ವಿಜಯನಗರ ಅರಸರ ಕಾಲದಲ್ಲೂ ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿ ಆಚರಣೆಯಲ್ಲಿತ್ತು. ಅದನ್ನು ಸಹಿಸಿಕೊಳ್ಳದೇ ಅದರ ವಿರುದ್ಧ ಸೆಟೆದದ್ದು ತಮ್ಮದೇ ಸ್ವಾಭಿಮಾನದ ಸಂಪ್ರದಾಯ ಕಟ್ಟಿಕೊಂಡು, ಇಂದಿಗೂ ಆಚರಿಸುತ್ತಿರುವವರು ಹೊಸಪೇಟೆಯ ಏಳು ಕೇರಿ ವಾಲ್ಮೀಕಿ ನಾಯಕ ಸಮಾಜದವರು. ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದಲ್ಲಿ ಏಳು ಸಾವಿರ ಬೇಡ ನಾಯಕರ ಬಲಿಷ್ಠ ಪಡೆ ಇತ್ತು. ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಈ ಪಡೆ ಏಳು ಕೇರಿಗಳಿಗೆ ಸೀಮಿತವಾಯಿತು. ಅವುಗಳೇ ಇಂದಿನ ಏಳು ಕೇರಿಗಳು. ನಾಯಕರಿಗೆ ಈ ನವರಾತ್ರಿ ಆಚರಣೆಯೇ ಎಲ್ಲಕ್ಕಿಂತ ದೊಡ್ಡ ಹಬ್ಬ.