<p>ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಒಂದು ರಾಮಮಂದಿರದಲ್ಲಿದ್ದ ಪರದೆ, ಕನ್ನಡತಿ ವೃಂದಾ ಶೇಖರ್ ಅವರ ಬೆನ್ನೇರಿದೆ.</p><p>ರಾಮನ ವಿಗ್ರಹದ ಹಿಂದೆ ಪರದೆಯಂತೆ ಬಳಸುತ್ತಿದ್ದ ಟಸ್ಸರ್ ಸಿಲ್ಕ್ನ ವಸ್ತ್ರದ ತುಣುಕು ಆಶೀರ್ವಾದದ ರೂಪದಲ್ಲಿ ವೃಂದಾ ಕೈಗೆ ಬಂದಿತು. ಮೊದಲೆಲ್ಲ ಈ ಪರದೆಯನ್ನು ನೀಡಲು ಅರ್ಚಕರು ನಿರಾಕರಿಸಿದರು. ದೇವರನ್ನು ಅವಮಾನಿಸಿದಂತೆ ಎಂದೆಲ್ಲ ಹೇಳಿದರು. ಈಗಾಗಲೇ ಬುದ್ಧನ ಚಿತ್ರವನ್ನು ಮನಬಂದಂತೆ ಬಳಸಲಾಗುತ್ತಿದೆ. ಹಾಗೆಯೇ ಇದೂ ಆದರೆ ಎಂಬ ಆತಂಕ ವ್ಯಕ್ತಪಡಿಸಿದರು.</p><p>ವೃಂದಾ ಮಾತ್ರ ತಮ್ಮ ರಾಮ ಭಕ್ತಿಯನ್ನೂ ಸಮ್ಮಿಳಿಸಿ, ದೇವರು ನನ್ನ ಬೆನ್ನಿಗಿರಲಿ ಎಂಬ ಆಶಯವನ್ನು ಸ್ಪಷ್ಟಪಡಿಸಿದರು. ಎಲ್ಲಿಯೂ ರಾಮ ಎಂಬ ಹೆಸರು ಬರುವಲ್ಲಿ ಕತ್ತರಿ ಹಾಕದಂತೆ ಬಳಸಬೇಕಿತ್ತು. ಈ ವಸ್ತ್ರದಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಶೇಕದ ಚಿತ್ರವನ್ನೂ ಚಿತ್ರಿಸಲಾಗಿದೆ. ಜೊತೆಗೆ ತುಳಸೀದಾಸರ ಶ್ರೀರಾಮ ಚರಿತಮಾನಸವನ್ನೂ ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.</p><p>ಅದನ್ನು ನಾಜೂಕಾಗಿ ರವಿಕೆಗೆ ಒಪ್ಪುವಂತೆ ವಿನ್ಯಾಸವನ್ನು ಒಪ್ಪಗೊಳಿಸಿದರು. ಬೆನ್ನಿಗಿರಲಿ ರಾಮನ ಬೆಳಕು ಎಂಬಂತೆ ರವಿಕೆಯನ್ನು ಸಿದ್ಧಪಡಿಸಿದರು. ಈ ರವಿಕೆ ತೊಟ್ಟಾಗ ಆದ ದೈವೀಕ ಅನುಭವ ವರ್ಣಿಸಲು ಅಸದಳ ಎನ್ನುತ್ತಾರೆ ವೃಂದಾ.</p><p>ಅಷ್ಟೂ ವರ್ಷಕಾಲ ದೇವೋಪಾಸನೆಯ ಪರಿಸರದಲ್ಲಿ ಇದ್ದುದರಿಂದ ಈ ರವಿಕೆ ಸ್ಪರ್ಶಿಸಿದರೂ ಸಕಾರಾತ್ಮಕ ಅಲೆಗಳ ಅನುಭೂತಿ ಉಂಟಾಗುತ್ತದೆ. ಮತ್ತು ಪ್ರತಿಸಲವೂ ಆ ಅರ್ಚಕರ ಎಚ್ಚರವೂ ಇರುತ್ತದೆ. ನಮ್ಮನು ಘನತೆಯಿಂದ ಕಾಣುವಂತೆ ಮಾಡುವ ರವಿಕೆ, ಈ ಚಿತ್ರದಿಂದಾಗಿ ಗೌರವವನ್ನೂ ತಂದು ಕೊಡುತ್ತಿದೆ ಎನ್ನುತ್ತಾರೆ.