ಇಸ್ಲಾಮಾಬಾದ್: ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಅದು ಪರಮಾಣು ಯುದ್ಧವಾಗಲಿದೆ. ಅದು ಸಾಂಪ್ರದಾಯಕ ಯುದ್ಧವಾಗಿರುವುದಿಲ್ಲ. ಅಲ್ಲದೇ, ಅದೇ ಕೊನೆಯ ಯುದ್ಧವೂ ಆಗಲಿದೆ ಎಂದು ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಅವರು ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡುತ್ತಿದ್ದ ಸಂದರ್ಶನದ ವೇಳೆ ರಶೀದ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಬಳಿ ಅತ್ಯಂತ ನಿಖರ, ಸಮರ್ಥ, ಸಣ್ಣ ಪರಮಾಣು ಶಸ್ತ್ರಾಸ್ತ್ರಗಳಿವೆ. ಅವು ಮುಸ್ಲೀಮರಿಗೆ ತೊಂದರೆಯಾಗದಂತೆ ಅಸ್ಸಾಂನ ವರೆಗೆ ದಾಳಿ ಮಾಡಬಹುದಾದ ಶಕ್ತಿ ಹೊಂದಿವೆ ಎಂದು ರಶೀದ್ ಹೇಳಿದ್ದಾರೆ.
Sheikh Rasheed and his discoveries. This time he's found a scientist who made a precision kafir bomb for India. pic.twitter.com/uozTBHPLM2