<figcaption>""</figcaption>.<p>‘ಭಾರತ ಸರ್ಕಾರ ತನ್ನ ರಾಯಭಾರ ಕಚೇರಿಯಿಂದ ವಾಹನ ಕಳಿಸಿ, ತನ್ನ ದೇಶದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿದೆ. ಬಾಂಗ್ಲಾದೇಶವೂ ತನ್ನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುವಅಭಯ ನೀಡಿದೆ. ನಾವು ಪಾಕಿಸ್ತಾನಿಯರು ಮಾಡಿದ ತಪ್ಪೇನು? ನಮ್ಮನ್ನೇಕೆ ನಮ್ಮ ಸರ್ಕಾರ ಅನಾಥರನ್ನಾಗಿ ಪರದೇಶದಲ್ಲಿಯೇ ಸಾಯಲು ಬಿಟ್ಟುಬಿಟ್ಟಿದೆ? ಭಾರತ ಸರ್ಕಾರದ ಕ್ರಮಗಳನ್ನು ನೋಡಿಯಾದರೂ ಪಾಠ ಕಲಿಯಿರಿ ಇಮ್ರಾನ್ ಖಾನ್...’</p>.<p>– ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಚೀನಾದ ವುಹಾನ್ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಾಕಿಸ್ತಾನದ ವಿದ್ಯಾರ್ಥಿಗಳ ಈ ವಿಡಿಯೊಟ್ವಿಟರ್ನಇಂಡಿಯಾ ಟ್ರೆಂಡ್ ಪಟ್ಟಿಯಲ್ಲಿಯೂ ಟಾಪ್ನಲ್ಲಿಯೇ ಇದೆ.</p>.<p>‘ವಿದೇಶಕ್ಕೆ ಹೋಗಿ, ಓದಿ, ದುಡಿದು ಸ್ವದೇಶಕ್ಕೆ ಹಣ ಕಳಿಸಿ. ಪಾಕಿಸ್ತಾನವನ್ನು ಸಂಪದ್ಭರಿತ ದೇಶ ಮಾಡಿಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅವರ ಮಾತನ್ನು ನಾವು ಗೌರವಿಸಿದೆವು. ಆದರೆ ನಮ್ಮ ಸರ್ಕಾರ ನಮ್ಮನ್ನು ಮರೆತೇ ಹೋಯಿತು’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.</p>.<p>ಪಾಕಿಸ್ತಾನದ ಜನಪ್ರಿಯ ದಿನಪತ್ರಿಕೆ ‘ಡಾನ್’ ಸಹ ಇಂದು (ಫೆ.2) ಚೀನಾದಲ್ಲಿರುವ ಪಾಕಿಸ್ತಾನೀಯರ ಬಗ್ಗೆಸಂಪಾದಕೀಯ ಪ್ರಕಟಿಸಿದೆ.</p>.<p>‘ಚೀನಾದಲ್ಲಿ 30 ಸಾವಿರ ಪಾಕಿಸ್ತಾನ್ ಪ್ರಜೆಗಳಿದ್ದಾರೆ. ವೈರಸ್ ಭೀತಿಯ ಕೇಂದ್ರ ನೆಲೆಯಾಗಿರುವ ವುಹಾನ್ನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರನ್ನು ವಾಪಸ್ ಕರೆತರಲು ಸಾಧ್ಯವೇ? ಅವರನ್ನು ಕರೆ ತಂದರೆ ನಿಗಾ ಘಟಕದಲ್ಲಿ (Quarantine Centre) ಕೆಲ ದಿನಗಳು ಉಳಿಸಿ, ಆರೋಗ್ಯಕುಟುಂಬಗಳಿಗೆ ಕಳಿಸುವಂಥ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದೆ.</p>.<div style="text-align:center"><figcaption><em><strong>ಇಮ್ರಾನ್ಖಾನ್ ಆಡಳಿತ ವೈಖರಿ ವ್ಯಂಗ್ಯ ಮಾಡಲು ಪಾಕಿಸ್ತಾನಿಯರು ಬಳಸಿರುವ ಚಿತ್ರ</strong></em></figcaption></div>.<p><strong>ಏಕೆ ಹಿಂಜರಿಕೆ</strong></p>.