ಕೋಲ್ಕತ್ತದಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್ ಕಚೇರಿಯ ಕಾರ್ಯದರ್ಶಿ (ರಾಜಕೀಯ) ಮೊಹಮ್ಮದ್ ಸ್ಯಾಮಿಯುಲ್ ಖಾದರ್ ಮಾವಿನ ಹಣ್ಣುಗಳನ್ನು ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಆನೇಕ ರಾಜಕೀಯ ಮುಖಂಡರಿಗೂ ಮಾವಿನ ಹಣ್ಣುಗಳನ್ನು ಬಾಂಗ್ಲಾದೇಶ ಕಳುಹಿಸಿಕೊಟ್ಟಿದೆ ಎಂದು ‘ಯುನೈಟೆಡ್ ನ್ಯೂಸ್ ಆಫ್ ಬಾಂಗ್ಲಾದೇಶ್’ ವರದಿ ಮಾಡಿದೆ.