</p><p>ಈ ವಿನ್ಯಾಸದಿಂದಲೇ ಸ್ಫೂರ್ತಿ ಪಡೆದ ವೃಂದಾ, ದೇಗುಲದ ವಿನ್ಯಾಸವನ್ನು ರವಿಕೆಯ ಬೆನ್ನಿಗೆ ಬರೆಯಿಸಿ, ಕಡ್ಡಿ ಹೊಲಿಗೆಯಿಂದ ಕಸೂತಿ ಮಾಡಿಸಿದರು. ಈ ವಸ್ತ್ರ ನೇಯ್ದಿದ್ದು ಬಾಗಲಕೋಟೆ ಜಿಲ್ಲೆಯ ನೇಕಾರರು. ಕಸೂತಿ ಮಾಡಿದ್ದು, ವೃಂದಾ ಅವರ ಸಹಾಯಕಿ ಪ್ರಿಯಾ. ಕ್ರೈಸ್ತಧರ್ಮದ ಈ ಯುವತಿ ರಾಮಬಂಟ ಹನುಮನ ಭಕ್ತೆಯೂ ಹೌದು. ಅವರು ಈ ದೇಗುಲವನ್ನು ಕಸೂತಿಯಲ್ಲಿ ಸೆರೆ ಹಿಡಿದರು.</p><p>ಪಟ್ಟಾಭಿಷೇಕದ ರಾಮ, ತುಳಸೀದಾಸರ ರಾಮ ಹಾಗೂ ಬಾಲರಾಮನ ಮಂದಿರ ಎಲ್ಲವೂ ವೃಂದಾ ಶೇಖರ್ ಸಂಗ್ರಹದಲ್ಲಿ ಬೆಚ್ಚಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಒಂದು ರಾಮಮಂದಿರದಲ್ಲಿದ್ದ ಪರದೆ, ಕನ್ನಡತಿ ವೃಂದಾ ಶೇಖರ್ ಅವರ ಬೆನ್ನೇರಿದೆ.</p><p>ರಾಮನ ವಿಗ್ರಹದ ಹಿಂದೆ ಪರದೆಯಂತೆ ಬಳಸುತ್ತಿದ್ದ ಟಸ್ಸರ್ ಸಿಲ್ಕ್ನ ವಸ್ತ್ರದ ತುಣುಕು ಆಶೀರ್ವಾದದ ರೂಪದಲ್ಲಿ ವೃಂದಾ ಕೈಗೆ ಬಂದಿತು. ಮೊದಲೆಲ್ಲ ಈ ಪರದೆಯನ್ನು ನೀಡಲು ಅರ್ಚಕರು ನಿರಾಕರಿಸಿದರು. ದೇವರನ್ನು ಅವಮಾನಿಸಿದಂತೆ ಎಂದೆಲ್ಲ ಹೇಳಿದರು. ಈಗಾಗಲೇ ಬುದ್ಧನ ಚಿತ್ರವನ್ನು ಮನಬಂದಂತೆ ಬಳಸಲಾಗುತ್ತಿದೆ. ಹಾಗೆಯೇ ಇದೂ ಆದರೆ ಎಂಬ ಆತಂಕ ವ್ಯಕ್ತಪಡಿಸಿದರು.