<p>‘ಡಾನ್’ ಸಂಪಾದಕೀಯದ ಪ್ರಕಾರ, ಪಾಕಿಸ್ತಾನದಲ್ಲಿ ನಿಗಾ ಘಟಕಗಳ ಸ್ಥಾಪನೆ ಅಸಾಧ್ಯ ಎನಿಸುವಂಥ ಪರಿಸ್ಥಿತಿ ಇರುವುದೇಪಾಕಿಸ್ತಾನವು ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಇರುವ ಮುಖ್ಯ ತೊಡಕು. ಆದರೆ ಪಾಕಿಸ್ತಾನದ ಪ್ರಜೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್ಗಳು ಬೇರೆಯೇ ಕಥನ ಕಟ್ಟುತ್ತಿದೆ.</p>.<p>‘ಚೀನಾದೊಡನೆ ಪಾಕ್ ಸರ್ಕಾರಕ್ಕೆ ಹಲವು ಒಪ್ಪಂದಗಳಿವೆ. ಒಂದು ರೀತಿಯಲ್ಲಿ ನಾವು ಚೀನಾದ ಹಂಗಿನಲ್ಲಿದ್ದೇವೆ. ಚೀನಾ ಸರ್ಕಾರಕ್ಕೆ ಬೇಸರವಾಗಬಹುದು ಎನ್ನುವ ಕಾರಣ ಪ್ರಧಾನಿ ಇಮ್ರಾನ್ ಖಾನ್ ಚೀನಾದಲ್ಲಿರುವ ಪಾಕಿಸ್ತಾನಿಯರನ್ನು ತ್ಯಜಿಸಿಬಿಟ್ಟಿದ್ದಾರೆ’ ಎಂಬ ಆಕ್ರೋಶವನ್ನು ಪಾಕಿಸ್ತಾನಿಯರುಸಾಮಾಜಿಕ ಮಾಧ್ಯಮಗಳಲ್ಲಿ ಹೊರಹಾಕಿದ್ದಾರೆ.</p>.<p>ತನ್ನ ವಿದ್ಯಾರ್ಥಿಗಳು ಸ್ವದೇಶಕ್ಕೆ ಕರೆಸಿಕೊಳ್ಳದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಪಾಕಿಸ್ತಾನದ ವಿವಿಧೆಡೆ ಪ್ರತಿಭಟನೆಗಳು ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p>‘ಭಾರತ ಸರ್ಕಾರ ತನ್ನ ರಾಯಭಾರ ಕಚೇರಿಯಿಂದ ವಾಹನ ಕಳಿಸಿ, ತನ್ನ ದೇಶದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿದೆ. ಬಾಂಗ್ಲಾದೇಶವೂ ತನ್ನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುವಅಭಯ ನೀಡಿದೆ. ನಾವು ಪಾಕಿಸ್ತಾನಿಯರು ಮಾಡಿದ ತಪ್ಪೇನು? ನಮ್ಮನ್ನೇಕೆ ನಮ್ಮ ಸರ್ಕಾರ ಅನಾಥರನ್ನಾಗಿ ಪರದೇಶದಲ್ಲಿಯೇ ಸಾಯಲು ಬಿಟ್ಟುಬಿಟ್ಟಿದೆ? ಭಾರತ ಸರ್ಕಾರದ ಕ್ರಮಗಳನ್ನು ನೋಡಿಯಾದರೂ ಪಾಠ ಕಲಿಯಿರಿ ಇಮ್ರಾನ್ ಖಾನ್...’</p>.<p>– ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಚೀನಾದ ವುಹಾನ್ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಾಕಿಸ್ತಾನದ ವಿದ್ಯಾರ್ಥಿಗಳ ಈ ವಿಡಿಯೊಟ್ವಿಟರ್ನಇಂಡಿಯಾ ಟ್ರೆಂಡ್ ಪಟ್ಟಿಯಲ್ಲಿಯೂ ಟಾಪ್ನಲ್ಲಿಯೇ ಇದೆ.</p>.<p>‘ವಿದೇಶಕ್ಕೆ ಹೋಗಿ, ಓದಿ, ದುಡಿದು ಸ್ವದೇಶಕ್ಕೆ ಹಣ ಕಳಿಸಿ. ಪಾಕಿಸ್ತಾನವನ್ನು ಸಂಪದ್ಭರಿತ ದೇಶ ಮಾಡಿಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅವರ ಮಾತನ್ನು ನಾವು ಗೌರವಿಸಿದೆವು. ಆದರೆ ನಮ್ಮ ಸರ್ಕಾರ ನಮ್ಮನ್ನು ಮರೆತೇ ಹೋಯಿತು’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.