<p><strong>ಬೆಂಗಳೂರು</strong>: ತಮಿಳುನಾಡಿನ ತಿರುವರೂರು ಜಿಲ್ಲೆಯಲ್ಲಿ ಅಪರೂಪದ ಮಾನವೀಯ ಪ್ರಕರಣವೊಂದು ನಡೆದಿರುವುದು ವರದಿಯಾಗಿದೆ.</p><p>ಮಹಿಳೆಯೊಬ್ಬರು ಕಳೆದುಕೊಂಡಿದ್ದ 160 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿಯನ್ನು ಪೌರ ಕಾರ್ಮಿಕ ವ್ಯಕ್ತಿಯೊಬ್ಬರು ಪೊಲೀಸರ ಮುಖಾಂತರ ಆ ಮಹಿಳೆಗೆ ತಲುಪಿಸಿದ್ದಾರೆ.</p><p>ತಿರುವರೂರು ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕ ಆಗಿರುವ ಎನ್ ದೊರೈ ಎನ್ನುವ ವ್ಯಕ್ತಿಯೇ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.</p><p>ಮಗಳ ಮದುವೆಗೆ ಚೆನ್ನೈನ ರಾಧಾಕೃಷ್ಣನ್ ಎನ್ನುವರ ಕುಟುಂಬದ ಮಹಿಳೆ 160 ಗ್ರಾಂನಷ್ಟು ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ಸಾಮಾನುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. </p><p>ಚೆನ್ನೈನಿಂದ ತಿರುವರೂರಿಗೆ ಬಂದಿದ್ದ ಕುಟುಂಬ ಬ್ಯಾಗ್ನಲ್ಲಿಟ್ಟಿದ್ದ ಚಿನ್ನವನ್ನು ಮದುವೆ ಮನೆಯಿಂದ ಕಳೆದುಕೊಂಡಿತ್ತು. ಆಕಸ್ಮಾತಾಗಿ ಚಿನ್ನ ಹಾಗೂ ಬೆಳ್ಳಿ ಇದ್ದ ಬ್ಯಾಗು ದೊರೈ ಅವರಿಗೆ ಕಾಲುವೆ ಪಕ್ಕ ಸಿಕ್ಕಿತ್ತು. ದೊರೈ ಅವರು ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಬೆಲೆ ಬಾಳುವ ಆಭರಣಗಳನ್ನು ಹಿಂದಿರುಗಿಸಿದ್ದಾರೆ.</p><p>ಚಿನ್ನ ಹಾಗೂ ಬೆಳ್ಳಿ ಇದ್ದ ಬ್ಯಾಗನ್ನು ಕಳ್ಳರು ಯಾರಾದರೂ ಕದ್ದು ಅಲ್ಲಿ ಬಿಟ್ಟು ಹೋದರಾ ಅಥವಾ ಆಕಸ್ಮಿಕವಾಗಿ ಬ್ಯಾಗು ಕಾಲುವೆ ಬಳಿ ಬಿದ್ದಿತ್ತಾ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಈ ನಾಡು ತಮಿಳು ವೆಬ್ಸೈಟ್ ವರದಿ ಮಾಡಿದೆ.</p><p>ಚಿನ್ನ ಕಳೆದುಕೊಂಡಿದ್ದ ಮಹಿಳೆ, ಪೊಲೀಸರು ಹಾಗೂ ತಿರುವರೂರು ನಗರ ಪಾಲಿಕೆಯ ಸಿಬ್ಬಂದಿ ದೊರೈ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಿದ್ದಾರೆ.</p>.ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್.ಗೌರಿಬಿದನೂರು: 30 ಗ್ರಾಂ ಚಿನ್ನ, ಅರ್ಧ ಕೆ.ಜಿ ಬೆಳ್ಳಿ ದೋಚಿದ ಕಳ್ಳರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ತಮಿಳುನಾಡಿನ ತಿರುವರೂರು ಜಿಲ್ಲೆಯಲ್ಲಿ ಅಪರೂಪದ ಮಾನವೀಯ ಪ್ರಕರಣವೊಂದು ನಡೆದಿರುವುದು ವರದಿಯಾಗಿದೆ.</p><p>ಮಹಿಳೆಯೊಬ್ಬರು ಕಳೆದುಕೊಂಡಿದ್ದ 160 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿಯನ್ನು ಪೌರ ಕಾರ್ಮಿಕ ವ್ಯಕ್ತಿಯೊಬ್ಬರು ಪೊಲೀಸರ ಮುಖಾಂತರ ಆ ಮಹಿಳೆಗೆ ತಲುಪಿಸಿದ್ದಾರೆ.</p><p>ತಿರುವರೂರು ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕ ಆಗಿರುವ ಎನ್ ದೊರೈ ಎನ್ನುವ ವ್ಯಕ್ತಿಯೇ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.</p><p>ಮಗಳ ಮದುವೆಗೆ ಚೆನ್ನೈನ ರಾಧಾಕೃಷ್ಣನ್ ಎನ್ನುವರ ಕುಟುಂಬದ ಮಹಿಳೆ 160 ಗ್ರಾಂನಷ್ಟು ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ಸಾಮಾನುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. </p><p>ಚೆನ್ನೈನಿಂದ ತಿರುವರೂರಿಗೆ ಬಂದಿದ್ದ ಕುಟುಂಬ ಬ್ಯಾಗ್ನಲ್ಲಿಟ್ಟಿದ್ದ ಚಿನ್ನವನ್ನು ಮದುವೆ ಮನೆಯಿಂದ ಕಳೆದುಕೊಂಡಿತ್ತು. ಆಕಸ್ಮಾತಾಗಿ ಚಿನ್ನ ಹಾಗೂ ಬೆಳ್ಳಿ ಇದ್ದ ಬ್ಯಾಗು ದೊರೈ ಅವರಿಗೆ ಕಾಲುವೆ ಪಕ್ಕ ಸಿಕ್ಕಿತ್ತು. ದೊರೈ ಅವರು ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಬೆಲೆ ಬಾಳುವ ಆಭರಣಗಳನ್ನು ಹಿಂದಿರುಗಿಸಿದ್ದಾರೆ.</p><p>ಚಿನ್ನ ಹಾಗೂ ಬೆಳ್ಳಿ ಇದ್ದ ಬ್ಯಾಗನ್ನು ಕಳ್ಳರು ಯಾರಾದರೂ ಕದ್ದು ಅಲ್ಲಿ ಬಿಟ್ಟು ಹೋದರಾ ಅಥವಾ ಆಕಸ್ಮಿಕವಾಗಿ ಬ್ಯಾಗು ಕಾಲುವೆ ಬಳಿ ಬಿದ್ದಿತ್ತಾ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಈ ನಾಡು ತಮಿಳು ವೆಬ್ಸೈಟ್ ವರದಿ ಮಾಡಿದೆ.</p><p>ಚಿನ್ನ ಕಳೆದುಕೊಂಡಿದ್ದ ಮಹಿಳೆ, ಪೊಲೀಸರು ಹಾಗೂ ತಿರುವರೂರು ನಗರ ಪಾಲಿಕೆಯ ಸಿಬ್ಬಂದಿ ದೊರೈ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಿದ್ದಾರೆ.</p>.ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್.ಗೌರಿಬಿದನೂರು: 30 ಗ್ರಾಂ ಚಿನ್ನ, ಅರ್ಧ ಕೆ.ಜಿ ಬೆಳ್ಳಿ ದೋಚಿದ ಕಳ್ಳರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>