ಬೀದರ್ನ ವಿನಯಕುಮಾರ್ ಗಾದ್ಗೆ ಈ ಬಾರಿಯ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 151ನೇ ರ್ಯಾಂಕ್ ಪಡೆದಿದ್ದಾರೆ. ಕೆಎಎಸ್ ಅಧಿಕಾರಿ ಆಗಿರುವ ವಿನಯಕುಮಾರ್ ವೈದ್ಯರೂ ಹೌದು. ನಾಲ್ಕನೇ ಯತ್ನದಲ್ಲಿ ಯಶಸ್ಸು ಪಡೆದಿರುವ ಅವರು, ದಿನಪತ್ರಿಕೆಗಳ ಓದು ಮತ್ತು ‘ಸ್ಮಾರ್ಟ್ ಗೆಸ್’ ಯಶಸ್ಸಿನ ಮೂಲಮಂತ್ರ ಎನ್ನುತ್ತಾರೆ.