ನಾವು ಸಾಮಾಜಿಕ ಜಾಲತಾಣವನ್ನು ಗೌರವಿಸುತ್ತೇವೆ. ಇದು, ಜನರನ್ನು ಸಬಲೀಕರಣಗೊಳಿಸಿದೆ. ಆದರೆ, ಸಾಮಾಜಿಕ ಜಾಲತಾಣವನ್ನು ಸುಳ್ಳು ಸುದ್ದಿಗಳ ಪ್ರಚಾರ, ಹಿಂಸೆ ಹೆಚ್ಚಲು ಬಳಸಲಾಗುತ್ತಿದೆ. ಇಂಥ ಸಂದರ್ಭಗಳಲ್ಲಿ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.