<p><strong>ಕಠ್ಮಂಡು: </strong>ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಭಾನುವಾರ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದಾರೆ. ಇದರ ಬೆನ್ನಲ್ಲೇ ಮಧ್ಯಂತರ ಚುನಾವಣೆಯನ್ನೂ ಘೋಷಿಸಿದ್ದಾರೆ.</p>.<p>‘ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಶಿಫಾರಸು ಆಧರಿಸಿ ವಿದ್ಯಾದೇವಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಏಪ್ರಿಲ್ 30ರಂದು ಮೊದಲ ಹಂತ ಹಾಗೂ ಮೇ 10ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.</p>.<p>‘ನೇಪಾಳ ಸಂವಿಧಾನದ 76ನೇ ವಿಧಿ (ಅನುಚ್ಛೇದ 1 ಮತ್ತು 7) ಹಾಗೂ 85ನೇ ವಿಧಿಗಳ ಅಡಿಯಲ್ಲಿ ಸಂಸತ್ ವಿಸರ್ಜಿಸಲಾಗಿದೆ’ ಎಂದೂ ಪ್ರಕಟಣೆ ಹೇಳಿದೆ.</p>.<p>ಒಲಿ ಹಾಗೂ ಪುಷ್ಪ ಕಮಲ್ ದಹಾಲ್ (ಪ್ರಚಂಡ) ಅವರ ನಡುವೆ ಕೆಲ ದಿನಗಳಿಂದ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿತ್ತು. ಹೀಗಾಗಿ ಒಲಿ ಅವರು ಅಚ್ಚರಿಯ ತೀರ್ಮಾನ ಕೈಗೊಂಡಿದ್ದು, ಅವರ ನಡೆಯನ್ನು ಹಲವರು ಟೀಕಿಸಿದ್ದಾರೆ.</p>.<p>‘ಒಲಿ ಅವರ ನೇತೃತ್ವದಲ್ಲಿ ನಡೆದ ತುರ್ತು ಸಂಪುಟ ಸಭೆಯಲ್ಲಿ ಸಂಸತ್ ವಿಸರ್ಜನೆಗೆ ಶಿಫಾರಸು ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು’ ಎಂದು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್ಸಿಪಿ) ಸ್ಥಾಯಿ ಸಮಿತಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.</p>.<p>275 ಸದಸ್ಯ ಬಲದ ನೇಪಾಳ ಸಂಸತ್ಗೆ 2017ರಲ್ಲಿ ಚುನಾವಣೆ ನಡೆದಿತ್ತು. ಚುನಾಯಿತ ಸರ್ಕಾರವು ಐದು ವರ್ಷಗಳ ಅಧಿಕಾರಾವಧಿ ಹೊಂದಿತ್ತು.</p>.<p>‘ಒಲಿ ಅವರ ನಡೆ ಅಸಾಂವಿಧಾನಿಕವಾದುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಒಲಿ ಅವರ ನಿರಂಕುಶಾಧಿಕಾರಕ್ಕೆ ಹಿಡಿದ ಕೈಗನ್ನಡಿ. ಈ ಸಂಬಂಧ ಸ್ಥಾಯಿ ಸಮಿತಿ ಸಭೆ ಕರೆದು ಚರ್ಚಿಸುತ್ತೇವೆ’ ಎಂದು ಎನ್ಸಿಪಿ ವಕ್ತಾರ ನಾರಾಯಣ ಕಾಜಿ ಶ್ರೇಷ್ಠ ಅವರು ಹೇಳಿದ್ದಾರೆ.</p>.<p>ಎನ್ಸಿಪಿಯ ಹಿರಿಯ ಮುಖಂಡ ಹಾಗೂ ಮಾಜಿ ಪ್ರಧಾನಿ ಮಾಧವಕುಮಾರ್ ನೇಪಾಳ್ ಕೂಡ ಒಲಿ ಅವರ ನಡೆ ‘ಅಸಾಂವಿಧಾನಿಕ’ ಎಂದು ಟೀಕಿಸಿದ್ದಾರೆ.</p>.<p>ಒಲಿ ಅವರು ಸಂಸತ್ ವಿಸರ್ಜನೆಗೆ ಶಿಫಾರಸು ಮಾಡಿದ ಬೆನ್ನಲ್ಲೇ ಎನ್ಸಿಬಿ ಮುಖಂಡರು ದಹಾಲ್ ಅವರ ನಿವಾಸದಲ್ಲಿ ಸಭೆ ಸೇರಿ ಚರ್ಚಿಸಿದ್ದಾರೆ.