀರು ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.</p>.<p>‘ಕಲ್ಲುಬಂಡೆಗಳ ಮಧ್ಯೆ ಸಿಗುವ ಕಾಲುವೆ ನೀರನ್ನೇ ನಿತ್ಯ ಬಳಸುತ್ತಿದ್ದು, ಜಾನುವಾರುಗಳಿಗೂ ಕುಡಿಸುತ್ತೇವೆ.ನೀರಿನ ಸಮಸ್ಯೆ ಪರಿಹರಿಸಲು ಪರ್ಯಾಯ ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಕೋರಿದರೂ ಯಾವುದೇ ಪ್ರಯೋಜನ ವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.</p>.<p>ದೇವರಭೂಪುರ ಗ್ರಾಮ ಪಂ ವ್ಯಾಪ್ತಿಯ ಗಲಗಿನವರ ದೊಡ್ಡಿಯಲ್ಲಿ 50 ಕುಟುಂಬದವರು ತಮ್ಮ ಜಮೀನುಗಳಲ್ಲಿ ಮನೆ ಮಾಡಿಕೊಂಡು ವಾಸವಿದ್ದಾರೆ.</p>.<p>‘ಪೂಜಾರೆರ ದೊಡ್ಡಿ, ಆನೆಹೊಸೂರರ ದೊಡ್ಡಿ, ಸಿದ್ದಾನವರ ದೊಡ್ಡಿ ಸೇರಿದಂತೆ ಇತರೆ ದೊಡ್ಡಿಗಳಿಗೂ ನೀರಿನ ಸಮಸ್ಯೆ ವ್ಯಾಪಿಸಿದೆ. ದೊಡ್ಡಿಗಳ ನಿವಾಸಿಗಳು 2 ರಿಂದ 3 ಕಿ.ಮೀ. ನಡೆದು ಖಾಸಗಿ ತೋಟಗಳಿಂದ ನೀರು ತರುತ್ತಾರೆ. ಕೃಷ್ಣಾ ನದಿ ಪಾತ್ರದ ದೊಡ್ಡಿ ಜನ ನದಿಯ ಗುಂಡಿಗಳಲ್ಲಿ ನಿಂತ ಕಲುಷಿತ ನೀರನ್ನೇಇಂದಿಗೂ ಬಳಸುತ್ತಿದ್ದಾರೆ’ ಎಂದು ಮುಖಂಡ ಬಸವರಾಜ ಹೇಳುತ್ತಾರೆ.</p>.<p>‘ಗಲಗಿನವರದೊಡ್ಡಿಗೆ ಕೊಳವೆಬಾವಿ ಕೊರೆದು ಮೋಟರ್ ಕೂಡ ಇಳಿಸಲಾಗಿದೆ. ಗುತ್ತಿಗೆದಾರರನ್ನು ಕರೆಯಿಸಿ ಸಮಸ್ಯೆ ಪರಿಹರಿಸಲಾಗುವುದು. 80 ಕೈಪಂಪ್, 15 ಕಿರುನೀರು ಸರಬರಾಜು, 4 ಓವರ್ಹೆಡ್ ಟ್ಯಾಂಕ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಪಿಡಿಒ ಸದಾನಂದ ಆರೆನಾಡ ತಿಳಿಸಿದರು.</p>.<p><strong>‘ದ.ಆಫ್ರಿಕಾಗಿಂತ ಸಮಸ್ಯೆ ಭೀಕರ’</strong><br /><strong>ರಾಯಚೂರು: ‘</strong>ನೀರಿನ ಸಮಸ್ಯೆ ಬಗ್ಗೆ ದಕ್ಷಿಣ ಆಫ್ರಿಕಾದಲ್ಲಿ ಸಭೆ ನಡೆಸಿದ ಅನುಭವ ಆಗುತ್ತಿದೆ. ಆದರೆ, ಸಮಸ್ಯೆ ನೋಡಲು ಅಷ್ಟು ದೂರ ಹೋಗುವ ಅಗತ್ಯವಿಲ್ಲ. ರಾಯಚೂರು ಜಿಲ್ಲೆಯಲ್ಲೇ ಆ ಸ್ಥಿತಿ ಇದೆ’ ಎಂದುಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯ್ಕ್ ಕಳವಳ ವ್ಯಕ್ತಪಡಿಸಿದರು.</p>.<p>‘20 ವರ್ಷಗಳ ಹಿಂದೆ ರಾಯಚೂರು ಹೇಗಿತ್ತೊ, ಈಗಲೂ ಹಾಗೇ ಇದೆ. ಅಧಿಕಾರಿಗಳುಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ವಸ್ತುಸ್ಥಿತಿ ವರದಿಯನ್ನು ಸಂಗ್ರಹಿಸಿಲ್ಲ’ಎಂದು ಶುಕ್ರವಾರ ಇಲ್ಲಿಬರಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</p>.