<p><strong>ಮುಂಬೈ</strong>: ವ್ಯಕ್ತಿಯೊಬ್ಬ ಬೆತ್ತಲೆಯಾಗಿ ರೈಲಿನ ಮಹಿಳಾ ಬೋಗಿಯನ್ನು ಏರಿದ್ದ ಘಟನೆ ಮುಂಬೈನಲ್ಲಿ ಕಳೆದ ಸೋಮವಾರ ಸಂಜೆ ನಡೆದಿದೆ.</p><p>ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.</p><p>ಛತ್ರಪತಿ ಶಿವಾಜಿ ಟರ್ಮಿನಲ್ನಿಂದ ಕಲ್ಯಾಣ್ಗೆ ತೆರಳುತ್ತಿದ್ದ ಲೋಕಲ್ ಎ.ಸಿ ಟ್ರೈನ್ ಅನ್ನು ಘಾಟಕೋಪರ್ ನಿಲ್ದಾಣದಲ್ಲಿ ಸಂಜೆ ಸುಮಾರು 4 ಗಂಟೆಗೆ ಬೆತ್ತಲೆಯಾಗಿದ್ದ ವ್ಯಕ್ತಿ ಏರಿದ್ದ. ವ್ಯಕ್ತಿ ಏರಿದ್ದ ಬೋಗಿ ಮಹಿಳಾ ಬೋಗಿಯಾಗಿತ್ತು. ಇದರಿಂದ ಆತಂಕಗೊಂಡ ಮಹಿಳೆಯರು ‘ಅವನನ್ನು ಕೆಳಕ್ಕಿಳಿಸಿ, ಇಳಿಸಿ..‘ ಎಂದು ಚೀರಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.</p><p>ಕೂಡಲೇ ಸ್ಥಳಕ್ಕೆ ಡೌಡಾಯಿಸಿದ ರೈಲು ಟಿಕೆಟ್ ಪರಿವೀಕ್ಷಕ ಬೆತ್ತಲೆಯಾಗಿದ್ದ ವ್ಯಕ್ತಿಯನ್ನು ಬೆದರಿಸಿ ರೈಲಿನಿಂದ ಕೆಳಕ್ಕಿಳಿಸಿದ್ದಾರೆ. ನಂತರ ರೈಲು ಹೊರಟಿದೆ.</p><p>ರೈಲು ಏರಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು ಆತನನ್ನು ವಿಕಾಸ್ ಯಾದವ್ ಎಂದು ಗುರುತಿಸಲಾಗಿದೆ. ಆರ್ಪಿಎಫ್ ಪೊಲೀಸರು ಆತನನ್ನು ಬಂಧಿಸಿ ಆತನಿಗೆ ಬಟ್ಟೆ ಒದಗಿಸಿ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಮುಂಬೈ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ವ್ಯಕ್ತಿಯೊಬ್ಬ ಬೆತ್ತಲೆಯಾಗಿ ರೈಲಿನ ಮಹಿಳಾ ಬೋಗಿಯನ್ನು ಏರಿದ್ದ ಘಟನೆ ಮುಂಬೈನಲ್ಲಿ ಕಳೆದ ಸೋಮವಾರ ಸಂಜೆ ನಡೆದಿದೆ.</p><p>ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.</p><p>ಛತ್ರಪತಿ ಶಿವಾಜಿ ಟರ್ಮಿನಲ್ನಿಂದ ಕಲ್ಯಾಣ್ಗೆ ತೆರಳುತ್ತಿದ್ದ ಲೋಕಲ್ ಎ.ಸಿ ಟ್ರೈನ್ ಅನ್ನು ಘಾಟಕೋಪರ್ ನಿಲ್ದಾಣದಲ್ಲಿ ಸಂಜೆ ಸುಮಾರು 4 ಗಂಟೆಗೆ ಬೆತ್ತಲೆಯಾಗಿದ್ದ ವ್ಯಕ್ತಿ ಏರಿದ್ದ. ವ್ಯಕ್ತಿ ಏರಿದ್ದ ಬೋಗಿ ಮಹಿಳಾ ಬೋಗಿಯಾಗಿತ್ತು. ಇದರಿಂದ ಆತಂಕಗೊಂಡ ಮಹಿಳೆಯರು ‘ಅವನನ್ನು ಕೆಳಕ್ಕಿಳಿಸಿ, ಇಳಿಸಿ..‘ ಎಂದು ಚೀರಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.</p><p>ಕೂಡಲೇ ಸ್ಥಳಕ್ಕೆ ಡೌಡಾಯಿಸಿದ ರೈಲು ಟಿಕೆಟ್ ಪರಿವೀಕ್ಷಕ ಬೆತ್ತಲೆಯಾಗಿದ್ದ ವ್ಯಕ್ತಿಯನ್ನು ಬೆದರಿಸಿ ರೈಲಿನಿಂದ ಕೆಳಕ್ಕಿಳಿಸಿದ್ದಾರೆ. ನಂತರ ರೈಲು ಹೊರಟಿದೆ.</p><p>ರೈಲು ಏರಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು ಆತನನ್ನು ವಿಕಾಸ್ ಯಾದವ್ ಎಂದು ಗುರುತಿಸಲಾಗಿದೆ. ಆರ್ಪಿಎಫ್ ಪೊಲೀಸರು ಆತನನ್ನು ಬಂಧಿಸಿ ಆತನಿಗೆ ಬಟ್ಟೆ ಒದಗಿಸಿ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಮುಂಬೈ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>