</p>.<p>‘ಮಾಧವ ನೇಪಾಳ್, ಜಲನಾಥ್ ಖನಾಲ್ ಮತ್ತು ನಾರಾಯಣ ಕಾಜಿ ಸೇರಿದಂತೆ ಕೆಲ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು’ ಎಂದು ದಹಾಲ್ ಅವರ ಮಾಧ್ಯಮ ಸಲಹೆಗಾರ ವಿಷ್ಣು ಸಪಕೋಟಾ ಹೇಳಿದ್ದಾರೆ.</p>.<p><strong>ಬರಿಗೈಲಿ ವಾಪಾಸಾಗಿದ್ದ ಪ್ರಚಂಡ</strong></p>.<p>‘ಪ್ರಚಂಡ ಅವರು ಭಾನುವಾರ ಬೆಳಿಗ್ಗೆ ಪ್ರಧಾನಿ ಒಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ’ ಎಂದು ದಿ ರೈಸಿಂಗ್ ನೇಪಾಳ ಪತ್ರಿಕೆ ವರದಿ ಮಾಡಿದೆ.</p>.<p>‘ಪಕ್ಷವೊಂದಕ್ಕೆ ಸ್ಪಷ್ಟ ಬಹುಮತವಿದ್ದಾಗ ಪ್ರಧಾನಿ ಅವರು ಸಂಸತ್ ವಿಸರ್ಜನೆಗೆ ಶಿಫಾರಸು ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಒಲಿ ಅವರ ಈ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ಇದೊಂದು ಬೇಜವಾಬ್ದಾರಿಯುತ ನಿರ್ಧಾರ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ನಡೆ. ಈ ಹಿಂದೆ ಇದ್ದ ರಾಜಕೀಯ ಅಸ್ಥಿರತೆಯನ್ನು ದೂರಮಾಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಬೇಕೆಂಬ ನಮ್ಮ ಪಕ್ಷದ ಪ್ರಯತ್ನಕ್ಕೆ ಇದರಿಂದ ತೀವ್ರ ಹಿನ್ನಡೆ ಉಂಟಾಗಿದೆ’ ಎಂದು ಮಾಜಿ ಪ್ರಧಾನಿ ಬಾಬುರಾಮ್ ಭಟ್ಟಾರಾಜ್ ಹೇಳಿದ್ದಾರೆ.</p>.<p>ಈ ಎಲ್ಲಾ ವಿದ್ಯಮಾನಗಳ ನಡುವೆ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ (ಎನ್ಸಿ) ಭಾನುವಾರ ತುರ್ತು ಸಭೆ ನಡೆಸಿ ಚರ್ಚಿಸಿದೆ.</p>.<p>‘ಒಲಿ ಅವರು ದೇಶದಲ್ಲಿ ನಿರಂಕುಶ ಆಡಳಿತ ಹೇರಲು ಮುಂದಾಗಿದ್ದಾರೆ’ ಎಂದು ಎನ್ಸಿ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೆವುಬಾ ಅವರು ಇತ್ತೀಚೆಗೆ ಕಿಡಿಕಾರಿದ್ದರು.</p>.<p><strong>ಬಿಕ್ಕಟ್ಟಿನ ಹಿನ್ನೆಲೆ</strong></p>.<p>ಒಲಿ ಆಡಳಿತದ ಬಗ್ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಪ್ರಚಂಡ ಹಾಗೂ ಮಾಧವ ನೇಪಾಳ್ ಬಣದವರು ಒಲಿ ಅವರ ಮೇಲೆ ಒತ್ತಡ ಹೇರುತ್ತಿದ್ದರು.</p>.<p>ನವೆಂಬರ್ 13ರಂದು ನಡೆದಿದ್ದ ಸಚಿವಾಲಯದ ಸಭೆಯ ಮುಂದೆ 19 ಪುಟಗಳ ವರದಿಯೊಂದನ್ನು ಇಟ್ಟಿದ್ದ ಪ್ರಚಂಡ, ‘ಒಲಿ ಅವರು ಸರ್ಕಾರ ಹಾಗೂ ಪಕ್ಷವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ವಿಫಲರಾಗಿದ್ದಾರೆ. ಹಲವು ಭ್ರಷ್ಟಾಚಾರಗಳಲ್ಲೂ ಭಾಗಿಯಾಗಿದ್ದಾರೆ’ ಎಂದು ದೂರಿದ್ದರು.