<p><strong>ಬೆಂಗಳೂರು: </strong>ಕೋವಿಡ್–19 ಲಾಕ್ಡೌನ್ ಮತ್ತು ನಂತರದ ದಿನಗಳಲ್ಲಿ ಉದ್ಭವಿಸುವ ಕಠಿಣ ಪರಿಸ್ಥಿತಿ ನಿರ್ವಹಣೆ ಮತ್ತು ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ತಂತ್ರಜ್ಞಾನದ ನೆರವು ಪಡೆದು ತೆರೆಯ ಮರೆಯಲ್ಲಿ ಕೆಲಸ ಮಾಡುತ್ತಿದೆ.</p>.<p>ಇದಕ್ಕಾಗಿ ಪ್ರಾಧಿಕಾರವು ಮೂರು ಟೂಲ್ ಅಭಿವೃದ್ಧಿಪಡಿಸಿದೆ. ಕೊರೊನಾ ವಿರುದ್ಧ ಸರ್ಕಾರ ರೂಪಿಸುವ ಹೋರಾಟ ತಂತ್ರಗಳು ಸಿದ್ಧವಾಗುವ ವಾರ್ ರೂಂ ಇದು. ರಾಜ್ಯದ ಮೂಲೆ, ಮೂಲೆಯಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ನಡೆಯುವ ಕ್ಷಣ, ಕ್ಷಣದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಒದಗಿಸುತ್ತದೆ.</p>.<p>ಡೇಟಾ ಸೈನ್ಸ್ ಮತ್ತು ಭೌಗೋಳಿಕ ಮಾದರಿ ತಂತ್ರಜ್ಞಾನ ಬಳಸಿಕೊಂಡುಯುನಿಫೈಡ್ ಕೋವಿಡ್–19 ಪೋರ್ಟಲ್, ರಿಯಲ್ ಟೈಮ್ ಡೇಟಾ ಕಲೆಕ್ಷನ್ ಅಂಡ್ ಮಾನಿಟರಿಂಗ್ ಟೂಲ್ ಮತ್ತು ಕ್ರೌಡ್ ಸೋರ್ಸಿಂಗ್ ಮಾನಿಟರಿಂಗ್ಟೂಲ್ ಅಭಿವೃದ್ಧಿಪಡಿಸಲಾಗಿದೆ.</p>.<p>ಕೊರೊನಾ ಸೋಂಕಿನ ವಿರುದ್ಧದ ಹೋರಾಟ ಮತ್ತು ಲಾಕ್ಡೌನ್ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಲು ಈ ಟೂಲ್ಗಳು ನೀಡುವ ಮಾಹಿತಿ ಮಹತ್ವದ ಪಾತ್ರ ವಹಿಸುತ್ತವೆ ಎಂದುಕೆಎಸ್ಡಿಎಂಎ ಆಯುಕ್ತ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿ ಮನೋಜ್ ಆರ್. ರಾಜನ್ ‘ಮೆಟ್ರೊ’ಗೆ ತಿಳಿಸಿದರು.</p>.<p>ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್, ಪಿಪಿಇ ಕಿಟ್, ಕಾರ್ಮಿಕರ ವಲಸೆ, ಫುಡ್ ಕಿಟ್ ಮತ್ತು ಪಡಿತರ ವಿತರಣೆಯಂತಹ ಮಾಹಿತಿಗಳು ಬೆರಳ ತುದಿಯಲ್ಲಿ ಲಭ್ಯವಾಗಲಿವೆ.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೊರೊನಾ ವಾರ್ ರೂಂ ಮತ್ತು ವಾರ್ತಾ ಇಲಾಖೆಯಿಂದ ಬರುವ ಕ್ಷಣಕ್ಷಣದ ಪರಿಷ್ಕೃತ ಮಾಹಿತಿಗಳು ಈ ಪೋರ್ಟ್ಲ್ಗೆ ಅಪ್ಲೋಡ್ ಆಗುತ್ತವೆ ಎಂದು ಮನೋಜ್ ವಿವರಿಸಿದರು.</p>.<p class="Subhead"><strong>ಹೇಗೆ ಕೆಲಸ ಮಾಡುತ್ತವೆ?</strong></p>.<p class="Subhead">‘ಯುನಿಫೈಡ್ ಕೋವಿಡ್–19 ಪೋರ್ಟಲ್’ (covid19.karnataka.gov.in) ರಿಯಲ್ ಟೈಮ್ ಡ್ಯಾಶ್ಬೋರ್ಡ್ನಲ್ಲಿ ಕೋವಿಡ್ಗೆ ಸಂಬಂಧಿಸಿದ ದತ್ತಾಂಶ, ಮೊಬೈಲ್ ಆ್ಯಪ್, ಸಹಾಯವಾಣಿ, ಫ್ಯಾಕ್ಟ್ ಚೆಕ್ ಮಾಡಿದ ಸುದ್ದಿ, ವಾರ್ ರೂಂ ಮತ್ತು ಕ್ಲಿನಿಕಲ್ ವಿಶ್ಲೇಷಣೆ ಸಿಗುತ್ತವೆ.ಸೋಂಕಿತರು, ಗುಣಮುಖರು ಮತ್ತು ಮೃತಪಟ್ಟವರು, ಪ್ರವಾಸ ಹಿನ್ನೆಲೆ ಕೂಡ ಲಭ್ಯ.</p>.<p>ಪ್ರಾಧಿಕಾರ ಅಭಿವೃದ್ಧಿಪಡಿಸಿದ ‘ರಿಯಲ್ ಟೈಮ್ ಡೇಟಾ ಕಲೆಕ್ಷನ್ ಅಂಡ್ ಕೋವಿಡ್ ಮಾನಿಟರಿಂಗ್ ಟೂಲ್’ನಲ್ಲಿ ಕೊರೊನಾ ಹಾಟ್ಸ್ಪಾಟ್, ಫೀವರ್ ಕ್ಲೀನಿಕ್ಸ್, ಅಪಾಯ ವಲಯ, ಕ್ವಾರಂಟೈನ್ ಸೆಂಟರ್, ಐಸೊಲೇಷನ್ ವಾರ್ಡ್, ಹೋಂ ಕ್ವಾರಂಟೈನ್, ಕೋವಿಡ್ ಆಸ್ಪತ್ರೆ, ಪ್ರಯೋಗಾಲಯ ವಿವರ ಸಿಗುತ್ತವೆ.</p>.<p class="Subhead"><strong>ಶಂಕಿತರ ಮೇಲೆ ನಿಗಾ!</strong></p>.<p class="Subhead">‘ಕ್ರೌಡ್ ಸೋರ್ಸಿಂಗ್ ಮಾನಿಟರಿಂಗ್ ಟೂಲ್’ ಕೊರೊನಾ ರೋಗಲಕ್ಷಣಗಳ ಮೇಲೆ ನಿಗಾ ಇಡಲಿದೆ. ರಾಜ್ಯದ 22,800 ಖಾಸಗಿ ವೈದ್ಯಕೀಯ ಸಂಸ್ಥೆ ಮತ್ತು 41 ಸಾವಿರ ಔಷಧ ಅಂಗಡಿಗಳಿಂದ ಶಂಕಿತರ ಮಾಹಿತಿ ಇಲ್ಲಿಗೆ ರವಾನೆಯಾಗುತ್ತದೆ.</p>.<p>ಖಾಸಗಿ ಆಸ್ಪತ್ರೆಗಳಿಂದ ಪ್ರತಿದಿನ ಉಸಿರಾಟ ತೊಂದರೆ ಮತ್ತು ಇನ್ಫ್ಲೂಯೆಂಜಾ ಲಕ್ಷಣ ಇರುವವರ ಮಾಹಿತಿ ಅಪ್ಲೋಡ್ ಆಗುತ್ತದೆ. ಫ್ಲೂ, ಕೆಮ್ಮು,ಶೀತಕ್ಕೆ ಔಷಧಿ ಖರೀದಿಸಿದವರ ಮಾಹಿತಿಯು ಔಷಧಿ ಅಂಗಡಿಗಳಿಂದ ರವಾನೆಯಾಗುತ್ತವೆ. ಇದನ್ನುಆಧರಿಸಿ ಸರ್ಕಾರವು ಶಂಕಿತರ ಮೇಲೆ ನಿಗಾ ಇಡಲಿದೆ.</p>.<p><strong>ವಲಸೆ ಕಾರ್ಮಿಕರ ನಿಗಾಕ್ಕೆ ಆ್ಯಪ್</strong></p>.