<p>‘ಜಿಲ್ಲೆಯ 30 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಲಿಂಗಸುಗೂರು ತಾಲ್ಲೂಕಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ’ ಎಂದು ಅಧಿಕಾರಿಗಳು ನೀಡಿದ ವಿವರಣೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p>.<p>**<br />ಗಲಗಿನವರ ದೊಡ್ಡಿಯಲ್ಲಿ ನೀರು ಪೂರೈಕೆಗೆ ಕೊಳವೆಬಾವಿ ಕೊರೆಸಲು ಸೂಚಿಸಲಾಗಿತ್ತು. ಅಧಿಕಾರಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.<br /><em><strong>-ಪ್ರಕಾಶ ವಡ್ಡರ, ಇಒ ತಾಪಂ</strong></em></p>.<p>**<br />ಕುಡಿಯುವ ನೀರಿನ ನಿರ್ವಹಣೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಆದರೂ ಕೂಡ ಗಲಗಿನವರ ದೊಡ್ಡಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.<br /><em><strong>-ರಾಜಶೇಖರ ಡಂಬಳ, ಎಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು (ರಾಯಚೂರು ಜಿಲ್ಲೆ):</strong> ತಾಲ್ಲೂಕಿನ ಗಲಗಿನವರ ದೊಡ್ಡಿಯಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಜನರು ಪರಿತಪಿಸುವಂತಾಗಿದೆ. ನಾರಾಯ ಣಪುರ ಬಲದಂಡೆ ಮುಖ್ಯ ನಾಲೆಯ ಕೊರಕಲು ಕಲ್ಲು ಬಂಡೆಗಳ ಮಧ್ಯೆಯೇ 150 ಅಡಿ ಆಳಕ್ಕೆ ಜೀವಭಯದಲ್ಲಿ ಇಳಿದು ಜನರು ನೀರು ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.</p>.<p>‘ಕಲ್ಲುಬಂಡೆಗಳ ಮಧ್ಯೆ ಸಿಗುವ ಕಾಲುವೆ ನೀರನ್ನೇ ನಿತ್ಯ ಬಳಸುತ್ತಿದ್ದು, ಜಾನುವಾರುಗಳಿಗೂ ಕುಡಿಸುತ್ತೇವೆ.ನೀರಿನ ಸಮಸ್ಯೆ ಪರಿಹರಿಸಲು ಪರ್ಯಾಯ ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಕೋರಿದರೂ ಯಾವುದೇ ಪ್ರಯೋಜನ ವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.</p>.<p>ದೇವರಭೂಪುರ ಗ್ರಾಮ ಪಂ ವ್ಯಾಪ್ತಿಯ ಗಲಗಿನವರ ದೊಡ್ಡಿಯಲ್ಲಿ 50 ಕುಟುಂಬದವರು ತಮ್ಮ ಜಮೀನುಗಳಲ್ಲಿ ಮನೆ ಮಾಡಿಕೊಂಡು ವಾಸವಿದ್ದಾರೆ.</p>.<p>‘ಪೂಜಾರೆರ ದೊಡ್ಡಿ, ಆನೆಹೊಸೂರರ ದೊಡ್ಡಿ, ಸಿದ್ದಾನವರ ದೊಡ್ಡಿ ಸೇರಿದಂತೆ ಇತರೆ ದೊಡ್ಡಿಗಳಿಗೂ ನೀರಿನ ಸಮಸ್ಯೆ ವ್ಯಾಪಿಸಿದೆ. ದೊಡ್ಡಿಗಳ ನಿವಾಸಿಗಳು 2 ರಿಂದ 3 ಕಿ.ಮೀ. ನಡೆದು ಖಾಸಗಿ ತೋಟಗಳಿಂದ ನೀರು ತರುತ್ತಾರೆ. ಕೃಷ್ಣಾ ನದಿ ಪಾತ್ರದ ದೊಡ್ಡಿ ಜನ ನದಿಯ ಗುಂಡಿಗಳಲ್ಲಿ ನಿಂತ ಕಲುಷಿತ ನೀರನ್ನೇಇಂದಿಗೂ ಬಳಸುತ್ತಿದ್ದಾರೆ’ ಎಂದು ಮುಖಂಡ ಬಸವರಾಜ ಹೇಳುತ್ತಾರೆ.</p>.<p>‘ಗಲಗಿನವರದೊಡ್ಡಿಗೆ ಕೊಳವೆಬಾವಿ ಕೊರೆದು ಮೋಟರ್ ಕೂಡ ಇಳಿಸಲಾಗಿದೆ. ಗುತ್ತಿಗೆದಾರರನ್ನು ಕರೆಯಿಸಿ ಸಮಸ್ಯೆ ಪರಿಹರಿಸಲಾಗುವುದು. 80 ಕೈಪಂಪ್, 15 ಕಿರುನೀರು ಸರಬರಾಜು, 4 ಓವರ್ಹೆಡ್ ಟ್ಯಾಂಕ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಪಿಡಿಒ ಸದಾನಂದ ಆರೆನಾಡ ತಿಳಿಸಿದರು.</p>.<p><strong>‘ದ.ಆಫ್ರಿಕಾಗಿಂತ ಸಮಸ್ಯೆ ಭೀಕರ’</strong><br /><strong>ರಾಯಚೂರು: ‘</strong>ನೀರಿನ ಸಮಸ್ಯೆ ಬಗ್ಗೆ ದಕ್ಷಿಣ ಆಫ್ರಿಕಾದಲ್ಲಿ ಸಭೆ ನಡೆಸಿದ ಅನುಭವ ಆಗುತ್ತಿದೆ. ಆದರೆ, ಸಮಸ್ಯೆ ನೋಡಲು ಅಷ್ಟು ದೂರ ಹೋಗುವ ಅಗತ್ಯವಿಲ್ಲ. ರಾಯಚೂರು ಜಿಲ್ಲೆಯಲ್ಲೇ ಆ ಸ್ಥಿತಿ ಇದೆ’ ಎಂದುಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯ್ಕ್ ಕಳವಳ ವ್ಯಕ್ತಪಡಿಸಿದರು.</p>.<p>‘20 ವರ್ಷಗಳ ಹಿಂದೆ ರಾಯಚೂರು ಹೇಗಿತ್ತೊ, ಈಗಲೂ ಹಾಗೇ ಇದೆ. ಅಧಿಕಾರಿಗಳುಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ವಸ್ತುಸ್ಥಿತಿ ವರದಿಯನ್ನು ಸಂಗ್ರಹಿಸಿಲ್ಲ’ಎಂದು ಶುಕ್ರವಾರ ಇಲ್ಲಿಬರಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</p>.<p>‘ಜಿಲ್ಲೆಯ 30 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಲಿಂಗಸುಗೂರು ತಾಲ್ಲೂಕಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ’ ಎಂದು ಅಧಿಕಾರಿಗಳು ನೀಡಿದ ವಿವರಣೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p>.<p>**<br />ಗಲಗಿನವರ ದೊಡ್ಡಿಯಲ್ಲಿ ನೀರು ಪೂರೈಕೆಗೆ ಕೊಳವೆಬಾವಿ ಕೊರೆಸಲು ಸೂಚಿಸಲಾಗಿತ್ತು. ಅಧಿಕಾರಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.<br /><em><strong>-ಪ್ರಕಾಶ ವಡ್ಡರ, ಇಒ ತಾಪಂ</strong></em></p>.<p>**<br />ಕುಡಿಯುವ ನೀರಿನ ನಿರ್ವಹಣೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಆದರೂ ಕೂಡ ಗಲಗಿನವರ ದೊಡ್ಡಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.<br /><em><strong>-ರಾಜಶೇಖರ ಡಂಬಳ, ಎಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>