</p>.<p>ಇದನ್ನು ವಿರೋಧಿಸಿದ್ದ ಒಲಿ, ತಮ್ಮ ಮೇಲಿನ ಆರೋಪವನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಅವರು 38 ಪುಟಗಳ ವರದಿಯೊಂದನ್ನು ಸಭೆಯ ಮುಂದಿಟ್ಟಿದ್ದರು.</p>.<p>ದೇಶದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಾಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ನೇಪಾಳ ಸಂಸತ್ನ ಕೆಳಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.</p>.<p>ಭಾರತದ ಜೊತೆಗಿನ ವಿವಾದಿತ ಗಡಿಯಲ್ಲಿರುವ ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧೂರಾ ಪ್ರದೇಶಗಳು ತನ್ನದೆಂದು ಪ್ರತಿಪಾದಿಸಿದ್ದ ನೇಪಾಳ, ಮಾರ್ಪಡಿಸಿದ ಭೂಪಟದಲ್ಲಿ ಈ ಪ್ರದೇಶಗಳನ್ನೂ ಸೇರಿಸಿತ್ತು.</p>.<p>ಈ ನಿರ್ಧಾರವನ್ನು ಸಹಿಸದ ಕೆಲವರು ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಒಲಿ ಅವರು ಈ ವರ್ಷದ ಜೂನ್ನಲ್ಲಿ ಹೇಳಿದ್ದರು. ಬಳಿಕ ಪಕ್ಷದೊಳಗೆ ಸಂಘರ್ಷ ಹೆಚ್ಚಾಗಿ ಒಲಿ ಹಾಗೂ ಪ್ರಚಂಡ ಬಣಗಳಾಗಿ ಹೋಳಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು: </strong>ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಭಾನುವಾರ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದಾರೆ. ಇದರ ಬೆನ್ನಲ್ಲೇ ಮಧ್ಯಂತರ ಚುನಾವಣೆಯನ್ನೂ ಘೋಷಿಸಿದ್ದಾರೆ.</p>.<p>‘ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಶಿಫಾರಸು ಆಧರಿಸಿ ವಿದ್ಯಾದೇವಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಏಪ್ರಿಲ್ 30ರಂದು ಮೊದಲ ಹಂತ ಹಾಗೂ ಮೇ 10ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.</p>.<p>‘ನೇಪಾಳ ಸಂವಿಧಾನದ 76ನೇ ವಿಧಿ (ಅನುಚ್ಛೇದ 1 ಮತ್ತು 7) ಹಾಗೂ 85ನೇ ವಿಧಿಗಳ ಅಡಿಯಲ್ಲಿ ಸಂಸತ್ ವಿಸರ್ಜಿಸಲಾಗಿದೆ’ ಎಂದೂ ಪ್ರಕಟಣೆ ಹೇಳಿದೆ.</p>.<p>ಒಲಿ ಹಾಗೂ ಪುಷ್ಪ ಕಮಲ್ ದಹಾಲ್ (ಪ್ರಚಂಡ) ಅವರ ನಡುವೆ ಕೆಲ ದಿನಗಳಿಂದ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿತ್ತು. ಹೀಗಾಗಿ ಒಲಿ ಅವರು ಅಚ್ಚರಿಯ ತೀರ್ಮಾನ ಕೈಗೊಂಡಿದ್ದು, ಅವರ ನಡೆಯನ್ನು ಹಲವರು ಟೀಕಿಸಿದ್ದಾರೆ.</p>.