<p><strong>ಹಾಂಕಾಂಗ್:</strong> ತನ್ನ ಸಹೋದ್ಯೋಗಿಯೊಂದಿಗಿದ್ದ ಮನಸ್ತಾಪದ ಕಾರಣ, 25 ಮಕ್ಕಳಿಗೆ ವಿಷವುಣಿಸಿ, ಒಬ್ಬರನ್ನು ಕೊಂದ ಆರೋಪದ ಮೇಲೆ ಮಧ್ಯ ಕಿಂಡನ್ಗಾರ್ಟನ್ ಶಿಕ್ಷಕಿಯೊಬ್ಬರಿಗೆ ಚೀನಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.</p>.<p>ಶಿಕ್ಷಕಿ ವಾಂಗ್ ಯುನ್ ಮರದಂಡನೆ ಶಿಕ್ಷೆಗೆ ಗುರಿಯಾದವರು. ಅವರು ಮಾ.27, 2019ರಂದು ಶಾಲೆಯಲ್ಲಿ ಮಕ್ಕಳು ಸೇವಿಸುವ ಗಂಜಿಗೆ (ಉಪಹಾರಕ್ಕೆ) ನೈಟ್ರೇಟ್ ರಾಸಾಯನಿಕ ಬೆರೆಸಿದ್ದರು ಎಂದು ವಿಚಾರಣೆ ನಡೆಸಿದ ಹೆನಾನ್ ಪ್ರಾಂತ್ಯದ ಜಿಯೌಜೌ ಇಂಟರ್ಮೀಡಿಯಟ್ ಪೀಪಲ್ಸ್ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.</p>.<p>ವಿದ್ಯಾರ್ಥಿಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ವಾಂಗ್ಯುನ್, ತನ್ನ ಸಹಶಿಕ್ಷಕರೊಬ್ಬರೊಂದಿಗೆಮನಸ್ತಾಪ ಹೊಂದಿದ್ದ ಕಾರಣ, ಇವರು ತನ್ನ ಪ್ರತಿಸ್ಪರ್ಧಿ ಶಾಲೆಯ ಮಕ್ಕಳಿಗೆ ವಿಷವುಣಿಸಿದ್ದರು ಎಂದು ನ್ಯಾಯಾಲಯ ಹೇಳಿದೆ.</p>.<p>ನೈಟ್ರೇಟ್ ಬೆರೆಸಿದ ಗಂಜಿ ಸೇವಿಸಿದ ನಂತರ ಹಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ಮಗು ಸಾವನ್ನಪ್ಪಿ,ಉಳಿದಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಂಕಾಂಗ್:</strong> ತನ್ನ ಸಹೋದ್ಯೋಗಿಯೊಂದಿಗಿದ್ದ ಮನಸ್ತಾಪದ ಕಾರಣ, 25 ಮಕ್ಕಳಿಗೆ ವಿಷವುಣಿಸಿ, ಒಬ್ಬರನ್ನು ಕೊಂದ ಆರೋಪದ ಮೇಲೆ ಮಧ್ಯ ಕಿಂಡನ್ಗಾರ್ಟನ್ ಶಿಕ್ಷಕಿಯೊಬ್ಬರಿಗೆ ಚೀನಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.</p>.<p>ಶಿಕ್ಷಕಿ ವಾಂಗ್ ಯುನ್ ಮರದಂಡನೆ ಶಿಕ್ಷೆಗೆ ಗುರಿಯಾದವರು. ಅವರು ಮಾ.27, 2019ರಂದು ಶಾಲೆಯಲ್ಲಿ ಮಕ್ಕಳು ಸೇವಿಸುವ ಗಂಜಿಗೆ (ಉಪಹಾರಕ್ಕೆ) ನೈಟ್ರೇಟ್ ರಾಸಾಯನಿಕ ಬೆರೆಸಿದ್ದರು ಎಂದು ವಿಚಾರಣೆ ನಡೆಸಿದ ಹೆನಾನ್ ಪ್ರಾಂತ್ಯದ ಜಿಯೌಜೌ ಇಂಟರ್ಮೀಡಿಯಟ್ ಪೀಪಲ್ಸ್ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.</p>.<p>ವಿದ್ಯಾರ್ಥಿಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ವಾಂಗ್ಯುನ್, ತನ್ನ ಸಹಶಿಕ್ಷಕರೊಬ್ಬರೊಂದಿಗೆಮನಸ್ತಾಪ ಹೊಂದಿದ್ದ ಕಾರಣ, ಇವರು ತನ್ನ ಪ್ರತಿಸ್ಪರ್ಧಿ ಶಾಲೆಯ ಮಕ್ಕಳಿಗೆ ವಿಷವುಣಿಸಿದ್ದರು ಎಂದು ನ್ಯಾಯಾಲಯ ಹೇಳಿದೆ.</p>.<p>ನೈಟ್ರೇಟ್ ಬೆರೆಸಿದ ಗಂಜಿ ಸೇವಿಸಿದ ನಂತರ ಹಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ಮಗು ಸಾವನ್ನಪ್ಪಿ,ಉಳಿದಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>