ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಕಲಕರಡಿ ಎಂಬಲ್ಲಿ ಗ್ರಾಮಸ್ಥರು ‘ಕೆರೆ ಬೇಟೆ’ ಸಂಭ್ರಮದಲ್ಲಿ ಮುಳುಗಿದ್ದಾರೆ. ಕೆರೆಬೇಟೆ ಎಂದರೆ ಮೀನು ಹಿಡಿಯುವ ಹಬ್ಬ. ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸಲು ನಡೆಯುವ ಈ ಹಬ್ಬದಲ್ಲಿ ಹಿಂದೂಗಳ ಜೊತೆಗೆ, ಇಪ್ಪತ್ತಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರು ಕೂಡ ಪಾಲ್ಗೊಳ್ಳುತ್ತಾರೆ. ಅವರೆಲ್ಲ ದೇವಸ್ಥಾನಕ್ಕೆ ದೇಣಿಗೆ ನೀಡಿಯೇ ಕೂಣಿ ಪಡೆದುಕೊಳ್ಳುತ್ತಾರೆ. ಈ ಕಲಕರಡಿ ಕೆರೆಬೇಟೆ ಸೌಹಾರ್ದತೆ ಕಾಯುವ ಊರಹಬ್ಬವೂ ಹೌದು.