<p>ಕೊರೊನಾ ಸೋಂಕು ತಗುಲಿದ ರೋಗಿಯೊಂದಿಗೆ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕದಲ್ಲಿರುವ ರೋಗಿಗಳ ಪತ್ತೆ ಹಚ್ಚಲು ಹಾಗೂ ವಲಸೆ ಕಾರ್ಮಿಕರ ಚಲನವಲನಗಳ ಮೇಲೆ ನಿಗಾ ಇಡಲು ಪ್ರಾಧಿಕಾರ ಎರಡು ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.</p>.<p>ಕೊರೊನಾ ವಾಚ್ ಆ್ಯಪ್ನಲ್ಲಿ ಶಂಕಿತರು ಮತ್ತು ಸೋಂಕಿತರ ಪ್ರವಾಸ ಇತಿಹಾಸ ಮತ್ತು ಭೇಟಿ ನೀಡಿದ ಸ್ಥಳದ ವಿವರ ಸಿಗುತ್ತವೆ.</p>.<p>***</p>.<p>ಇದುವರೆಗೂ ಯಾವ ಪ್ರಕೃತಿ ವಿಕೋಪಗಳು ಮಾಡದಂಥ ಹಾನಿಯನ್ನು ಕೊರೊನಾ ಸೋಂಕು ಮಾಡಿದೆ. ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್–19 ಅಪಾಯಕಾರಿ ವಿಕೋಪಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.</p>.<p><em><strong>– ಮನೋಜ್ ಆರ್. ರಾಜನ್, ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೋವಿಡ್–19 ಲಾಕ್ಡೌನ್ ಮತ್ತು ನಂತರದ ದಿನಗಳಲ್ಲಿ ಉದ್ಭವಿಸುವ ಕಠಿಣ ಪರಿಸ್ಥಿತಿ ನಿರ್ವಹಣೆ ಮತ್ತು ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ತಂತ್ರಜ್ಞಾನದ ನೆರವು ಪಡೆದು ತೆರೆಯ ಮರೆಯಲ್ಲಿ ಕೆಲಸ ಮಾಡುತ್ತಿದೆ.</p>.<p>ಇದಕ್ಕಾಗಿ ಪ್ರಾಧಿಕಾರವು ಮೂರು ಟೂಲ್ ಅಭಿವೃದ್ಧಿಪಡಿಸಿದೆ. ಕೊರೊನಾ ವಿರುದ್ಧ ಸರ್ಕಾರ ರೂಪಿಸುವ ಹೋರಾಟ ತಂತ್ರಗಳು ಸಿದ್ಧವಾಗುವ ವಾರ್ ರೂಂ ಇದು. ರಾಜ್ಯದ ಮೂಲೆ, ಮೂಲೆಯಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ನಡೆಯುವ ಕ್ಷಣ, ಕ್ಷಣದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಒದಗಿಸುತ್ತದೆ.</p>.<p>ಡೇಟಾ ಸೈನ್ಸ್ ಮತ್ತು ಭೌಗೋಳಿಕ ಮಾದರಿ ತಂತ್ರಜ್ಞಾನ ಬಳಸಿಕೊಂಡುಯುನಿಫೈಡ್ ಕೋವಿಡ್–19 ಪೋರ್ಟಲ್, ರಿಯಲ್ ಟೈಮ್ ಡೇಟಾ ಕಲೆಕ್ಷನ್ ಅಂಡ್ ಮಾನಿಟರಿಂಗ್ ಟೂಲ್ ಮತ್ತು ಕ್ರೌಡ್ ಸೋರ್ಸಿಂಗ್ ಮಾನಿಟರಿಂಗ್ಟೂಲ್ ಅಭಿವೃದ್ಧಿಪಡಿಸಲಾಗಿದೆ.