ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಮೈಸೂರು ಜಿಲ್ಲಾಡಳಿತ ಹಾಗೂ ಚಾಮರಾಜನಗರ ಜಿಲ್ಲಾಡಳಿತದ ನಡುವಿನ ಸಂಹವನದ ಕೊರತೆಯಿಂದ ಮುಗ್ಧ ಜೀವಿಗಳು ಬಲಿಯಾದವೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಮೈಸೂರಿನ ಜಿಲ್ಲಾಡಳಿತ ಹೊರ ಜಿಲ್ಲೆಗಳಿಗೆ ಆಮ್ಲಜನ ಪೂರೈಸಬಾರದು ಎಂದು ಆಮ್ಲಜನಕ ಉತ್ಪಾದನಾ ಸಂಸ್ಥೆಗಳಿಗೆ ತಾಕೀತು ಮಾಡಿತ್ತು ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಮೈಸೂರು ಜಿಲ್ಲಾಡಳಿತ ಈ ಆರೋಪವನ್ನು ತಿರಸ್ಕರಿಸಿದೆ. ಅಗತ್ಯ ಸಿಲಿಂಡರ್ಗಳನ್ನು ಪೂರೈಸಲಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಭಾನುವಾರ ರಾತ್ರಿ 9 ಗಂಟೆಗೆ ಬರಬೇಕಾಗಿದ್ದ ಸಿಲಿಂಡರ್ಗಳು ತಲುಪಿಲ್ಲ ಎಂಬುದು ನಿಜ.ಭಾನುವಾರ ರಾತ್ರಿ ಆಗಿದ್ದೇನು? ಸಚಿವ ಸುಧಾಕರ್ ಅವರ ಪ್ರತಿಕ್ರಿಯೆ ಏನು?