ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಿಗಳ ಆಡಳಿತವಿದ್ದಾಗಲೂ ಕಾಬೂಲ್‌ನಲ್ಲೇ ಭೂಗತವಾಗಿದ್ದೆ: ತಾಲಿಬಾನ್‌ ವಕ್ತಾರ

Last Updated 12 ಸೆಪ್ಟೆಂಬರ್ 2021, 16:41 IST
ಅಕ್ಷರ ಗಾತ್ರ

ಕಾಬೂಲ್:‌ಅಫ್ಗಾನಿಸ್ತಾನದ ಆಡಳಿತವನ್ನುವಶಕ್ಕೆ ಪಡೆದುಕೊಂಡ ಬಳಿಕ ಇದೇ ಮೊದಲಬಾರಿಗೆ ಮಾಧ್ಯಮದವರೆದುರು ಕಾಣಿಸಿಕೊಂಡಿರುವ ತಾಲಿಬಾನ್‌ ವಕ್ತಾರಜಬೀವುಲ್ಲಾ ಮುಜಾಹಿದ್‌, ವಿರೋಧಿಗಳ ಆಡಳಿತವಿದ್ದಾಗಲೂದೇಶದಲ್ಲೇ ಭೂಗತವಾಗಿದ್ದೆ ಎಂದು ಹೇಳಿಕೊಂಡಿದ್ದಾನೆ.

ʼಅವರು (ಯುಎಸ್‌ ಮತ್ತು ಅಫ್ಗಾನಿಸ್ತಾನ ರಾಷ್ಟ್ರೀಯ ಪಡೆಗಳು)ನನ್ನನ್ನು ಹಿಡಿಯಲು ನಡೆಸಿದ ಸಾಕಷ್ಟು ದಾಳಿ ವೇಳೆ ತಪ್ಪಿಸಿಕೊಂಡಿದ್ದೆ. ನಾನು ನಿಜವಾಗಿಯೂ ಬದುಕಿಲ್ಲ ಎಂದು ಅವರು ಭಾವಿಸಿದ್ದರುʼ ಎಂದು ಮುಜಾಹಿದ್ ಸಂದರ್ಶನದಲ್ಲಿ ಹೇಳಿರುವುದಾಗಿ‌ ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆ ವರದಿ ಮಾಡಿದೆ.

ಮುಂದುವರಿದು, ವಿರೋಧಿಗಳ ಕಣ್ಗಾವಲಿದ್ದರೂ ತಾನು ಅಫ್ಗಾನಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ಯಶಸ್ವಿಯಾಗಿದ್ದೆ ಎಂದು43 ವರ್ಷದ ಮುಜಾಹಿದ್‌‌ ಹೇಳಿದ್ದಾನೆ.

ʼಬಹಳ ಕಾಲ ಕಾಬೂಲ್‌ನಲ್ಲೇ ಇದ್ದೆ. ವೈರಿಗಳ ಕಣ್ಗಾವಲಿದ್ದರೂ ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದೆ. ತಾಲಿಬಾನ್‌ ಚಟುವಟಿಕೆಗಳ ಪ್ರತಿಯೊಂದು ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದೆ. ಇದು ನಮ್ಮ ವಿರೋಧಿಗಳಿಗೆ ಗೊಂದಲ ಉಂಟುಮಾಡಿತ್ತುʼ ಎಂದೂ ವಿವರಿಸಿದ್ದಾನೆ.

ʼನನ್ನ ಬಗ್ಗೆ ಮಾಹಿತಿ ಪಡೆಯಲುಯುಎಸ್‌ ಪಡೆಗಳು ಸ್ಥಳೀಯರಿಗೆ ಹಣ ನೀಡುತ್ತಿದ್ದವು. ನಾನು ಮೊದಲೇ ಹೇಳಿದಂತೆ ನನ್ನನ್ನು ಹಿಡಿಯಲು ಗುಪ್ತಚರ ಮಾಹಿತಿ ಆಧರಿಸಿ ಸಾಕಷ್ಟು ಸಲ ದಾಳಿ ನಡೆಸಲಾಗಿತ್ತುʼ ಎಂದಿದ್ದಾನೆ. ಮುಂದುವರಿದು, ʼಆದಾಗ್ಯೂ, ನಾನು ಅಫ್ಗಾನಿಸ್ತಾನದಿಂದ ಪಲಾಯನ ಅಥವಾಪಲಾಯನ ಮಾಡುವ ಪ್ರಯತ್ನವನ್ನೂ ಮಾಡಲಿಲ್ಲ.ಆ ರೀತಿಯಆಲೋಚನೆಯನ್ನೂ ಮಾಡಲಿಲ್ಲʼ ಎಂದು ಹೇಳಿಕೊಂಡಿದ್ದಾನೆ.

ಪಕ್ತಿಯಾ ಪ್ರಾಂತ್ಯದಗಾರ್ದೆಜ್‌ ಜಿಲ್ಲೆಯಲ್ಲಿ1978ರಲ್ಲಿ ಜನಿಸಿದ ಮುಜಾಹಿದ್‌, ಈಶಾನ್ಯ ಪಾಕಿಸ್ತಾನದಲ್ಲಿರುವ ಹಕ್ಕಾನಿಯಾ ಸೆಮಿನರಿಯಲ್ಲಿ ಇಸ್ಲಾಮಿಕ್‌ ನ್ಯಾಯಶಾಸ್ತ್ರಓದಿಕೊಂಡಿರುವುದಾಗಿಯೂ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT