<p><strong>ದ್ವಾರಕ</strong>: ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ ಅಂಬಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಜಾಮ್ನಗರದಿಂದ ದ್ವಾರಕಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. </p><p>ಪಾದಾಯಾತ್ರೆ ಹೋಗುತ್ತಿರುವ ವೇಳೆ ದ್ವಾರಕ ಜಿಲ್ಲೆಯ ಖಂಬಲಿಯಾ ಪಟ್ಟಣ ಬಳಿ ಟ್ರಕ್ವೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ಸಾಗಿಸುತ್ತಿರುವುದನ್ನು ಕಂಡ ಅವರು, ಟ್ರಕ್ ಅನ್ನು ನಿಲ್ಲಿಸುವಂತೆ ಹೇಳಿದ್ದಾರೆ. ವಧೆ ಮಾಡುವುದಕ್ಕಾಗಿ ಕೋಳಿಗಳನ್ನು ಸಾಗಿಸುತ್ತಿರುವುದಾಗಿ ತಿಳಿದ ಅವರು ಕೋಳಿಗಳನ್ನು ಕೊಲ್ಲದಂತೆ ಹೇಳಿದ್ದಾರೆ.</p><p>ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೋಳಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಅನಂತ್ ಅವರು, ಎಲ್ಲಾ ಕೋಳಿಗಳನ್ನು ರಕ್ಷಿಸುವಂತೆ ತಮ್ಮ ತಂಡದ ಸದಸ್ಯರಲ್ಲಿ ಒಬ್ಬರಿಗೆ ಸೂಚಿಸುತ್ತಿರುವುದನ್ನು ಕಾಣಬಹುದು. ಅದರ ಹಣವನ್ನು ಮಾಲೀಕರಿಗೆ ಪಾವತಿಸುವಂತೆಯೂ ಹೇಳಿದ್ದಾರೆ.</p>.<p>ಈ ಕೋಳಿಗಳನ್ನು ವಂತರಾ ವನ್ಯಜೀವಿ ಕೇಂದ್ರಕ್ಕೆ ಸಾಗಿಸುವುದಾಗಿ ಅವರ ತಂಡ ತಿಳಿಸಿದೆ.</p><p>ಅನಂತ್ ಅಂಬಾನಿ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ರೀತಿ ವಧೆಗಾಗಿ ಕೊಂಡೊಯ್ಯತ್ತಿರುವ ಕೋಳಿಗಳನ್ನು ರಕ್ಷಿಸುವಂತೆ ಕೆಲ ನೆಟ್ಟಿಗರು ಮನವಿ ಮಾಡಿದ್ದಾರೆ.</p><p>ಅಂತಯೇ, ‘ವಂತರಾ’ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿರುವ ಹುಲಿ, ಸಿಂಹಗಳಿಗೆ ಮಾಂಸದ ಬದಲು ಆಹಾರವಾಗಿ ಹುಲ್ಲು ನೀಡುತ್ತಿರಾ? ಎಂದೂ ಹಲವರು ಪ್ರಶ್ನಿಸಿದ್ದಾರೆ.</p><p>ಏಪ್ರಿಲ್ 10ಕ್ಕೆ ಅನಂತ್ ಅಂಬಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಜಾಮ್ನಗರದಿಂದ ದ್ವಾರಕಕ್ಕೆ ಸುಮಾರು 140 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಏಪ್ರಿಲ್ 8ರಂದು ಅವರು ದ್ವಾರಕ ತಲುಪುವ ಸಾಧ್ಯತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದ್ವಾರಕ</strong>: ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ ಅಂಬಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಜಾಮ್ನಗರದಿಂದ ದ್ವಾರಕಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. </p><p>ಪಾದಾಯಾತ್ರೆ ಹೋಗುತ್ತಿರುವ ವೇಳೆ ದ್ವಾರಕ ಜಿಲ್ಲೆಯ ಖಂಬಲಿಯಾ ಪಟ್ಟಣ ಬಳಿ ಟ್ರಕ್ವೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ಸಾಗಿಸುತ್ತಿರುವುದನ್ನು ಕಂಡ ಅವರು, ಟ್ರಕ್ ಅನ್ನು ನಿಲ್ಲಿಸುವಂತೆ ಹೇಳಿದ್ದಾರೆ. ವಧೆ ಮಾಡುವುದಕ್ಕಾಗಿ ಕೋಳಿಗಳನ್ನು ಸಾಗಿಸುತ್ತಿರುವುದಾಗಿ ತಿಳಿದ ಅವರು ಕೋಳಿಗಳನ್ನು ಕೊಲ್ಲದಂತೆ ಹೇಳಿದ್ದಾರೆ.</p><p>ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೋಳಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಅನಂತ್ ಅವರು, ಎಲ್ಲಾ ಕೋಳಿಗಳನ್ನು ರಕ್ಷಿಸುವಂತೆ ತಮ್ಮ ತಂಡದ ಸದಸ್ಯರಲ್ಲಿ ಒಬ್ಬರಿಗೆ ಸೂಚಿಸುತ್ತಿರುವುದನ್ನು ಕಾಣಬಹುದು. ಅದರ ಹಣವನ್ನು ಮಾಲೀಕರಿಗೆ ಪಾವತಿಸುವಂತೆಯೂ ಹೇಳಿದ್ದಾರೆ.</p>.<p>ಈ ಕೋಳಿಗಳನ್ನು ವಂತರಾ ವನ್ಯಜೀವಿ ಕೇಂದ್ರಕ್ಕೆ ಸಾಗಿಸುವುದಾಗಿ ಅವರ ತಂಡ ತಿಳಿಸಿದೆ.</p><p>ಅನಂತ್ ಅಂಬಾನಿ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ರೀತಿ ವಧೆಗಾಗಿ ಕೊಂಡೊಯ್ಯತ್ತಿರುವ ಕೋಳಿಗಳನ್ನು ರಕ್ಷಿಸುವಂತೆ ಕೆಲ ನೆಟ್ಟಿಗರು ಮನವಿ ಮಾಡಿದ್ದಾರೆ.</p><p>ಅಂತಯೇ, ‘ವಂತರಾ’ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿರುವ ಹುಲಿ, ಸಿಂಹಗಳಿಗೆ ಮಾಂಸದ ಬದಲು ಆಹಾರವಾಗಿ ಹುಲ್ಲು ನೀಡುತ್ತಿರಾ? ಎಂದೂ ಹಲವರು ಪ್ರಶ್ನಿಸಿದ್ದಾರೆ.</p><p>ಏಪ್ರಿಲ್ 10ಕ್ಕೆ ಅನಂತ್ ಅಂಬಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಜಾಮ್ನಗರದಿಂದ ದ್ವಾರಕಕ್ಕೆ ಸುಮಾರು 140 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಏಪ್ರಿಲ್ 8ರಂದು ಅವರು ದ್ವಾರಕ ತಲುಪುವ ಸಾಧ್ಯತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>