<p><strong>ಬೆಂಗಳೂರು:</strong> ‘ಉದ್ಯೋಗ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳುವ ಟ್ರೆಂಡ್ ಟ್ವಿಟರ್ನಲ್ಲಿ ಗುರುವಾರ ಸಾಕಷ್ಟು ಜೋರಾಗಿತ್ತು.#PMModi_RozgarDo (ಪ್ರಧಾನಿ ಮೋದಿ ಉದ್ಯೋಗ ಕೊಡಿ) ಎಂಬ ಹ್ಯಾಶ್ಟ್ಯಾಗ್ ಬಳಸಿರಾತ್ರಿ 8 ಗಂಟೆ ವೇಳೆಗೆ 15.4 ಲಕ್ಷ ಟ್ವೀಟ್ ದಾಖಲಾದವು. 4 ತಾಸು ಟ್ವಿಟರ್ ಇಂಡಿಯಾದಲ್ಲಿ ಅದು ಅಗ್ರ ಟ್ರೆಂಡಿಂಗ್ನಲ್ಲಿತ್ತು. ಜತೆಗೆ #Nation_Hate_Modi ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್ ಸೃಷ್ಟಿಸಿತ್ತು.</p>.<p>ಕೊರೊನಾ ಹಾಗೂ ಅದರಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದಿರುವ ಟ್ವೀಟಿಗರು, ನೌಕರಿ ಕೊಡಿ ಎಂದು ನೇರವಾಗಿಯೇ ಪ್ರಧಾನಿ ಬಳಿ ಮೊರೆ ಇಟ್ಟಿದ್ದಾರೆ. ಲಕ್ಷಾಂತರ ಯುವಕರು ಪ್ರಧಾನಿ ಮೋದಿಯವರ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದಾರೆ.</p>.<p>‘ಉದ್ಯೋಗಗಳು ಎಲ್ಲಿವೆ ಎಂದು ಕೇಳಲುದೇಶ ಬಯಸುತ್ತದೆ. ದೇಶದ ಜನರಿಗೆ ಉದ್ಯೋಗ ಬೇಕೇ<br />ಹೊರತು ಸುಳ್ಳುಗಳಲ್ಲ. ಪ್ರತಿದಿನ ಸರ್ಕಾರಿ ಉದ್ಯೋಗ<br />ಗಳು ಕಡಿಮೆಯಾಗುತ್ತಿವೆ. ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡಬೇಡಿ’ ಎಂದು ದಿಲೀಪ್ ಸತ್ತಾವನ್ (@dilip007meena) ಟ್ವೀಟ್ ಮಾಡಿದ್ದಾರೆ.</p>.<p>ರೋಹಿತ್ ತ್ರಿಪಾಠಿ (@RohitTr34741425) ಎಂಬ ಟ್ವಿಟರ್ ಬಳಕೆದಾರರು ಪ್ರಶ್ನೋತ್ತರ ಮಾದರಿಯಲ್ಲಿ ಟ್ವೀಟ್ ಮಾಡಿದ್ದಾರೆ. ‘2014ರಲ್ಲಿ ಮೋದಿ ಅವರುಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ವಾಗ್ದಾನ ನೀಡಿದ್ದರು. ಆದರೆ 2020ರಲ್ಲಿ ಉದ್ಯೋಗ ಸೃಷ್ಟಿ ಮಾತು ಒತ್ತಟ್ಟಿಗಿರಲಿ, 12 ಲಕ್ಷ ಉದ್ಯೋಗ ನಷ್ಟವಾಗಿದೆ ಎಂಬ ಸುದ್ದಿ ಪ್ರಕಟವಾಗಿದೆ. ವರ್ಷಕ್ಕೆ 2 ಕೋಟಿಯಂತೆ 6 ವರ್ಷಗಳಲ್ಲಿ 12 ಕೋಟಿ ಉದ್ಯೋಗಗಳು ಎಲ್ಲಿವೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ ಮೋದಿ ಅವರು ‘ಯಾವ ಶ್ವಾನ ಸೂಕ್ತ’ ಎಂದು ಸಲಹೆ ನೀಡುವ ಅಸಂಬದ್ಧ ವಿಷಯಗಳನ್ನು ಚರ್ಚಿಸುತ್ತಿದ್ದಾರೆ’ ಎಂದು ತ್ರಿಪಾಠಿ ಆಕ್ರೋಶ ವ್ಯಕ್ತ<br />ಪಡಿಸಿದ್ದಾರೆ.</p>.