</p>.<p>ಕೊರೊನಾ ಸೋಂಕಿನ ವಿರುದ್ಧದ ಹೋರಾಟ ಮತ್ತು ಲಾಕ್ಡೌನ್ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಲು ಈ ಟೂಲ್ಗಳು ನೀಡುವ ಮಾಹಿತಿ ಮಹತ್ವದ ಪಾತ್ರ ವಹಿಸುತ್ತವೆ ಎಂದುಕೆಎಸ್ಡಿಎಂಎ ಆಯುಕ್ತ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿ ಮನೋಜ್ ಆರ್. ರಾಜನ್ ‘ಮೆಟ್ರೊ’ಗೆ ತಿಳಿಸಿದರು.</p>.<p>ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್, ಪಿಪಿಇ ಕಿಟ್, ಕಾರ್ಮಿಕರ ವಲಸೆ, ಫುಡ್ ಕಿಟ್ ಮತ್ತು ಪಡಿತರ ವಿತರಣೆಯಂತಹ ಮಾಹಿತಿಗಳು ಬೆರಳ ತುದಿಯಲ್ಲಿ ಲಭ್ಯವಾಗಲಿವೆ.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೊರೊನಾ ವಾರ್ ರೂಂ ಮತ್ತು ವಾರ್ತಾ ಇಲಾಖೆಯಿಂದ ಬರುವ ಕ್ಷಣಕ್ಷಣದ ಪರಿಷ್ಕೃತ ಮಾಹಿತಿಗಳು ಈ ಪೋರ್ಟ್ಲ್ಗೆ ಅಪ್ಲೋಡ್ ಆಗುತ್ತವೆ ಎಂದು ಮನೋಜ್ ವಿವರಿಸಿದರು.</p>.<p class="Subhead"><strong>ಹೇಗೆ ಕೆಲಸ ಮಾಡುತ್ತವೆ?</strong></p>.<p class="Subhead">‘ಯುನಿಫೈಡ್ ಕೋವಿಡ್–19 ಪೋರ್ಟಲ್’ (covid19.karnataka.gov.in) ರಿಯಲ್ ಟೈಮ್ ಡ್ಯಾಶ್ಬೋರ್ಡ್ನಲ್ಲಿ ಕೋವಿಡ್ಗೆ ಸಂಬಂಧಿಸಿದ ದತ್ತಾಂಶ, ಮೊಬೈಲ್ ಆ್ಯಪ್, ಸಹಾಯವಾಣಿ, ಫ್ಯಾಕ್ಟ್ ಚೆಕ್ ಮಾಡಿದ ಸುದ್ದಿ, ವಾರ್ ರೂಂ ಮತ್ತು ಕ್ಲಿನಿಕಲ್ ವಿಶ್ಲೇಷಣೆ ಸಿಗುತ್ತವೆ.ಸೋಂಕಿತರು, ಗುಣಮುಖರು ಮತ್ತು ಮೃತಪಟ್ಟವರು, ಪ್ರವಾಸ ಹಿನ್ನೆಲೆ ಕೂಡ ಲಭ್ಯ.</p>.<p>ಪ್ರಾಧಿಕಾರ ಅಭಿವೃದ್ಧಿಪಡಿಸಿದ ‘ರಿಯಲ್ ಟೈಮ್ ಡೇಟಾ ಕಲೆಕ್ಷನ್ ಅಂಡ್ ಕೋವಿಡ್ ಮಾನಿಟರಿಂಗ್ ಟೂಲ್’ನಲ್ಲಿ ಕೊರೊನಾ ಹಾಟ್ಸ್ಪಾಟ್, ಫೀವರ್ ಕ್ಲೀನಿಕ್ಸ್, ಅಪಾಯ ವಲಯ, ಕ್ವಾರಂಟೈನ್ ಸೆಂಟರ್, ಐಸೊಲೇಷನ್ ವಾರ್ಡ್, ಹೋಂ ಕ್ವಾರಂಟೈನ್, ಕೋವಿಡ್ ಆಸ್ಪತ್ರೆ, ಪ್ರಯೋಗಾಲಯ ವಿವರ ಸಿಗುತ್ತವೆ.