<p><strong>ಕೀವ್: ರ</strong>ಷ್ಯಾ ಬೆಂಬಲಿತಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಪ್ರಾಂತ್ಯ ಡೊನೆಟ್ಸ್ಕ್ ಮೇಲೆ ಉಕ್ರೇನ್ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ ಮರಿಯುಪೋಲ್ನ ಅಜೋವ್ಸ್ಟಾಲ್ ಉಕ್ಕಿಸ್ಥಾವರದಲ್ಲಿ ರಷ್ಯಾ ಪಡೆಗಳು ಬಂಧಿಸಿದ್ದ 53 ಮಂದಿ ಉಕ್ರೇನ್ ಯುದ್ಧ ಕೈದಿಗಳು ಹತರಾಗಿದ್ದಾರೆ.</p>.<p>ಆದರೆ, ಉಕ್ರೇನ್ ಸೇನೆಯು ‘ಇದು ರಷ್ಯಾ ಸೇನೆ ನಡೆಸಿರುವ ಶೆಲ್ ದಾಳಿ. ಯುದ್ಧ ಕೈದಿಗಳಿಗೆ ನೀಡಿರುವ ಚಿತ್ರಹಿಂಸೆಯ ಸಾಕ್ಷ್ಯಗಳನ್ನು ನಾಶಪಡಿಸಲು ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದೆ.</p>.<p>ಒಲೆನಿವ್ಕಾದಲ್ಲಿ ಯುದ್ಧ ಕೈದಿಗಳನ್ನು ಇರಿಸಲಾಗಿದ್ದ ಕಾರಾಗೃಹದ ಮೇಲೆ ಹಿಮಾರ್ಸ್ ಬಹು ಕ್ಷಿಪಣಿಗಳ ದಾಳಿಯಾಗಿದೆ. ಸುಮಾರು 130 ಮಂದಿ ಉಕ್ರೇನ್ ಯುದ್ಧ ಕೈದಿಗಳು ಗಾಯಗೊಂಡಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಐಗೋರ್ ಕೊನಶೆಂಕೊವ್ ಶುಕ್ರವಾರ ತಿಳಿಸಿದ್ದಾರೆ.</p>.<p>‘ಇದೊಂದು ಮೂರ್ಖತನದ ಪ್ರಚೋದನೆ. ಉಕ್ರೇನ್ ಸೈನಿಕರ ಶರಣಾಗತಿಗೆ ತಣ್ಣೀರೆರೆಚುವ ಉದ್ದೇಶ ಈ ದಾಳಿಯ ಹಿಂದಿದೆ. ಶೆಲ್ ದಾಳಿಯಲ್ಲಿ ಬಂದೀಖಾನೆಯ ಎಂಟು ಸಿಬ್ಬಂದಿಯೂ ಗಾಯಗೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೀವ್: ರ</strong>ಷ್ಯಾ ಬೆಂಬಲಿತಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಪ್ರಾಂತ್ಯ ಡೊನೆಟ್ಸ್ಕ್ ಮೇಲೆ ಉಕ್ರೇನ್ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ ಮರಿಯುಪೋಲ್ನ ಅಜೋವ್ಸ್ಟಾಲ್ ಉಕ್ಕಿಸ್ಥಾವರದಲ್ಲಿ ರಷ್ಯಾ ಪಡೆಗಳು ಬಂಧಿಸಿದ್ದ 53 ಮಂದಿ ಉಕ್ರೇನ್ ಯುದ್ಧ ಕೈದಿಗಳು ಹತರಾಗಿದ್ದಾರೆ.</p>.<p>ಆದರೆ, ಉಕ್ರೇನ್ ಸೇನೆಯು ‘ಇದು ರಷ್ಯಾ ಸೇನೆ ನಡೆಸಿರುವ ಶೆಲ್ ದಾಳಿ. ಯುದ್ಧ ಕೈದಿಗಳಿಗೆ ನೀಡಿರುವ ಚಿತ್ರಹಿಂಸೆಯ ಸಾಕ್ಷ್ಯಗಳನ್ನು ನಾಶಪಡಿಸಲು ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದೆ.</p>.<p>ಒಲೆನಿವ್ಕಾದಲ್ಲಿ ಯುದ್ಧ ಕೈದಿಗಳನ್ನು ಇರಿಸಲಾಗಿದ್ದ ಕಾರಾಗೃಹದ ಮೇಲೆ ಹಿಮಾರ್ಸ್ ಬಹು ಕ್ಷಿಪಣಿಗಳ ದಾಳಿಯಾಗಿದೆ. ಸುಮಾರು 130 ಮಂದಿ ಉಕ್ರೇನ್ ಯುದ್ಧ ಕೈದಿಗಳು ಗಾಯಗೊಂಡಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಐಗೋರ್ ಕೊನಶೆಂಕೊವ್ ಶುಕ್ರವಾರ ತಿಳಿಸಿದ್ದಾರೆ.</p>.<p>‘ಇದೊಂದು ಮೂರ್ಖತನದ ಪ್ರಚೋದನೆ. ಉಕ್ರೇನ್ ಸೈನಿಕರ ಶರಣಾಗತಿಗೆ ತಣ್ಣೀರೆರೆಚುವ ಉದ್ದೇಶ ಈ ದಾಳಿಯ ಹಿಂದಿದೆ. ಶೆಲ್ ದಾಳಿಯಲ್ಲಿ ಬಂದೀಖಾನೆಯ ಎಂಟು ಸಿಬ್ಬಂದಿಯೂ ಗಾಯಗೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>