</p>.<p>ಪಾಕಿಸ್ತಾನದ ಜನಪ್ರಿಯ ದಿನಪತ್ರಿಕೆ ‘ಡಾನ್’ ಸಹ ಇಂದು (ಫೆ.2) ಚೀನಾದಲ್ಲಿರುವ ಪಾಕಿಸ್ತಾನೀಯರ ಬಗ್ಗೆಸಂಪಾದಕೀಯ ಪ್ರಕಟಿಸಿದೆ.</p>.<p>‘ಚೀನಾದಲ್ಲಿ 30 ಸಾವಿರ ಪಾಕಿಸ್ತಾನ್ ಪ್ರಜೆಗಳಿದ್ದಾರೆ. ವೈರಸ್ ಭೀತಿಯ ಕೇಂದ್ರ ನೆಲೆಯಾಗಿರುವ ವುಹಾನ್ನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರನ್ನು ವಾಪಸ್ ಕರೆತರಲು ಸಾಧ್ಯವೇ? ಅವರನ್ನು ಕರೆ ತಂದರೆ ನಿಗಾ ಘಟಕದಲ್ಲಿ (Quarantine Centre) ಕೆಲ ದಿನಗಳು ಉಳಿಸಿ, ಆರೋಗ್ಯಕುಟುಂಬಗಳಿಗೆ ಕಳಿಸುವಂಥ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದೆ.</p>.<div style="text-align:center"><figcaption><em><strong>ಇಮ್ರಾನ್ಖಾನ್ ಆಡಳಿತ ವೈಖರಿ ವ್ಯಂಗ್ಯ ಮಾಡಲು ಪಾಕಿಸ್ತಾನಿಯರು ಬಳಸಿರುವ ಚಿತ್ರ</strong></em></figcaption></div>.<p><strong>ಏಕೆ ಹಿಂಜರಿಕೆ</strong></p>.<p>‘ಡಾನ್’ ಸಂಪಾದಕೀಯದ ಪ್ರಕಾರ, ಪಾಕಿಸ್ತಾನದಲ್ಲಿ ನಿಗಾ ಘಟಕಗಳ ಸ್ಥಾಪನೆ ಅಸಾಧ್ಯ ಎನಿಸುವಂಥ ಪರಿಸ್ಥಿತಿ ಇರುವುದೇಪಾಕಿಸ್ತಾನವು ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಇರುವ ಮುಖ್ಯ ತೊಡಕು. ಆದರೆ ಪಾಕಿಸ್ತಾನದ ಪ್ರಜೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್ಗಳು ಬೇರೆಯೇ ಕಥನ ಕಟ್ಟುತ್ತಿದೆ.</p>.<p>‘ಚೀನಾದೊಡನೆ ಪಾಕ್ ಸರ್ಕಾರಕ್ಕೆ ಹಲವು ಒಪ್ಪಂದಗಳಿವೆ. ಒಂದು ರೀತಿಯಲ್ಲಿ ನಾವು ಚೀನಾದ ಹಂಗಿನಲ್ಲಿದ್ದೇವೆ. ಚೀನಾ ಸರ್ಕಾರಕ್ಕೆ ಬೇಸರವಾಗಬಹುದು ಎನ್ನುವ ಕಾರಣ ಪ್ರಧಾನಿ ಇಮ್ರಾನ್ ಖಾನ್ ಚೀನಾದಲ್ಲಿರುವ ಪಾಕಿಸ್ತಾನಿಯರನ್ನು ತ್ಯಜಿಸಿಬಿಟ್ಟಿದ್ದಾರೆ’ ಎಂಬ ಆಕ್ರೋಶವನ್ನು ಪಾಕಿಸ್ತಾನಿಯರುಸಾಮಾಜಿಕ ಮಾಧ್ಯಮಗಳಲ್ಲಿ ಹೊರಹಾಕಿದ್ದಾರೆ.</p>.<p>ತನ್ನ ವಿದ್ಯಾರ್ಥಿಗಳು ಸ್ವದೇಶಕ್ಕೆ ಕರೆಸಿಕೊಳ್ಳದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಪಾಕಿಸ್ತಾನದ ವಿವಿಧೆಡೆ ಪ್ರತಿಭಟನೆಗಳು ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>