ಅಗತ್ಯ ಕಂಡು ಬಂದಲ್ಲಿ ಯೋಜನೆಯಲ್ಲಿ ಬದಲಾವಣೆ ಮಾಡುವ ಸುಳಿವನ್ನೂ ಅವರು ನೀಡಿದ್ದಾರೆ. ‘ಇಷ್ಟೇ ಮೊತ್ತದ ಪ್ಯಾಕೇಜ್ ಇರಬೇಕು ಎಂಬ ನಿರ್ಬಂಧವೇನಿಲ್ಲ. ಹೀಗಾಗಿ ಯೋಜನೆಯ ಅನುಷ್ಠಾನದಲ್ಲಿ ಮೃದು ಧೋರಣೆ ಇರಲಿ. ಜನರಿಗೆ ನೆರವಾಗುವ ಮೂಲಕ ಅವರಲ್ಲಿ ಉತ್ಸಾಹ, ಭದ್ರತೆಯ ಭಾವನೆಯನ್ನು ಮರುಸ್ಥಾಪಿಸಿ’ ಎಂದು ಸಂಸದರಿಗೆ ಅವರು ಸಲಹೆ ನೀಡಿದರು.