<p><strong>ತುರುವೇಕೆರೆ: </strong>ಕುಡಿಯಲು ಮದ್ಯ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಿಸಿದ್ದಾರೆ.</p>.<p>ಕೊರೊನಾ ಸೋಂಕಿನ ಭೀತಿಯಿಂದ ರಾಜ್ಯದಲ್ಲಿ ಲಾಕ್ಡೌನ್ಜಾರಿಗೆ ತಂದಿರುವುದರಿಂದ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಮದ್ಯವ್ಯಸನಿಗಳು ಮದ್ಯಕ್ಕಾಗಿ ಪರದಾಡುತ್ತಿದ್ದಾರೆ.</p>.<p>ವಿಡಿಯೊದಲ್ಲಿ ವ್ಯಕ್ತಿ ‘ನನಗೆ ಎಣ್ಣೆ (ಮದ್ಯ) ಬೇಕು. ಇಲ್ಲಾಂದ್ರೆ ಸಂಜೆಯೊಳಗೆ ಆತ್ಮಹತ್ಯೆ ಮಾಡಿಕೊಳ್ಳುವೆ. ಇದಕ್ಕೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯೇ ನೇರ ಕಾರಣರಾಗುತ್ತಾರೆ. ನಂಗೆ ಒಂದು ವಾರದಿಂದ ನಿದ್ದೆ ಬಂದಿಲ್ಲ. ಕುಡಿದ್ರೇನೇ ನಿದ್ದೆ ಬರೋದು. ನಾನೇ ವಾಟ್ಸ್ಆ್ಯಪ್ಮಾಡ್ಸಿದ್ದೀನಿ. ನನ್ನ ಹೆಸರು ಗೋವಿಂದಯ್ಯ, ದೊಂಬರನಹಳ್ಳಿ ತುರುವೇಕೆರೆ ತಾಲ್ಲೂಕಿನವ’ ಎಂದು ಹೇಳಿಕೊಂಡಿದ್ದಾರೆ.</p>.<p>ಈ ವಿಡಿಯೋ ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ಗಳಲ್ಲಿ ಭಾನುವಾರ ಮಧ್ಯಾಹ್ನದಿಂದ ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ: </strong>ಕುಡಿಯಲು ಮದ್ಯ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಿಸಿದ್ದಾರೆ.</p>.<p>ಕೊರೊನಾ ಸೋಂಕಿನ ಭೀತಿಯಿಂದ ರಾಜ್ಯದಲ್ಲಿ ಲಾಕ್ಡೌನ್ಜಾರಿಗೆ ತಂದಿರುವುದರಿಂದ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಮದ್ಯವ್ಯಸನಿಗಳು ಮದ್ಯಕ್ಕಾಗಿ ಪರದಾಡುತ್ತಿದ್ದಾರೆ.</p>.<p>ವಿಡಿಯೊದಲ್ಲಿ ವ್ಯಕ್ತಿ ‘ನನಗೆ ಎಣ್ಣೆ (ಮದ್ಯ) ಬೇಕು. ಇಲ್ಲಾಂದ್ರೆ ಸಂಜೆಯೊಳಗೆ ಆತ್ಮಹತ್ಯೆ ಮಾಡಿಕೊಳ್ಳುವೆ. ಇದಕ್ಕೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯೇ ನೇರ ಕಾರಣರಾಗುತ್ತಾರೆ. ನಂಗೆ ಒಂದು ವಾರದಿಂದ ನಿದ್ದೆ ಬಂದಿಲ್ಲ. ಕುಡಿದ್ರೇನೇ ನಿದ್ದೆ ಬರೋದು. ನಾನೇ ವಾಟ್ಸ್ಆ್ಯಪ್ಮಾಡ್ಸಿದ್ದೀನಿ. ನನ್ನ ಹೆಸರು ಗೋವಿಂದಯ್ಯ, ದೊಂಬರನಹಳ್ಳಿ ತುರುವೇಕೆರೆ ತಾಲ್ಲೂಕಿನವ’ ಎಂದು ಹೇಳಿಕೊಂಡಿದ್ದಾರೆ.</p>.<p>ಈ ವಿಡಿಯೋ ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ಗಳಲ್ಲಿ ಭಾನುವಾರ ಮಧ್ಯಾಹ್ನದಿಂದ ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>