ತುರ್ತುಪರಿಸ್ಥಿತಿ ಘೋಷಣೆ ಅಂಗೀಕಾರವಾದ ನಂತರ ದೂರದರ್ಶನದ ಮೂಲಕ ಮಾತನಾಡಿದ ಪ್ರಧಾನ ಮಂತ್ರಿ ಮೊಹಿದ್ದೀನ್, ‘ಈಗ ಘೋಷಿಸಿರುವ ತುರ್ತು ಪರಿಸ್ಥಿತಿ ಯಾವುದೇ ಸೇನಾ ದಂಗೆಯಲ್ಲ. ಈಗ ದೇಶದಲ್ಲಿ ಕರ್ಫ್ಯೂ ವಿಧಿಸುವುದಿಲ್ಲ‘ ಎಂದು ಮಲೇಷ್ಯಾ ನಾಗರಿಕರಿಗೆ ಭರವಸೆ ನೀಡಿದರು. ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸರ್ಕಾರ ಉಸ್ತುವಾರಿಯಾಗಿ ದೇಶವನ್ನು ಮುನ್ನಡೆಸಲಿದೆ‘ ಎಂದು ತಿಳಿಸಿದರು.