</p><p>ವೃಂದಾ ಮಾತ್ರ ತಮ್ಮ ರಾಮ ಭಕ್ತಿಯನ್ನೂ ಸಮ್ಮಿಳಿಸಿ, ದೇವರು ನನ್ನ ಬೆನ್ನಿಗಿರಲಿ ಎಂಬ ಆಶಯವನ್ನು ಸ್ಪಷ್ಟಪಡಿಸಿದರು. ಎಲ್ಲಿಯೂ ರಾಮ ಎಂಬ ಹೆಸರು ಬರುವಲ್ಲಿ ಕತ್ತರಿ ಹಾಕದಂತೆ ಬಳಸಬೇಕಿತ್ತು. ಈ ವಸ್ತ್ರದಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಶೇಕದ ಚಿತ್ರವನ್ನೂ ಚಿತ್ರಿಸಲಾಗಿದೆ. ಜೊತೆಗೆ ತುಳಸೀದಾಸರ ಶ್ರೀರಾಮ ಚರಿತಮಾನಸವನ್ನೂ ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.</p><p>ಅದನ್ನು ನಾಜೂಕಾಗಿ ರವಿಕೆಗೆ ಒಪ್ಪುವಂತೆ ವಿನ್ಯಾಸವನ್ನು ಒಪ್ಪಗೊಳಿಸಿದರು. ಬೆನ್ನಿಗಿರಲಿ ರಾಮನ ಬೆಳಕು ಎಂಬಂತೆ ರವಿಕೆಯನ್ನು ಸಿದ್ಧಪಡಿಸಿದರು. ಈ ರವಿಕೆ ತೊಟ್ಟಾಗ ಆದ ದೈವೀಕ ಅನುಭವ ವರ್ಣಿಸಲು ಅಸದಳ ಎನ್ನುತ್ತಾರೆ ವೃಂದಾ.</p><p>ಅಷ್ಟೂ ವರ್ಷಕಾಲ ದೇವೋಪಾಸನೆಯ ಪರಿಸರದಲ್ಲಿ ಇದ್ದುದರಿಂದ ಈ ರವಿಕೆ ಸ್ಪರ್ಶಿಸಿದರೂ ಸಕಾರಾತ್ಮಕ ಅಲೆಗಳ ಅನುಭೂತಿ ಉಂಟಾಗುತ್ತದೆ. ಮತ್ತು ಪ್ರತಿಸಲವೂ ಆ ಅರ್ಚಕರ ಎಚ್ಚರವೂ ಇರುತ್ತದೆ. ನಮ್ಮನು ಘನತೆಯಿಂದ ಕಾಣುವಂತೆ ಮಾಡುವ ರವಿಕೆ, ಈ ಚಿತ್ರದಿಂದಾಗಿ ಗೌರವವನ್ನೂ ತಂದು ಕೊಡುತ್ತಿದೆ ಎನ್ನುತ್ತಾರೆ.</p><p>ಈ ವಿನ್ಯಾಸದಿಂದಲೇ ಸ್ಫೂರ್ತಿ ಪಡೆದ ವೃಂದಾ, ದೇಗುಲದ ವಿನ್ಯಾಸವನ್ನು ರವಿಕೆಯ ಬೆನ್ನಿಗೆ ಬರೆಯಿಸಿ, ಕಡ್ಡಿ ಹೊಲಿಗೆಯಿಂದ ಕಸೂತಿ ಮಾಡಿಸಿದರು. ಈ ವಸ್ತ್ರ ನೇಯ್ದಿದ್ದು ಬಾಗಲಕೋಟೆ ಜಿಲ್ಲೆಯ ನೇಕಾರರು. ಕಸೂತಿ ಮಾಡಿದ್ದು, ವೃಂದಾ ಅವರ ಸಹಾಯಕಿ ಪ್ರಿಯಾ. ಕ್ರೈಸ್ತಧರ್ಮದ ಈ ಯುವತಿ ರಾಮಬಂಟ ಹನುಮನ ಭಕ್ತೆಯೂ ಹೌದು. ಅವರು ಈ ದೇಗುಲವನ್ನು ಕಸೂತಿಯಲ್ಲಿ ಸೆರೆ ಹಿಡಿದರು.</p><p>ಪಟ್ಟಾಭಿಷೇಕದ ರಾಮ, ತುಳಸೀದಾಸರ ರಾಮ ಹಾಗೂ ಬಾಲರಾಮನ ಮಂದಿರ ಎಲ್ಲವೂ ವೃಂದಾ ಶೇಖರ್ ಸಂಗ್ರಹದಲ್ಲಿ ಬೆಚ್ಚಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>