<p>‘ಒಲಿ ಅವರ ನೇತೃತ್ವದಲ್ಲಿ ನಡೆದ ತುರ್ತು ಸಂಪುಟ ಸಭೆಯಲ್ಲಿ ಸಂಸತ್ ವಿಸರ್ಜನೆಗೆ ಶಿಫಾರಸು ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು’ ಎಂದು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್ಸಿಪಿ) ಸ್ಥಾಯಿ ಸಮಿತಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.</p>.<p>275 ಸದಸ್ಯ ಬಲದ ನೇಪಾಳ ಸಂಸತ್ಗೆ 2017ರಲ್ಲಿ ಚುನಾವಣೆ ನಡೆದಿತ್ತು. ಚುನಾಯಿತ ಸರ್ಕಾರವು ಐದು ವರ್ಷಗಳ ಅಧಿಕಾರಾವಧಿ ಹೊಂದಿತ್ತು.</p>.<p>‘ಒಲಿ ಅವರ ನಡೆ ಅಸಾಂವಿಧಾನಿಕವಾದುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಒಲಿ ಅವರ ನಿರಂಕುಶಾಧಿಕಾರಕ್ಕೆ ಹಿಡಿದ ಕೈಗನ್ನಡಿ. ಈ ಸಂಬಂಧ ಸ್ಥಾಯಿ ಸಮಿತಿ ಸಭೆ ಕರೆದು ಚರ್ಚಿಸುತ್ತೇವೆ’ ಎಂದು ಎನ್ಸಿಪಿ ವಕ್ತಾರ ನಾರಾಯಣ ಕಾಜಿ ಶ್ರೇಷ್ಠ ಅವರು ಹೇಳಿದ್ದಾರೆ.</p>.<p>ಎನ್ಸಿಪಿಯ ಹಿರಿಯ ಮುಖಂಡ ಹಾಗೂ ಮಾಜಿ ಪ್ರಧಾನಿ ಮಾಧವಕುಮಾರ್ ನೇಪಾಳ್ ಕೂಡ ಒಲಿ ಅವರ ನಡೆ ‘ಅಸಾಂವಿಧಾನಿಕ’ ಎಂದು ಟೀಕಿಸಿದ್ದಾರೆ.</p>.<p>ಒಲಿ ಅವರು ಸಂಸತ್ ವಿಸರ್ಜನೆಗೆ ಶಿಫಾರಸು ಮಾಡಿದ ಬೆನ್ನಲ್ಲೇ ಎನ್ಸಿಬಿ ಮುಖಂಡರು ದಹಾಲ್ ಅವರ ನಿವಾಸದಲ್ಲಿ ಸಭೆ ಸೇರಿ ಚರ್ಚಿಸಿದ್ದಾರೆ.</p>.<p>‘ಮಾಧವ ನೇಪಾಳ್, ಜಲನಾಥ್ ಖನಾಲ್ ಮತ್ತು ನಾರಾಯಣ ಕಾಜಿ ಸೇರಿದಂತೆ ಕೆಲ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು’ ಎಂದು ದಹಾಲ್ ಅವರ ಮಾಧ್ಯಮ ಸಲಹೆಗಾರ ವಿಷ್ಣು ಸಪಕೋಟಾ ಹೇಳಿದ್ದಾರೆ.</p>.<p><strong>ಬರಿಗೈಲಿ ವಾಪಾಸಾಗಿದ್ದ ಪ್ರಚಂಡ</strong></p>.<p>‘ಪ್ರಚಂಡ ಅವರು ಭಾನುವಾರ ಬೆಳಿಗ್ಗೆ ಪ್ರಧಾನಿ ಒಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ’ ಎಂದು ದಿ ರೈಸಿಂಗ್ ನೇಪಾಳ ಪತ್ರಿಕೆ ವರದಿ ಮಾಡಿದೆ.</p>.<p>‘ಪಕ್ಷವೊಂದಕ್ಕೆ ಸ್ಪಷ್ಟ ಬಹುಮತವಿದ್ದಾಗ ಪ್ರಧಾನಿ ಅವರು ಸಂಸತ್ ವಿಸರ್ಜನೆಗೆ ಶಿಫಾರಸು ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಒಲಿ ಅವರ ಈ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ಇದೊಂದು ಬೇಜವಾಬ್ದಾರಿಯುತ ನಿರ್ಧಾರ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ನಡೆ. ಈ ಹಿಂದೆ ಇದ್ದ ರಾಜಕೀಯ ಅಸ್ಥಿರತೆಯನ್ನು ದೂರಮಾಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಬೇಕೆಂಬ ನಮ್ಮ ಪಕ್ಷದ ಪ್ರಯತ್ನಕ್ಕೆ ಇದರಿಂದ ತೀವ್ರ ಹಿನ್ನಡೆ ಉಂಟಾಗಿದೆ’ ಎಂದು ಮಾಜಿ ಪ್ರಧಾನಿ ಬಾಬುರಾಮ್ ಭಟ್ಟಾರಾಜ್ ಹೇಳಿದ್ದಾರೆ.