ಮನುಷ್ಯರಂತೆ ಗಿಡಮರಗಳಿಗೂ ಜೀವವಿದೆ. ಇವು ಇಂಗಾಲವನ್ನು ತೆಗೆದುಕೊಂಡು, ಆಮ್ಲಜನಕವನ್ನು ಹೊರಹಾಕಿದರೆ ಮಾತ್ರ ಮನುಷ್ಯ ನಿಶ್ಚಿಂತೆಯಿಂದ ಉಸಿರಾಡಬಲ್ಲ. ಇಂತಹ ಗಿಡಮರಗಳಿಗೆ ಗಾಯ ಮಾಡಿ, ಅವುಗಳಿಗೆ ನೋವು ನೀಡುವುದು ಅನ್ಯಾಯ ಅಲ್ಲವೇ? ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಗಿಡಮರಗಳಿಗೆ ಮೊಳೆಯೊಡೆದು ಪ್ರಚಾರ ನಡೆಸುವವರ ಜಾಡು ರಾಜ್ಯದ ಎಲ್ಲ ನಗರಪ್ರದೇಶಗಳಲ್ಲೂ ಇದೆ.