<p>ಮತ್ತೊಬ್ಬ ಟ್ವಿಟರ್ ಬಳಕೆದಾರ ವಿನೋದ್ (@binod_budy) ಅವರ ಮಾತು ಸರ್ಕಾರ ಉರುಳಿಸುವ ಆಕ್ರೋಶ ಹೊಂದಿತ್ತು. ‘ಮೋದಿ ಸರ್ಕಾರವು ವಿದ್ಯಾರ್ಥಿಗಳನ್ನು ಕಡೆಗಣಿಸುವಂತಿಲ್ಲ. ಕೇಂದ್ರದಲ್ಲಿ ಸರ್ಕಾರವನ್ನು ಬುಡಸಮೇತ ಕಿತ್ತುಹಾಕಲು ವಿದ್ಯಾರ್ಥಿಗಳಿಗೆ ಸಾಧ್ಯವಿದೆ. ಏಕೆಂದರೆ ದೇಶದಲ್ಲಿ ನಿರುದ್ಯೋಗ ಎಂಬುದು ಗರಿಷ್ಠ ಮಟ್ಟವನ್ನು ಮುಟ್ಟಿದೆ’ ಎಂದು ಅವರು ಬರೆದಿದ್ದಾರೆ.</p>.<p>ನಿರುದ್ಯೋಗವನ್ನು ಬಗಲಲ್ಲಿ ಇಟ್ಟುಕೊಂಡು ಪ್ರಧಾನಿ ಘೋಷಿಸಿದ ಆತ್ಮನಿರ್ಭರ ಭಾರತವನ್ನು ಹೇಗೆ ಸಾಕಾರಗೊಳಿಸಲು ಸಾಧ್ಯ ಎಂದುಅಶ್ವನಿ ಕುತಾರ್ ಎಂಬುವವರು ಪ್ರಶ್ನೆ ಎತ್ತಿದ್ದಾರೆ.</p>.<p>ಮೋದಿ ಅವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮದ ಆಗಸ್ಟ್ 30ರ ಆವೃತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ<br />ವ್ಯಕ್ತವಾಗಿತ್ತು. ಬಿಜೆಪಿಯ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊವನ್ನು ಸುಮಾರು 10 ಲಕ್ಷದಷ್ಟು ಜನರು ‘ಡಿಸ್ಲೈಕ್’ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಉದ್ಯೋಗ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳುವ ಟ್ರೆಂಡ್ ಟ್ವಿಟರ್ನಲ್ಲಿ ಗುರುವಾರ ಸಾಕಷ್ಟು ಜೋರಾಗಿತ್ತು.#PMModi_RozgarDo (ಪ್ರಧಾನಿ ಮೋದಿ ಉದ್ಯೋಗ ಕೊಡಿ) ಎಂಬ ಹ್ಯಾಶ್ಟ್ಯಾಗ್ ಬಳಸಿರಾತ್ರಿ 8 ಗಂಟೆ ವೇಳೆಗೆ 15.4 ಲಕ್ಷ ಟ್ವೀಟ್ ದಾಖಲಾದವು. 4 ತಾಸು ಟ್ವಿಟರ್ ಇಂಡಿಯಾದಲ್ಲಿ ಅದು ಅಗ್ರ ಟ್ರೆಂಡಿಂಗ್ನಲ್ಲಿತ್ತು. ಜತೆಗೆ #Nation_Hate_Modi ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್ ಸೃಷ್ಟಿಸಿತ್ತು.</p>.<p>ಕೊರೊನಾ ಹಾಗೂ ಅದರಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದಿರುವ ಟ್ವೀಟಿಗರು, ನೌಕರಿ ಕೊಡಿ ಎಂದು ನೇರವಾಗಿಯೇ ಪ್ರಧಾನಿ ಬಳಿ ಮೊರೆ ಇಟ್ಟಿದ್ದಾರೆ. ಲಕ್ಷಾಂತರ ಯುವಕರು ಪ್ರಧಾನಿ ಮೋದಿಯವರ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದಾರೆ.</p>.<p>‘ಉದ್ಯೋಗಗಳು ಎಲ್ಲಿವೆ ಎಂದು ಕೇಳಲುದೇಶ ಬಯಸುತ್ತದೆ. ದೇಶದ ಜನರಿಗೆ ಉದ್ಯೋಗ ಬೇಕೇ<br />ಹೊರತು ಸುಳ್ಳುಗಳಲ್ಲ. ಪ್ರತಿದಿನ ಸರ್ಕಾರಿ ಉದ್ಯೋಗ<br />ಗಳು ಕಡಿಮೆಯಾಗುತ್ತಿವೆ. ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡಬೇಡಿ’ ಎಂದು ದಿಲೀಪ್ ಸತ್ತಾವನ್ (@dilip007meena) ಟ್ವೀಟ್ ಮಾಡಿದ್ದಾರೆ.</p>.<p>ರೋಹಿತ್ ತ್ರಿಪಾಠಿ (@RohitTr34741425) ಎಂಬ ಟ್ವಿಟರ್ ಬಳಕೆದಾರರು ಪ್ರಶ್ನೋತ್ತರ ಮಾದರಿಯಲ್ಲಿ ಟ್ವೀಟ್ ಮಾಡಿದ್ದಾರೆ. ‘2014ರಲ್ಲಿ ಮೋದಿ ಅವರುಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ವಾಗ್ದಾನ ನೀಡಿದ್ದರು. ಆದರೆ 2020ರಲ್ಲಿ ಉದ್ಯೋಗ ಸೃಷ್ಟಿ ಮಾತು ಒತ್ತಟ್ಟಿಗಿರಲಿ, 12 ಲಕ್ಷ ಉದ್ಯೋಗ ನಷ್ಟವಾಗಿದೆ ಎಂಬ ಸುದ್ದಿ ಪ್ರಕಟವಾಗಿದೆ. ವರ್ಷಕ್ಕೆ 2 ಕೋಟಿಯಂತೆ 6 ವರ್ಷಗಳಲ್ಲಿ 12 ಕೋಟಿ ಉದ್ಯೋಗಗಳು ಎಲ್ಲಿವೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ ಮೋದಿ ಅವರು ‘ಯಾವ ಶ್ವಾನ ಸೂಕ್ತ’ ಎಂದು ಸಲಹೆ ನೀಡುವ ಅಸಂಬದ್ಧ ವಿಷಯಗಳನ್ನು ಚರ್ಚಿಸುತ್ತಿದ್ದಾರೆ’ ಎಂದು ತ್ರಿಪಾಠಿ ಆಕ್ರೋಶ ವ್ಯಕ್ತ<br />ಪಡಿಸಿದ್ದಾರೆ.</p>.<p>ಮತ್ತೊಬ್ಬ ಟ್ವಿಟರ್ ಬಳಕೆದಾರ ವಿನೋದ್ (@binod_budy) ಅವರ ಮಾತು ಸರ್ಕಾರ ಉರುಳಿಸುವ ಆಕ್ರೋಶ ಹೊಂದಿತ್ತು. ‘ಮೋದಿ ಸರ್ಕಾರವು ವಿದ್ಯಾರ್ಥಿಗಳನ್ನು ಕಡೆಗಣಿಸುವಂತಿಲ್ಲ. ಕೇಂದ್ರದಲ್ಲಿ ಸರ್ಕಾರವನ್ನು ಬುಡಸಮೇತ ಕಿತ್ತುಹಾಕಲು ವಿದ್ಯಾರ್ಥಿಗಳಿಗೆ ಸಾಧ್ಯವಿದೆ. ಏಕೆಂದರೆ ದೇಶದಲ್ಲಿ ನಿರುದ್ಯೋಗ ಎಂಬುದು ಗರಿಷ್ಠ ಮಟ್ಟವನ್ನು ಮುಟ್ಟಿದೆ’ ಎಂದು ಅವರು ಬರೆದಿದ್ದಾರೆ.</p>.<p>ನಿರುದ್ಯೋಗವನ್ನು ಬಗಲಲ್ಲಿ ಇಟ್ಟುಕೊಂಡು ಪ್ರಧಾನಿ ಘೋಷಿಸಿದ ಆತ್ಮನಿರ್ಭರ ಭಾರತವನ್ನು ಹೇಗೆ ಸಾಕಾರಗೊಳಿಸಲು ಸಾಧ್ಯ ಎಂದುಅಶ್ವನಿ ಕುತಾರ್ ಎಂಬುವವರು ಪ್ರಶ್ನೆ ಎತ್ತಿದ್ದಾರೆ.</p>.<p>ಮೋದಿ ಅವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮದ ಆಗಸ್ಟ್ 30ರ ಆವೃತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ<br />ವ್ಯಕ್ತವಾಗಿತ್ತು. ಬಿಜೆಪಿಯ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊವನ್ನು ಸುಮಾರು 10 ಲಕ್ಷದಷ್ಟು ಜನರು ‘ಡಿಸ್ಲೈಕ್’ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>