</p>.<p>ಈ ಎಲ್ಲಾ ವಿದ್ಯಮಾನಗಳ ನಡುವೆ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ (ಎನ್ಸಿ) ಭಾನುವಾರ ತುರ್ತು ಸಭೆ ನಡೆಸಿ ಚರ್ಚಿಸಿದೆ.</p>.<p>‘ಒಲಿ ಅವರು ದೇಶದಲ್ಲಿ ನಿರಂಕುಶ ಆಡಳಿತ ಹೇರಲು ಮುಂದಾಗಿದ್ದಾರೆ’ ಎಂದು ಎನ್ಸಿ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೆವುಬಾ ಅವರು ಇತ್ತೀಚೆಗೆ ಕಿಡಿಕಾರಿದ್ದರು.</p>.<p><strong>ಬಿಕ್ಕಟ್ಟಿನ ಹಿನ್ನೆಲೆ</strong></p>.<p>ಒಲಿ ಆಡಳಿತದ ಬಗ್ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಪ್ರಚಂಡ ಹಾಗೂ ಮಾಧವ ನೇಪಾಳ್ ಬಣದವರು ಒಲಿ ಅವರ ಮೇಲೆ ಒತ್ತಡ ಹೇರುತ್ತಿದ್ದರು.</p>.<p>ನವೆಂಬರ್ 13ರಂದು ನಡೆದಿದ್ದ ಸಚಿವಾಲಯದ ಸಭೆಯ ಮುಂದೆ 19 ಪುಟಗಳ ವರದಿಯೊಂದನ್ನು ಇಟ್ಟಿದ್ದ ಪ್ರಚಂಡ, ‘ಒಲಿ ಅವರು ಸರ್ಕಾರ ಹಾಗೂ ಪಕ್ಷವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ವಿಫಲರಾಗಿದ್ದಾರೆ. ಹಲವು ಭ್ರಷ್ಟಾಚಾರಗಳಲ್ಲೂ ಭಾಗಿಯಾಗಿದ್ದಾರೆ’ ಎಂದು ದೂರಿದ್ದರು.</p>.<p>ಇದನ್ನು ವಿರೋಧಿಸಿದ್ದ ಒಲಿ, ತಮ್ಮ ಮೇಲಿನ ಆರೋಪವನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಅವರು 38 ಪುಟಗಳ ವರದಿಯೊಂದನ್ನು ಸಭೆಯ ಮುಂದಿಟ್ಟಿದ್ದರು.</p>.<p>ದೇಶದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಾಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ನೇಪಾಳ ಸಂಸತ್ನ ಕೆಳಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.</p>.<p>ಭಾರತದ ಜೊತೆಗಿನ ವಿವಾದಿತ ಗಡಿಯಲ್ಲಿರುವ ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧೂರಾ ಪ್ರದೇಶಗಳು ತನ್ನದೆಂದು ಪ್ರತಿಪಾದಿಸಿದ್ದ ನೇಪಾಳ, ಮಾರ್ಪಡಿಸಿದ ಭೂಪಟದಲ್ಲಿ ಈ ಪ್ರದೇಶಗಳನ್ನೂ ಸೇರಿಸಿತ್ತು.</p>.<p>ಈ ನಿರ್ಧಾರವನ್ನು ಸಹಿಸದ ಕೆಲವರು ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಒಲಿ ಅವರು ಈ ವರ್ಷದ ಜೂನ್ನಲ್ಲಿ ಹೇಳಿದ್ದರು. ಬಳಿಕ ಪಕ್ಷದೊಳಗೆ ಸಂಘರ್ಷ ಹೆಚ್ಚಾಗಿ ಒಲಿ ಹಾಗೂ ಪ್ರಚಂಡ ಬಣಗಳಾಗಿ ಹೋಳಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>