ಆರ್ಥಿಕ ವಿನಾಶದಿಂದ ದೇಶವನ್ನು ರಕ್ಷಿಸುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ದೇಶದ ವಿವಿಧೆಡೆಯಿಂದ ಬಸ್ಗಳು, ರೈಲುಗಳು ಮತ್ತು ಟ್ರಕ್ಗಳಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರು ಅಧ್ಯಕ್ಷರಮನೆಗೆ ನುಗ್ಗಿದರು. ಈ ಬಗ್ಗೆ ಮೊದಲೇ ಅರಿತಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ ಅಧಿಕೃತ ನಿವಾಸ ಬಿಟ್ಟು ಶುಕ್ರವಾರವೇ ಪಲಾಯನ ಮಾಡಿದ್ದಾರೆ.