</p>.<p class="Subhead"><strong>ಶಂಕಿತರ ಮೇಲೆ ನಿಗಾ!</strong></p>.<p class="Subhead">‘ಕ್ರೌಡ್ ಸೋರ್ಸಿಂಗ್ ಮಾನಿಟರಿಂಗ್ ಟೂಲ್’ ಕೊರೊನಾ ರೋಗಲಕ್ಷಣಗಳ ಮೇಲೆ ನಿಗಾ ಇಡಲಿದೆ. ರಾಜ್ಯದ 22,800 ಖಾಸಗಿ ವೈದ್ಯಕೀಯ ಸಂಸ್ಥೆ ಮತ್ತು 41 ಸಾವಿರ ಔಷಧ ಅಂಗಡಿಗಳಿಂದ ಶಂಕಿತರ ಮಾಹಿತಿ ಇಲ್ಲಿಗೆ ರವಾನೆಯಾಗುತ್ತದೆ.</p>.<p>ಖಾಸಗಿ ಆಸ್ಪತ್ರೆಗಳಿಂದ ಪ್ರತಿದಿನ ಉಸಿರಾಟ ತೊಂದರೆ ಮತ್ತು ಇನ್ಫ್ಲೂಯೆಂಜಾ ಲಕ್ಷಣ ಇರುವವರ ಮಾಹಿತಿ ಅಪ್ಲೋಡ್ ಆಗುತ್ತದೆ. ಫ್ಲೂ, ಕೆಮ್ಮು,ಶೀತಕ್ಕೆ ಔಷಧಿ ಖರೀದಿಸಿದವರ ಮಾಹಿತಿಯು ಔಷಧಿ ಅಂಗಡಿಗಳಿಂದ ರವಾನೆಯಾಗುತ್ತವೆ. ಇದನ್ನುಆಧರಿಸಿ ಸರ್ಕಾರವು ಶಂಕಿತರ ಮೇಲೆ ನಿಗಾ ಇಡಲಿದೆ.</p>.<p><strong>ವಲಸೆ ಕಾರ್ಮಿಕರ ನಿಗಾಕ್ಕೆ ಆ್ಯಪ್</strong></p>.<p>ಕೊರೊನಾ ಸೋಂಕು ತಗುಲಿದ ರೋಗಿಯೊಂದಿಗೆ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕದಲ್ಲಿರುವ ರೋಗಿಗಳ ಪತ್ತೆ ಹಚ್ಚಲು ಹಾಗೂ ವಲಸೆ ಕಾರ್ಮಿಕರ ಚಲನವಲನಗಳ ಮೇಲೆ ನಿಗಾ ಇಡಲು ಪ್ರಾಧಿಕಾರ ಎರಡು ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.</p>.<p>ಕೊರೊನಾ ವಾಚ್ ಆ್ಯಪ್ನಲ್ಲಿ ಶಂಕಿತರು ಮತ್ತು ಸೋಂಕಿತರ ಪ್ರವಾಸ ಇತಿಹಾಸ ಮತ್ತು ಭೇಟಿ ನೀಡಿದ ಸ್ಥಳದ ವಿವರ ಸಿಗುತ್ತವೆ.</p>.<p>***</p>.<p>ಇದುವರೆಗೂ ಯಾವ ಪ್ರಕೃತಿ ವಿಕೋಪಗಳು ಮಾಡದಂಥ ಹಾನಿಯನ್ನು ಕೊರೊನಾ ಸೋಂಕು ಮಾಡಿದೆ. ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್–19 ಅಪಾಯಕಾರಿ ವಿಕೋಪಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.</p>.<p><em><strong>– ಮನೋಜ್ ಆರ್. ರಾಜನ್, ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>