‘ಆ ದಿನ ಸಂಜೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೇಶದಲ್ಲಿ ತೀವ್ರವಾದ ಸಂಚಾರ ದಟ್ಟಣೆ ಉಂಟಾಗಿತ್ತು. ಆಗ ಅಲ್ಲಿಗೆ ಬಂದ ಆಂಬುಲೆನ್ಸ್ಗೆ ಮುಂದೆ ತರಳಲು ಸಾಧ್ಯವಾಗಲಿಲ್ಲ. ನಾನು ಆಂಬುಲೆನ್ಸ್ನ ಮುಂದಿನಿಂದ ಓಡುತ್ತಾ ಸಂಚಾರಕ್ಕೆ ಅನುವು ಮಾಡಿಕೊಡಲು ಯತ್ನಿಸಿದೆ. ನಾನು ನನ್ನ ಕರ್ತವ್ಯ ಮಾಡಿದ್ದೇನಷ್ಟೆ. ನನ್ನ ಕಾರ್ಯದಿಂದ ರೋಗಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರುವುದು, ಜೀವ ಉಳಿಸಲು ಸಾಧ್ಯವಾಗಿರುವುದು ಸಂತಸ ಮೂಡಿಸಿದೆ’ ಎಂದು ಬಾಬ್ಜಿ ಪ್ರತಿಕ್ರಿಯಿಸಿದ್ದಾರೆ.