ಭಾರಿ ಮಳೆಗೆ ಮರವಂತೆ ಸಮೀಪದ ಕುರುದ್ವೀಪ ಜಲಾವೃತಗೊಂಡು ಸಾರಿಗೆ ಸಂಪರ್ಕ ಕಡಿದುಕೊಂಡಿತ್ತು. ನೆರೆಯ ನಡುವೆಯೇ ದ್ವೀಪದಲ್ಲಿದ್ದ ಶಿಲ್ಪಾ ಹಾಗೂ ಸಂಜನಾ ಎಂಬ ವಿದ್ಯಾರ್ಥಿನಿಯರು ಜುಲೈ 19ರಂದು ದೋಣಿಯಲ್ಲಿ ಬಂದು ಪರೀಕ್ಷೆ ಬರೆದಿದ್ದರು. ಈ ವಿಚಾರ ತಿಳಿದ ಡಿಡಿಪಿಐ ಗುರುವಾರ ಬೆಳಿಗ್ಗೆ ಬೈಂದೂರು ತಹಶೀಲ್ದಾರ್ ಹಾಗೂ ಬಿಇಒ ಜತೆ ದ್ವೀಪಕ್ಕೆ ತೆರಳಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ನಂತರ ದೋಣಿಯಲ್ಲಿ ದಡಕ್ಕೆ ಕರೆತಂದು ಅಲ್ಲಿಂದ ಇಲಾಖೆಯ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು.